ಮಂಗಳೂರು (www.vknews.in) : ಮುಸ್ಲಿಂ ಐಕ್ಯತ ವೇದಿಕೆ ವತಿಯಿಂದ 77 ನೇ ಸ್ವಾತಂತ್ರೋತ್ಸವದ ಅಂಗವಾಗಿ 2023 ಆಗಸ್ಟ್ 15 ಮಂಗಳವಾರ ಧ್ವಜಾರೋಹಣ ಬೆಳಗ್ಗೆ 9.45 À-1 ಭಾಗ್ ಕುದ್ರೋಳಿಯಲ್ಲಿ ನಡೆಯಿತು.
ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ 10.30 AM @ ಫಾತಿಮಾ ಇಸ್ಲಾಮಿಕ್ ಸೆಂಟರ್ ಜಾಮಿಯಾ ಮಸೀದಿಯ ಬಳಿ ಸಮಿತಿ ಅಧ್ಯಕ್ಷ. ಮುಹಮ್ಮದ್ ಯಾಸೀನ್ ಅಧ್ಯಕ್ಷ ತೆಯಲ್ಲಿ ನಡೆಯಿತು. ಸಫ್ ವಾನ್ ರ ಕಿರಾಅತ್ ನೊಂದಿಗೆ ಚಾಲನೆಯಾದ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿ ಗಳಾಗಿ: ಸಹಾಯಕ ಪೋಲಿಸ್ ಆಯುಕ್ತ ರಾದ ಶ್ರೀ ಮಹೇಶ್ ಕುಮಾರ್ ಮಾತಾಡಿ ಕುದ್ರೋಳಿ ಯ ಗಲ್ಲಿ ಗಲ್ಲಿ ಗಳಲ್ಲಿ ಧ್ವಜಾರೋಹಣ ಮಾಡಿದ್ದು ನೋಡಿ ಬಹಳ ಸಂತೋಷ ವಾಯಿತು. ಜಾತಿ ಮತ ಭೇದವಿಲ್ಲದೆ ವಿದ್ಯಾರ್ಥಿ ಗಳಿಗೆ ನೀಡಿದ ಸನ್ಮಾನ ಕಾರ್ಯಕ್ರಮ ಶ್ಲಾಘನೀಯ ವಾಗಿದೆ ಎಂದರು.
ಬಹು ! ಕೆ ಎಸ್ ಮುಹಮ್ಮದ್ ರಿಯಾಝ್ ಪೈಝಿ ಖತೀಬರು ನಡುಪಳ್ಳಿ ಜುಮಾ ಮಸೀದಿ ಮಾತಾಡಿ ಶಿಕ್ಷಣದಲ್ಲಿ ವಿಧ್ಯಾರ್ಥಿಗಳು ಮುಂದುವರಿಯಿರಿ ನಿಮ್ಮೊಂದಿಗೆ ಐಕ್ಯತ ವೇದಿಕೆ ಸಹಕಾರವಿದೆ ಎಂದರು. ಬಹು ಶೇಖ್ ಸಾಕಿಬ್ ಸಲೀಂ ಉಮ್ರಿ .ಸಲಫಿ ಮಸೀದಿ ಮಾತಾಡಿ ವಿವಿಧತೆಯಲ್ಲಿ ಏಕತೆ ಬಗ್ಗೆ ವಿವರಿಸಿ ಇತಿಹಾಸ ಪುರುಷರ ಸೇವೆಯ ಬಗ್ಗೆ ನೆನಪಿಸದರು. ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಅತ್ಯಧಿಕ ಅಂಕ ಪಡೆದ 15 ರಷ್ಟು ವಿಧ್ಯಾರ್ಥಿಗಳಿಗೆ ಗೌರವಧನ,ಪ್ರಮಾಣ ಪತ್ರ ಹಾಗೂ ಕಿರು ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಜನಾಬ್ ಶಂಸುದ್ದೀನ್ ಎಚ್ ಬಿ ಟಿ ಕಾರ್ಪೋರೇಟರ್ ಜನಾಬ್ ಮಕ್ಬೂಲ್ ಜಾಮಿಅ ಕೋಶಾಧಿಕಾರಿ,ಜನಾಬ್ ಎಂ ಅಝೀಝ್ ಕುದ್ರೋಳಿ ಸಂಚಾಲಕರು, ಉದ್ಯಮಿ ಯು ಬಿ ಇಬ್ರಾಹಿಮ್, ಜನಾಬ್ ಎಸ್.ಎ. ಖಲೀಲ್, ಉಪಾಧ್ಯಕ್ಷರು ಜನಾಬ್ ಎನ್ ಕೆ ಅಬೂಬಕ್ಕರ್ ಸಹ ಕಾರ್ಯದರ್ಶಿ ಮುಹಮ್ಮದ್ ಹಾರಿಸ್ ಸಹ ಕಾರ್ಯದರ್ಶಿ ಜನಾಬ್ ಮುಝೈರ್ ಕುದ್ರೋಳಿ ಸಹ ಕಾರ್ಯದರ್ಶಿ ಸಮಿತಿ ಸದಸ್ಯರುಗಳಾದ ಮಾಜಿ ಮೇಯರ್ ಕೆ ಅಶ್ರಫ್, ಜನಾಬ್ ಮುಸ್ತಾಕ್ ಕುದ್ರೋಳಿ, ಜನಾಬ್ ಅಬ್ದುಲ್ ಲತೀಫ್ ಕ್ರಿಸ್ಟಲ್, ಜನಾಬ್ ಅಬ್ದುಲ್ ವಹಾಬ್, ಜನಾಬ್ ಬಿ ಎ ಇಸ್ಮಾಯಿಲ್ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಹಾಜಿ ಬಿ ಅಬೂಬಕ್ಕರ್ ಸ್ವಾಗತಿಸಿ ಅಶ್ರಫ್ ಕಿನಾರ ಮಂಗಳೂರು ಕಾರ್ಯಕ್ರಮ ನಿರೂಪಿಸಿ ಕಾರ್ಯದರ್ಶಿ ಮಕ್ಬೂಲ್ ಅಹ್ಮದ್ ವಂದಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.