ಕಾಪು(ವಿಶ್ವಕನ್ನಡಿಗ ನ್ಯೂಸ್): ಆಗಷ್ಟ್ 7 ಸೋಮವಾರ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಇದರ ಅಧೀನದಲ್ಲಿರುವ ಅಲ್-ಇಹ್ಸಾನ್ ದಅವಾ ಕಾಲೇಜು ವತಿಯಿಂದ ರಾಷ್ಟ್ರೀಯ ವಿಚಾರ ಸಂಕೀರ್ಣದಲ್ಲಿ ಪ್ರಭಂದ ಮಂಡಿಸಿದ ದಅವಾ ಕಾಲೇಜು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
ಬೆಂಗಳೂರಿನ ಕೆ.ಎಲ್.ಇ ಕಾನೂನು ಕಾಲೇಜು ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನ ಸಂಶೋಧನಾ ಪ್ರಭಂದಗಳನ್ನು ಇಸ್ಲಾಂ ಮತ್ತು ಲಿಂಗ ತಾರತಮ್ಯ, ಉಗ್ರವಾದ ಎದುರಿಸುವಲ್ಲಿ ಇಸ್ಲಾಮಿನ ಪಾತ್ರ, ಮಲಬಾರ್ ವಿಧ್ವಾಂಸರ ರಾಜಕೀಯ ವಿಧಾನ, ಇಸ್ಲಾಂ ಮತ್ತು ಜಾತ್ಯತೀತತೆ, ಭಾರತೀಯ ಮುಸಲ್ಮಾನರ ಸಮಸ್ಯೆಗಳಿಗೆ ಸಂವಿಧಾನಾತ್ಮಕ ಪರಿಹಾರ ಎಂಬೀ ವಿಷಯಗಳ ಕುರಿತು ಪ್ರಭಂಧ ಮಂಡಿಸಿದ ಅಲ್-ಇಹ್ಸಾನ್ ದಅವಾ ಕಾಲೇಜು ವಿದ್ಯಾರ್ಥಿಗಳಾದ ಅಬ್ದುಲ್ ರಹ್ಮಾನ್ ಹಿಶಾಂ ಬಜ್ಪೆ, ಅಹ್ಮದ್ ಸಾಬೀತ್ ಕೃಷ್ಣಾಪುರ, ಮೊಹಮ್ಮದ್ ನಿಹಾದ್ ದಾವಣಗೆರೆ, ಅಬ್ದುಲ್ ರಾಫೀಹ್ ಪುತ್ತೂರು, ಅಹ್ಮದ್ ಅಫ್ಳಳ್ ಜಾರಿಗೆಬೈಲ್ರವರಿಗೆ ಅಲ್-ಇಹ್ಸಾನ್ ದಅವಾ ಕಾಲೇಜು ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮರ್ಕಝ್ ತಅಲೀಮಿಲ್ ಇಹ್ಸಾನ್ ವ್ಯವಸ್ಥಪಕಾರಾಗಿರುವ ಮುಸ್ತಫ ಸಅದಿ, ಸಹ ವ್ಯವಸ್ಥಾಪಕ ಸಿದ್ದೀಖ್ ಸಅದಿ, ಪ್ರ.ಕಾರ್ಯದರ್ಶಿ ವೈ.ಬಿ.ಸಿ ಬಶೀರ್ ಅಲಿ, ಅಲ್-ಇಹ್ಸಾನ್ ದಅವಾ ಕಾಲೇಜು ಪ್ರಾಂಶುಪಾಲ ಸ್ವಾಬಿರ್ ಸಅದಿ, ಮುದರ್ರಿಸರಾದ ರಶೀದ್ ಸಅದಿ, ಹಮೀದ್ ಅಹ್ಸನಿ, ಉನೈಸ್ ಅಹ್ಸನಿ, ಮಸ್ರೂರ್ ಸುರೈಜಿ, ಬಾತೀಷ್ ಸಖಾಫಿ, ಮಾಸ್ಟರ್ ಅನೀಸ್ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.