ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಭಾರತ ಮಾತೆಗೆ ಜೈ…., ಎನ್ನುವ ವಾಕ್ಯದೊಂದಿಗೆ ಆಡಳಿತ ವರ್ಗ ಇನ್ನು ಎಲ್ಲಿಯೂ ಭಾಷಣ ಮಾಡಬೇಡಿ! ಏಕೆ ಗೊತ್ತೇನು? ಅದಕ್ಕಿರುವ ಕಿಂಚ್ಚತ್ತು ಯೋಗ್ಯತೆ ನಿಮಗಿಲ್ಲ. ಹೌದು! !!! ಜಾತಿ, ಧರ್ಮ ಪಂಗಡ,ಅಧಿಕಾರದ ಮದವೇರಿದ ನಿಮಗೆ ಭಾರತಾಂಬೆಯ ಮಗಳನ್ನು ಹಾಡಹಗಲೇ ನಗ್ನಗೊಳಿಸಿ ಅವಮಾನಗೊಳಿಸಿ ವಿವಸ್ತ್ರಗೊಳಿಸಿ ಭಾರತವನ್ನು ಬೆತ್ತಲುಗೊಳಿಸಿದ್ದೀರಿ ಆ ಮೆರವಣಿಗೆ ಮಾಡುವ ವೈಕ್ತಿಗಳು ಎಲ್ಲಿ ನನ್ನನ್ನು ಹಿಡಿ ಯುವರೋ ಎನ್ನುವ ಭಯ ಎನ್ನುವ ಅಂಶವೂ ಇಲ್ಲದೆ ರಾಜಾರೋಷವಾಗಿ ಮೆರವಣಿಗೆ ಯಲ್ಲಿ ಪಾಲ್ಗೊಂಡಿದ್ದಾನೆ ಎಂದರೆ ಇವರಿಗೆ ಅಭಯ ನೀಡುವವರು ಯಾರು ?
ಅರ್ಥ ಮಾಡಿಕೊಳ್ಳಿ ಇಲ್ಲಿ ಬೆತ್ತಲಾಗಿದ್ದು ಆ ಮಹಿಳೆಯಲ್ಲ, ಕುಕಿ ನಮುದಾಯವೂ ಅಲ್ಲ, ಮಣಿಪುರವೊ ಅದೂ ಅಲ್ಲ ಬದಲಾಗಿ ‘ ಭಾರತ’ …
ಮೇ 4 ರಂದೇ ಭಾರತ ನಗ್ನವಾಗಿತ್ತು 17 ರಂದಾಗಿದೆ ನಗ್ನ ಮೆರವಣಿಗೆ ನೆಡೆದದ್ದು.!
ಅಂತರ್ಜಾಲದಲ್ಲ ಅತ್ಯಂತ ವೇಗ ವಾಗಿ ಬೆಳೆಯುತ್ತಿರುವ ಭಾರತ ಎಷ್ಟು ಭದ್ರವಾಗಿ ನೈಜ ಮಾಹಿತಿಯನ್ನು ಮುಚ್ಚಿಡುತ್ತ ದೆ ನೋಡಿ. ಮಾತ್ರವಲ್ಲ ಮೇ 1 ರಂದು ಆರಂಭವಾದ ಎರಡು ಸಮುದಾಯಗಳ ನಡುವಿನ ಘರ್ಷಣೆಯನ್ನು ತಣಿಸಲು ಯತ್ನಿಸಬೇಕಿದ್ದ ರಾಜ್ಯ ಭಾಜಪ ಸರ್ಕಾರ ಇಂಟರ್ನೆಟ್ ನಿರ್ಭಂಧಿಸುತ್ತೆ (ಕೆಲವೊಮ್ಮೆ ಒಳ್ಳೆಯದೇ ) ಕಚ್ಚಾಟ ಹೆಚ್ಚಿಸುತ್ತೆ 150 – 200 ಪ್ರಾಣಗಳು ಈಗಾಗಲೇ ಹಾರಿ ಹೋಗಿದೆ ಎನ್ನುವುದು ( ಇನ್ನೆಷ್ಟು ಮಹಿಳೆಯರು, ವೃದ್ಧರು ಇರುವರೂ ತದಾ ಸಾವಿನ ಸಂಖ್ಯೆ ಗಾಯಾಳುಗಳ ಸಂಖ್ಯೆ ಎಷ್ಟಿದೆಯಂದು ನಾನರಿಯೇ.) ಕೇಂದ್ರ ಗೊತ್ತಿದ್ದರೂ ಪ್ರವಾಸ, ಪ್ರಚಾರದ ಅಮಲಿನಲ್ಲಿತ್ತು.
