(www.vknews.in) ಮದ್ಯಪಾನ ಮಾಡಲು ಹೆತ್ತ ತಂದೆ ತನಗೆ ಬಂದ ವೃದ್ಧಾಪ್ಯ ವೇತನದ ಹಣ ಕೂಡಲಿಲ್ಲವೆಂದು ತಂದೆ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಅಪರಾಧಿ ಪುತ್ರನಿಗೆ 6 ವರ್ಷ ಕಾರಾಗೃಹ ಶಿಕ್ಷೆ ಹಾಗೂ ಹತ್ತು ಸಾವಿರ ರೂ. ದಂಡ ಹಾಗೂ ದಂಡ ಕಟ್ಟಲು ತಪ್ಪಿದಲ್ಲಿ 3 ತಿಂಗಳ ಹೆಚ್ಚುವರಿ ಶಿಕ್ಷೆ ವಿಧಿಸಿ ದಾವಣಗೆರೆಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದ ಎಂ. ನರಸಿಂಹ 35 ವರ್ಷ ಶಿಕ್ಷೆಗೆ ಗುರಿಯಾದ ಅಪರಾಧಿ. ಕೂಲಿ ಕೆಲಸ ಮಾಡಿಕೊಂಡಿದ್ದ ನರಸಿಂಹನಿಗೆ ಅತಿಯಾಗಿ ಕುಡಿಯುವ ಚಟವಿತ್ತು. ಅದಕ್ಕಾಗಿ ತನ್ನ ತಂದೆಗೆ ಬರುತ್ತಿದ ವೃದ್ಯಾಪ್ಯ ವೇತನದ ಹಣ ಕೇಳಿದ ಪಾಪಿ ಮಗ ಕೊಡಲಿಲ್ಲವೆಂಬ ಕಾರಣಕ್ಕೆ ಆರೋಪಿ ನರಸಿಂಹನು ಕಳೆದ ವರ್ಷ 2022ರ ಏ.7ರಂದು ರಾತ್ರಿ ಸುಮಾರು 10. 30ರ ನಂತರ ಮದ್ಯಪಾನದ ನಶೆಯಲ್ಲಿ ನೀನು ಹೆತ್ತ ಮಗನಿಗೆ ಹಣ ಕೊಡಲಿಲ್ಲ ನೀನು ಒಬ್ಬ ತಂದೆಯ ನೀನು ಬದುಕಿರಬಾರದು ಎಂದು 65 ವರ್ಷದ ವಯಸ್ಸಾದ ತಂದೆ ಮಂಜಪ್ಪನ ತಲೆಗೆ ಕಲ್ಲು ಎತ್ತಿ ಹಾಕಿ, ಕೊಲೆ ಮಾಡಿದ್ದನು. ಕೊಲೆ ಪ್ರಕರಣ ದಾಖಲಿಸಿಕೊಂಡ ಹೊನ್ನಾಳಿ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ, 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶ ವಿಜಯಾನಂದ ಅಪರಾಧಿ ನರಸಿಂಹಪ್ಪನ ವಿರುದ್ಧದ ಆರೋಪ ಸಾಕ್ಷಾಧಾರ ಸಾಬೀತಾಗಿದ್ದರಿಂದ ಶಿಕ್ಷೆಯ ತೀರ್ಪು ಪ್ರಕಟಿಸಿದ್ದಾರೆ.“`
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.