ಯುಎಈ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಇದರ ಅತ್ಯುನ್ನತ ಘಟಕವಾದ ಅಂತರಾಷ್ಟ್ರೀಯ ಸಮಿತಿಯಿಂದ ಭಾರತದ ಸ್ವಾತಂತ್ರ್ಯೋತ್ಸವವನ್ನು ಫ್ರೀಡಂ-76 ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಆಚರಿಸಲಾಯಿತು.
ಆಗಸ್ಟ್ 15ರಂದು ಭಾರತದ ಸಮಯ ರಾತ್ರಿ 09:30ಕ್ಕೆ “ವೈವಿಧ್ಯತೆ ಭಾರತದ ವೈಶಿಷ್ಟತೆ” ಎಂಬ ಘೋಷ ವಾಕ್ಯ ದೊಂದಿಗೆ ಝೂಮ್ ನಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಯಿತು.
ಅಂತರಾಷ್ಟ್ರೀಯ ಸಮಿತಿ ಶಿಕ್ಷಣ ಇಲಾಖೆಯ ಅಧ್ಯಕ್ಷರಾದ ಹಮೀದ್ ಸಅದಿ ಈಶ್ವರಮಂಗಳ ರವರ ದುಆದೊಂದಿಗೆ ಆರಂಭಿಸಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಿಪಿ ಯೂಸುಫ್ ಸಖಾಫಿ ಬೈತಾರ್ ರವರು ವಹಿಸಿದರು. ಮುಹಮ್ಮದ್ ನೌಮಾನ್ ಕಾಟಿಪಳ್ಳ ರವರು ರಾಷ್ಟ್ರ ಗೀತೆ ಹಾಡಿದ ಬಳಿಕ ಪ್ರಧಾನ ಕಾರ್ಯದರ್ಶಿ PMH ಹಮೀದ್ ಈಶ್ವರಮಂಗಳ ರವರು ಸ್ವಾಗತ ಭಾಷಣ ಮಾಡಿ ಕರ್ನಾಟಕ ರಾಜ್ಯ SYS ದಅ್’ವಾ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಕನ್ಯಾನ ರವರು ಉದ್ಘಾಟನೆ ಮಾಡಿದರು.
ನಾವು ಹುಟ್ಟಿ ಬೆಳೆದ ಈ ದೇಶವನ್ನು ಸ್ವಾತಂತ್ರ್ಯ ಭಾರತವನ್ನಾಗಿಸಲು ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗ ಹಾಗೂ ಅವರ ಜೀವನ ರೀತಿಯನ್ನು ಬಹಳ ಸ್ಪಷ್ಟವಾಗಿ ವಿವರಿಸುವ ಮೂಲಕ ಇಂದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ನಿಕೇತ್ ರಾಜ್ ಮೌರ್ಯ ರವರು ದಿಕ್ಸೂಚಿ ಭಾಷಣ ಮಾಡಿದರು.
ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಆಬಿದ್ ತಂಙಳ್ ಎರುಮಾಡ್ ರವರು ಕೆಸಿಎಫ್ ನಡೆಸುತ್ತಿರುವ ಕಾರ್ಯಾಚರಣೆಗಳನ್ನು ವಿವರಿಸಿದ ನಂತರ ತ್ವೈಬಾ ಮದರಸ ಅಬುಧಾಬಿ ಇಲ್ಲಿನ ಪುಟಾಣಿ ಮಕ್ಕಳು ಭಾರತದ ಧ್ವಜವನ್ನು ಪ್ರದರ್ಶನ ಮಾಡಿದರು. ಪಾರೂಕ್ ಕಾಟಿಪಳ್ಳ ರವರು ರಚಿಸಿದ ಹಾಡನ್ನು ಸುಮಧುರ ಸ್ವರದೊಂದಿಗೆ ಅಮಾನ್ ಕಾಟಿಪಳ್ಳರವರು ಹಾಡಿದರು.
ಕಲಂದರ್ ಬಾವ ಒಮಾನ್ ಹಾಗೂ ನೌಷಾದ್ ತಲಪ್ಪಾಡಿ ಯವರು ನಿರೂಪಣೆ ಮಾಡಿದ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಸಮಿತಿ ಫೈನಾನ್ಷಿಯಲ್ ಕಂಟ್ರೋಲರ್ ಅಲೀ ಮುಸ್ಲಿಯಾರ್ ರವರು ಸಮಾರೋಪ ದುಆ ನೆರವೇರಿಸಿ ಅಡ್ಮಿನ್ ಇಲಾಖೆಯ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಸಖಾಫಿಯವರು ಧನ್ಯವಾದ ಹೇಳಿದರು.
ಈ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಸಮಿತಿ ನೇತಾರರು, ಸೌದಿ, ಯು ಎ ಇ, ಬಹರೈನ್, ಕತ್ತಾರ್, ಕುವೈತ್, ಒಮಾನ್, ಮಲೇಷಿಯಾ ಹಾಗೂ ಯುಕೆ ರಾಷ್ಟ್ರಗಳ ನೇತಾರರು ಹಾಗೂ ಕಾರ್ಯಕರ್ತರು ಭಾಗವಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.