ಅಷ್ಟಕ್ಕೂ ಏನ್ ಮಾಡ್ತಿದೆ ಕೇಂದ್ರ?
ಪರಿಹಾರ, ಚರ್ಚೆ, ಕಲಾಪ, ಕಣ್ಣೀರು, ಸ್ವಾಂತನ.. ಇಲ್ಲಾ ಇಲ್ಲಾ ಇಲ್ಲಾ !!!
ಮತ್ತೆ ಇನ್ನೇನ್ ಮಾಡ್ತಿದೆ? ಅಧಿಕಾರಕ್ಕೆ ಹೊಂಚು ಹಾಕ್ತಿದೆ ಎಂದರೆ ತಪ್ಪಾಗಲಾರದು. ವಿದೇಶಕ್ಕೆ ಹೋಗಿ ಪ್ರಧಾನ ಮಂತ್ರಿ ಬಂದು ಕೇಳಿದ ಮೊದಲ ಪ್ರಶ್ನಿ ” ಭಾರತದಲ್ಲಿ ಏನಾಗ್ತಿದೆ” ಅಂತ. ಪ್ರಾಯಃ ಒಂದೇ ಕ್ಲಿಕ್ ಗೆ ಭಾರತದ ಚಿತ್ರಣವನ್ನು ತೋರಿಸುವ ಕಂಪ್ಯೂಟರ್ ವಿರೋಧ ಪಕ್ಷ ಹ್ಯಾಕ್ ಮಾಡಿತ್ತೊ ಏನೋ. ನಾಚಿಕೆ ಆಗಲ್ವ ಥೂ!!
ಇನ್ನೂಂದು ವಿಷಯವನ್ನು ಇಲ್ಲಿ ಗಮನಿಸಬೇಕು 56 ಇಂಚಿನ ಎದೆಗೆ ‘ ಮಣಿಪುರ’ ಎಂದೇಳಲು ಬರೊಬ್ಬರಿ 78 ದಿನಗಳು ಬೇಕಾಯಿತು ಎನ್ನುವುದೇ ವಿಪರ್ಯಾಸ. ಆ ಹೇಯ ಕೃತ್ಯದ ಅಪರಾಧಿಗಳಿಗೆ ಶಿಕ್ಷೆ ಆಗಲೇ ಬೇಕು ಎನ್ನುವ ನಾಯಕ ಅಲ್ಲಿನ ಸರ್ಕಾರವನ್ನು ಪ್ರಶ್ನಿಸಲಿಲ್ಲ ಎನ್ನುವುದರಲ್ಲೆ ಒಂದು ವಿಚಾರ ಸ್ಪಷ್ಟ. ಅವರಿಗೆ ಶಿಕ್ಷೆಯಾಗುತ್ತಿರುವುದು ಆ ನಡೆದ ಕೃತ್ಯಕ್ಕಲ್ಲ ಬದಲಾಗಿ ಆ ವಿಡಿಯೋ ವೈರಲ್ ಆಯ್ತು ಎಂದು!!
2002 ಕ್ಕೂ 2022 ಕ್ಕೂ ವೈತ್ಯಾಸವೇನು
ತನ್ನ ಕುಟುಂಬದ 16 ಜನರನ್ನು ತನ್ನ ನಗ್ನ ಅಕ್ಷಿಯಿಂದ ಕಂಡು ತಾನೂ ಅತ್ಯಾಚಾರಕ್ಕೆ ಒಳಗಾದ ಬಿಲ್ಕೀಸ್ ಪ್ರಕರಣ ಹಾಗೂ 2022 ರಲ್ಲಿ ತನ್ನ ಇಡೀ ಸಮುದಾಯದ ಮುಂದೆ ಹಾಡಹಗಲೇ 18 ವರ್ಷದ ಹುಡುಗಿಯನ್ನು ಅತ್ಯಾಚಾರ ಗೈದು 2 ಮಹಿಳೆಯರನ್ನು ಎಳೆಯುತ್ತಾ ಅಂಗ ಚೇಷ್ಟೆಯೊಂದಿಗೆ ಮರವಣಿಗೆ ನಡೆಸುತ್ತಾರೆ. ಮಾತ್ರವಲ್ಲ ಅಂದು ಗುಜರಾತ್ನಲ್ಲಿ ನಡೆದ ಅತ್ಯಾಚಾರಿಗಳನ್ನು ಸಾಚರೆಂದು ಕಳೆದ ಸ್ವಾಂತತ್ರ್ಯ ದಿನದಲ್ಲಿ ಬಿಡುಗಡೆಗೊಳಿಸಿದರು ಈ ಬಾರಿಯ ಬಿಡುಗಡೆ ಭಾಗ್ಯ ಇವರಿಗೆ ಅಗಿರಬಹುದು ಎನ್ನುವುದು ಅಲ್ಲಗಳೆಯುವಂತದಲ್ಲ.
