ನರಿಮೊಗರು (www.vknews.in) : ನರಿಮೊಗರು ಶಾಲೆಯಲ್ಲಿ ಅದ್ದೂರಿಯಾಗಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು . ಶಾಲಾ ಮುಖ್ಯ ಗುರುಗಳಾದ ಶ್ರೀಲತಾ ರವರು ಎಲ್ಲರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.ಎಸ್ ಡಿ ಎಂ ಸಿ ಅಧ್ಯಕ್ಷರಾದ ಕೃಷ್ಣರಾಜ ಜೈನ್ ಧ್ವಜಾರೋಹಣಗೈದು ಕಾರ್ಯಕ್ರಮಕ್ಕೆ ಶುಭ ಕೋರಿದರು.
ಧ್ವಜಾರೋಹಣದ ಬಳಿಕ ವಿದ್ಯಾರ್ಥಿಗಳು ಹಾಗೂ ಪೋಷಕರು ಅರ್ಥಪೂರ್ಣ ವಾಗಿ ಮೆರವಣಿಗೆ ಸಾಗಿ ಅನಂತರ ನಿವೃತ್ತ ಶಿಕ್ಷಕಿ ಶ್ರೀಮತಿ ಶಾರದಾ ಹಾಗೂ ವರ್ಗಾವಣೆಗೊಂಡಿರುವ ಶಿಕ್ಷಕಿ ಜುಸ್ತಿನಾ ಲಿಡ್ವಿನ್ ಡಿಸೋಜರವರಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಸಭಾ ಕಾರ್ಯಕ್ರಮ ನೆರವೇರಿತು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯ ಗುರುಗಳಾದ ಶ್ರೀಮತಿ ಶ್ರೀಲತಾ ರವರು ಎಲ್ಲರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಈ ಸಭೆಯಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಪೂರ್ವಭಾವಿಯಾಗಿ ಶಾಲಾ ಪರಿಸರವನ್ನು ಸ್ವಚ್ಛಗೊಳಿಸಿದ ಹಾಗೂ ಸ್ವಾತಂತ್ರ್ಯ ದಿನಾಚರಣೆಯಂದು ಪಾಯಸದ ವ್ಯವಸ್ಥೆಯನ್ನು ಮಾಡಿದ್ದ ಕೆಎಂಜೆ ಎಸ್ ಎಸ್ ಎಫ್ ಎಸ್ ವೈ ಎಸ್ ಟೀಮ್ ಇಶಾಬ ನರಿಮೊಗರು ಶಾಖೆ ಇವರ ಸೇವೆಯನ್ನು ಗೌರವಿಸಿ ಸ್ಮರಣಿಕೆ ನೀಡಲಾಯಿತು.
ಹಾಗೂ ಶಾಲೆಗೆ ಹೂ ಗಿಡಗಳನ್ನು ದಾನವಾಗಿ ನೀಡಿದ ಪ್ರವೀಣ್ ಪೂಜಾರಿ ಶಾಂತಿಗೋಡು ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ಚದ್ಮವೇಷ ಭಾಷಣ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು ವಿದ್ಯಾರ್ಥಿಗಳು ಕನ್ನಡ ಇಂಗ್ಲಿಷ್ ಹಾಗೂ ತುಳು ಭಾಷೆಯಲ್ಲಿ ಮಾಡಿದ ಭಾಷಣಗಳನ್ನು ಅತಿಥಿಗಳು ಶ್ಲಾಘಿಸಿದರು. ಸಭಾ ವೇದಿಕೆಯಲ್ಲಿ ಕೃಷ್ಣರಾಜ ಜೈನ್ ಗಂಗಾಧರ ಸುವರ್ಣ ಪಂಚಾಯತ್ ಉಪಾಧ್ಯಕ್ಷರಾದ ಉಮೇಶ್ ಇಂದಿರಾನಗರ ಪಂಚಾಯತ್ ಸದಸ್ಯರಾದ ಶ್ರೀಮತಿ ಪುಷ್ಪಾವತಿ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಜಯರಾಮ್ ಪೂಜಾರಿ, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷರಾದ ಉಸ್ಮಾನ್ ನೆಕ್ಕಿಲು, ಉಪಾಧ್ಯಕ್ಷರಾದ ಪ್ರತಿಭಾ ಆಚಾರ್ಯ ಶ್ರೀಮತಿ ಶಾರದಾ ಮತ್ತು ಶ್ರೀಮತಿ ಜುಸ್ತಿನಾ ಲಿಡ್ವಿನ್ ಡಿಸೋಜಾ ಹಾಗೂ ಶಾಲಾ ಮುಖ್ಯ ಗುರುಗಳಾದ ಶ್ರೀಲತಾ ರವರು ಉಪಸ್ಥಿತರಿದ್ದರು .
