ಶ್ರೀನಿವಾಸಪುರ (ವಿಶ್ವ ಕನ್ನಡಿಗ ನ್ಯೂಸ್): ಶ್ರೀನಿವಾಸಪುರ ತಾಲೂಕಿಗೆ ಸಂಬಂದಿಸಿದಂತೆ ಗ್ರಾಮಗಳಾದ ಆರ್.ತಿಮ್ಮಸಂದ್ರ , ನಾಗದೇನಹಳ್ಳಿ , ಯೆಚ್ಚನಹಳ್ಳಿ , ಮಟ್ಟಕನ್ನಸಂದ್ರ , ಯಲ್ಲೂರು -2 , ತ್ಯಾಗತ್ತೂರು ಯದರೂರು , ನೆಲವಂಕಿ , ಕಶೆಟ್ಟಿಹಳ್ಳಿ , ಕೂರಿಗೇಪಲ್ಲಿ , ಪಾತೂರುಗಡ್ಡ , ಅಡ್ಡಗಲ್ 1 , ಮರಸನಪಲ್ಲಿ , ಅಡ್ಡಗಲ್ -2 ಒಟ್ಟು 14 ಗ್ರಾಮಗಳಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿಗಳಿಗೆ ಪ್ರಕಟಣೆಯನ್ನು ಹೊರಡಿಸಲಾಗಿದೆ ಎಂದು ತಹಶೀಲ್ದಾರ್ ಶರೀನ್ ತಾಜ್ ಗುರುವಾರ ಪ್ರತಿಕಾ ಪ್ರಕಟಣೆಗೆ ತಿಳಿಸಿದರು. ಖಾಸಗಿ ವ್ಯಕ್ತಿಗಳು , ವಿಕಲಚೇತನರು , ತೃತೀಯ ಲಿಂಗಿಗಳು ದಿನಾಂಕ 4-9-23 ರ ಸಂಜೆ 5,30 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು ಅಂದು ರಜಾ ದಿನವಾದಲ್ಲಿ ನಂತರದ ಕಛೇರಿ ಕರ್ತವ್ಯ ದಿನದ ಸಂಜೆ 5:30 ಗಂಟೆರೊಳಗೆ ಅರ್ಜಿ ಸಲ್ಲಿಸಬಹುದು. ನಿಗದಿಪಡಿಸಿದ ಅವಧಿಯ ನಂತರ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದರು.
ಅರ್ಜಿ ನಮೂನೆ ಹಾಗೂ ಇತರೆ ಮಾಹಿತಿಯನ್ನು ಸಂಬಂಧಪಟ್ಟ ತಾಲೂಕು ಕಛೇರಿಯ ಆಹಾರ ಶಾಖೆಯಲ್ಲಿ ಅಥವಾ ಉಪನಿರ್ದೇಶಕರ ಕಛೇರಿ , ಆಹಾರ , ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಿಲ್ಲಾಡಳಿತ ಭವನ , ಕೋಲಾರ ಜಿಲ್ಲೆ ಇಲ್ಲಿ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.