ಆದರಿಂದಲೇ ಗುಜರಾತ್ ಹಾಗೂ ಮಣಿಪುರ ಕ್ಕೂ ಇರುವ ವೈತ್ಯಾಸ.
ಎದ್ದೇಳು ಭಾರತ
ನ್ಯಾಯ, ನೀತಿ, ಸಂವಿಧಾನ, ಶಾಂತಿ, ಇವೆಲ್ಲ ಈಗ ಭಾರತದಲ್ಲಿ ಅಧೂಗತಿಗೆ ತಲುಪಿದೆ ಎನ್ನುವುದು ಪ್ರತ್ಯೇಕ ಹೇಳಬೇಕಿಲ್ಲ. ಅಧಿಕಾರ ನಡೆನು ಸುವವರೆಲ್ಲ ಅಧಿಕಾರ ದಾಹಿಗಳೋ, ಮೋಹಿಗಳೋ ಅಲ್ಲ ಅಧಿಕಾರ ಕಾಮಿಗಳು ಇದಕ್ಕಿಂತ ಕೆಟ್ಟಪದ ನನಗೆ ಸಿಕ್ಕಲ್ಲಾ. ಇವರ ಅಧಿಕಾರದ ಉಳಿವಿಗೆ ದೇಶ ಕಾಯುವ ಸೈನಿಕ ನಿಂದ ಓರ್ವ ಸಾಮಾನ್ಯನವರೆಗೂ ಇವರಿಗೆ ಒಂದೇ ರೀತಿಯ ಮೀನುಗಳು. ಅದರಲ್ಲಿಯೂ ಕೆಳಜಾತಿಯ ಜೀವಕ್ಕೆ ಬೆಲೆಯೇ ಇಲ್ಲ. ಎಷ್ಟರವರೆಗೆ ಎಂದರೆ ಇದೇ ಮಣಿಪುರದಲ್ಲಿ ಬೇಲಿಯ ಮೇಲೆ ಕುಕಿ ಸಮುದಾಯದ ವೈಕ್ತಿ ಓರ್ವನನ್ನು ಶಿರಚ್ಚೆದನ ನಡೆಸಿ ತೂಗಿ ಹಾಕುತ್ತಾರೆ ಎಂದರೆ ಏನಿದು ? ಏನಿದರ ಅರ್ಥ?!! ಕ್ರೂರತೆಯು ಕೂಡ ತಲೆ ತಗ್ಗಿಸಿಕೊಳ್ಳುತ್ತಿದೆ. ಈ ಪಾಶವೀ ಕೃತ್ಯ ಎನ್ನುವುದು ತಾಂಡವಾಡುತ್ತಿದೆ. ಆದರಿಂದ ಮನುಷ್ಯತ್ವದ ಸತ್ವ ಇನ್ನೂ ಸಾಯದ ಒಂದು ಪಡೆ ಸಜ್ಜಾಗಬೇಕು. ” ನಾನು ನಗ್ನಳಾದ್ದೇನೆ ಯಾರಾದರೂ ನನಗೆ ಉಡಿಸಿರಿ ” ಎಂದು ಭಾರತಾಂಭೆ ಕೆಂಜುತ್ತಿದ್ದಾಳೆ. ಮನಸಾಕ್ಷಿ ಮರೆಯದ ಪ್ರಜಾಪ್ರಭುತ್ವ ಪೌರರು ಎದ್ದೇಳಬೇಕು. ಇಲ್ಲವಾದರೆ ಕೆಲವು ಮುಗ್ದ ಮನಸ್ಸಿನ ಹೆಣದ ವೀಡಿಯೋ ತುಣುಕಿಗೆ ಸಾಕ್ಷಿಯಾಗಬೇಕಾದೀತು ಎಚ್ಚರ…
✒️ಹಿಸಾನ್ ಇಹ್ಸಾನಿ ಕಡಬಗೆರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.