(www.vknews.in)KMJ SჄS SSF ನರಿಮೊಗರು ಶಾಖೆ ವತಿಯಿಂದ ನರಿಮೊಗರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಶಾಲಾ ಆವರಣದಲ್ಲಿ ಆವರಿಸಿದ ಹುಲ್ಲನ್ನು ಮೆಷಿನ್ ಮೂಲಕ ತೆಗೆದು ಹಾಕಲಾಯಿತು.ಶಾಲಾ ಹಂಚಿನ ಭಾಗಕ್ಕೆ ವಾಲಿಕೊಂಡಿದ್ದ ಮರದ ಕೊಂಬೆಗಳನ್ನು ಕಡಿದು ಹಾಕಲಾಯಿತು . ಅದಲ್ಲದೆ ಎಸ್ಡಿಎಂಸಿ ಮತ್ತು ದಾನಿಗಳ ಸಹಾಯದಿಂದ ಶಾಲಾ ಆವರಣದಲ್ಲಿ ನೆಟ್ಟಿರುವ 200 ಅಡಿಕೆ ಗಿಡಗಳ ಬುಡವನ್ನು ಬಿಡಿಸಿ ,ಶಾಲಾ ಅಧ್ಯಕ್ಷರ ವತಿಯಿಂದ ಕೊಡಮಾಡಿದ ಗೊಬ್ಬರವನ್ನು ಮತ್ತು ಕಡಿದ ಗಿಡಗಳ ಸೊಪ್ಪುಗಳನ್ನು ಗಿಡಗಳ ಬುಡಕ್ಕೆ ಹಾಕಲಾಯಿತು. ಮುಂಜಾನೆ ಏಳು ಗಂಟೆಗೆ ಪ್ರಾರಂಭವಾದ ಶ್ರಮದಾನಕ್ಕೆ KMJ SჄS SSF ನ ಕಾರ್ಯಕರ್ತರು ಪಾಳ್ಗೊಂಡು ಉತ್ತಮ ಕೆಲಸದ ಮೂಲಕ ಮಾದರಿಯಾದರು ಶಾಲಾ SDMC ಸದಸ್ಯರಾದ ಸಲೀಂ ಮಾಯಾಂಗಳ ಹಾಗೂ ಮಾಜಿ ಅಧ್ಯಕ್ಷರಾದ ಉಸ್ಮಾನ್ ನೆಕ್ಕಿಲ್ ಶ್ರಮದಾನದಲ್ಲಿ ಕಾರ್ಯಕರ್ತರ ಜೊತೆಗೂಡಿದರು.ಶಾಲಾ SDMC ಅಧ್ಯಕ್ಷರಾದ ಕೃಷ್ಣ ರಾಜ್ ಮತ್ತು ಶಾಲಾ ಮುಖ್ಯೋಪಾಧ್ಯಾಯರು ಕಾರ್ಯಕರ್ತರ ಕೆಲಸ ಕಾರ್ಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ನಿಮ್ಮ ಸಹಕಾರವನ್ನು ಮುಂದೆಯೂ ಬಯಸುತ್ತೇವೆ ಎಂದು ಶುಭ ಹಾರೈಸಿದರು ಈ ಕಾರ್ಯಕ್ರಮದಲ್ಲಿ SDMC ಸದಸ್ಯರಾದ ಮಮ್ಮುಞಿ,KMJ ನರಿಮೊಗರು ಶಾಖೆಯ ಕೋಶಾಧಿಕಾರಿ ಮುಹಮ್ಮದ್ ದರ್ಖಾಸ್, SჄS ನರಿಮೊಗರು ಶಾಖೆಯ ಅಧ್ಯಕ್ಷರಾದ ಅಬೂಬಕರ್ ಪ್ರಧಾನ ಕಾರ್ಯದರ್ಶಿ ಉಮ್ಮರ್ ಕೆ.ಪಿ ,ಅಬ್ದುಲ್ ರಹಮಾನ್ ಕೆ. SSF ಪುತ್ತೂರು ಸೆಕ್ಟರ್ ಅಧ್ಯಕ್ಷರು ಹಾರಿಸ್ ಸಖಾಫಿ,SSF ನರಿಮೊಗರು ಶಾಖೆಯ ಪ್ರಧಾನ ಕಾರ್ಯದರ್ಶಿ ಅಹ್ಮದ್ ಇರ್ಷಾದ್,ನಾಸಿರ್ ನೆಕ್ಕಿಲ್, ಇರ್ಫಾನ್ ಸಿ.ಕೆ,ಇದ್ರೀಸ್ ಮದೀನಿ,ಮುಸ್ತಾಕ್ ಹಿಶಾಮಿ ಪಾಳ್ಗೊಂಡಿದ್ದರು ಕೊನೆಯಲ್ಲಿ SჄS ನರಿಮೊಗರು ಶಾಖೆಯ ಪ್ರಧಾನ ಕಾರ್ಯದರ್ಶಿ ಉಮ್ಮರ್ ಅವರು ಸಹಾಯ ಸಹಕಾರ ನೀಡಿದ SDMC ಮತ್ತು ಮುಖ್ಯೋಪಾಧ್ಯಾಯರು ಹಾಗೂ ಶ್ರಮದಾನ ಮಾಡಿದ KMJ SჄS SSF ಕಾರ್ಯಕರ್ತರಿಗೆ ಧನ್ಯವಾದಗಳನ್ನು ತಿಳಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.