ಈ ಶುಭ ಸಂದರ್ಭದಲ್ಲಿ ಸಿಹಿ ತಿಂಡಿಯನ್ನು ನೀಡಿ ಸಹಕರಿಸಿದ ದಾನಿಗಳು ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪುರುಷರ ಕಟ್ಟೆ ಮುಸ್ಲಿಂ ಒಕ್ಕೂಟ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಪುರುಷರ ಕಟ್ಟೆ ಅಬ್ದುಲ್ ಬಶೀರ್ ಇಂದಿರಾನಗರ ಎ ಎಸ್ ಆರ್ ಟಿ ಸಿ ಉದ್ಯೋಗಿ ಶ್ರೀಮತಿ ವಿಜಯ, ಗಣೇಶ್ ಪ್ರಭು ನರಿಮೊಗರು, ಮಹಾಲಿಂಗನಾಯ್ಕ ನರಿಮೊಗರು, ದಾಮೋದರ ಮರ್ತಡ್ಕ ಗಂಗಾಧರ ಸುವರ್ಣ ಉಮೇಶ್ ಇಂದಿರಾನಗರ ಗಣೇಶ್ ನಾಯಕ್ ಇಂದಿರಾನಗರ ಹಾಗೂ ನರಿಮೊಗರು ಶಾಲಾ ಹಿರಿಯ ವಿದ್ಯಾರ್ಥಿ ಬಳಗ ಪುರುಷರ ಕಟ್ಟೆ ಇದರ ವತಿಯಿಂದ ಧ್ವನಿವರ್ಧಕದ ವ್ಯವಸ್ಥೆಯನ್ನು ಮಾಡಿದ್ದರು.ಈ ಸಂದರ್ಭದಲ್ಲಿ ಪಾಪೆ ತಡ್ಕ ಮಸೀದಿಯ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಕೊಂಬಳ್ಳಿ, ಹಿರಿಯರಾದ ಮಹಮ್ಮದ್ ದರ್ಕಾಸು, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಪ್ರತಿಭಾ ಆಚಾರ್ಯ, ಸದಸ್ಯರಾದ ಸಲೀಂ ಮಾಯಂಗಳ , ಮಹಮ್ಮದ್ ಕೆ ಯು, ವಿವೇಕಾನಂದ ಭಟ್ ,ಸೌಮ್ಯ ರಮೇಶ್ ಕಾಳಿಂಗಹಿತ್ಲು, ನಸೀಮ ಬಾನು, ಗುಲಾಬಿ, ಸುನೀತಾ ಡಿಸೋಜಾ, ಶಶಿಕಲ ರವರು, ಎಸ್ ಡಿ ಎಮ್ ಸಿ ಯ ಮಾಜಿ ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ಪ್ರವೀಣ್ ಪೂಜಾರಿ ಇಂದಿರಾನಗರ, ದಿನೇಶ್ ಕೈಪಂಗಳ, , ಅಬೂಬಕ್ಕರ್ ದರ್ಕಾಸು ಪಾಪೆ ತಡ್ಕ, ಉಮ್ಮರ್ ಕೆ.ಪಿ. ಕಾಳಿಂಗ ಹಿತ್ಲು, ಅಬ್ದುಲ್ ನಾಸಿರ್ ನೆಕ್ಕಿಲು ಉಪಸ್ಥಿತರಿದ್ದರು.
ಸಹಶಿಕ್ಷಕರಾದ ಜೋಸ್ಲಿನ್ ಪಸನ್ಹ ಹಾಗೂ ದಿವ್ಯ ರವರು ಕಾರ್ಯಕ್ರಮ ನಿರೂಪಿಸಿದರು.ಸಹಶಿಕ್ಷಕರಾದ ಸುಮನ, ಸುರೇಖಾ,ಸ್ನೇಹಲತಾ,ಮಂಜುಳಾ , ಅಡುಗೆ ಸಿಬ್ಬಂದಿಗಳಾದ ಶ್ರೀಮತಿ ಕುಸುಮ, ವಿಜಯ ಮತ್ತು ಶೀಲಾವತಿರವರು ಸಹಕರಿಸಿದರು. ಶಾಲಾ ಹಿರಿಯ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದ ಯಶಸ್ಸಿಗೆ ಕಾರಣೀಭೂತರಾದರು.ಮುಖ್ಯಗುರುಗಳಾದ ಶ್ರೀಮತಿ ಶ್ರೀಲತಾ ರವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.