(www.vknews.in) : ಕೇರಳದ ವಿಶ್ವವಿಖ್ಯಾತ ವಿಶ್ವವಿದ್ಯಾನಿಲಯ ದಾರುಲ್ ಹುದಾ ಇದರ ಅಂಗ ಸಂಸ್ಥೆಯಾಗಿ ಕರ್ನಾಟಕದಲ್ಲಿ ಮನೆಮಾತಾಗಿ ಜಗತ್ಖ್ಯಾತಿಯನ್ನು ಹೊಂದಿರುವ ನೂರುಲ್ ಹುದಾ ವಿದ್ಯಾ ಸಂಸ್ಥೆ ಇದೀಗ ಎಂಟನೇಯ ವಾರ್ಷಿಕ ಸಮಾರಂಭದ ಹೊಸ್ತಿಲಲ್ಲಿದೆ. 2015 ಆಗಸ್ಟ್ 19 ಅದು ಕರ್ನಾಟಕದ ಮುಸಲ್ಮಾನರ ಪಾಲಿಗೆ ಕನಸಿನ ಗೋಪುರ ಶಿಲನ್ಯಾಸಗೊಂಡ ಅವಿಸ್ಮರಣೆಯ ದಿನ.
ಪಾಣಕ್ಕಾಡ್ ಸೈಯ್ಯಿದ್ ಅಬ್ಬಾಸ್ ಅಲಿ ಶಿಹಾಬ್ ತಂಗಳ್ ರವರಿಂದ ಶಿಲಾಸ್ಥಾಪನೆ ಗೈಯ್ಯಲ್ಪಟ್ಟು ಝೈನುಲ್ ಉಲಮಾ ಚೆರುಶ್ಶೈರಿ ಉಸ್ತಾದ್ ರವರು ತರಗತಿ ಆರಂಭಗೊಳಿಸುವ ಮೂಲಕ ಶುಭಾರಂಭಗೊಂಡಿದ್ದ ಈ ಶಿಕ್ಷಣ ಸಂಸ್ಥೆಯ ಬೆಳವಣಿಗೆ ಅಭೂತಪೂರ್ವವಾಗಿತ್ತು. ಕರ್ನಾಟಕದ ಸಮುನ್ನತ ಸಮಸ್ತದ ನಾಯಕರು ಮತ್ತು ಉಲಮಾ ಸಾದಾತ್ ಗಳ ಆಶೀರ್ವಾದ ಮತ್ತು ಉಭಯ ರಾಜ್ಯಗಳ ಉಮರಾಗಳ ಅನನ್ಯ ಸಹಕಾರ ಮತ್ತು ಊರ ಪರವೂರ ದಿನೀ ಸ್ನೇಹಿತರ ಉದಾರ ಹಸ್ತಗಳ ಫಲವಾಗಿ ನೂರುಲ್ ಹುದಾ ತ್ವರಿತ ಗತಿಯಿಂದ ಬೆಳೆದು ಹೆಮ್ಮರವಾಯಿತ್ತು.
ಬೆಳವಣಿಗೆ.. ಕರ್ನಾಟಕ ಕೇರಳ ರಾಜ್ಯಗಳ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾಗಿ ಪ್ರಸಿದ್ಧಿ ಪಡೆದು ದೇಶಿಯ ಮಟ್ಟದ ಸುಖ್ಯಾತಿ ಹೊಸ್ತಿಲಲ್ಲಿ ನಿಂತಿರುವ ಮಾಡನ್ನೂರ್ ನೂರುಲ್ ಹುದಾ ಕೇವಲ ಎಂಟು ವರ್ಷಗಳ ಕಿರು ಅವಧಿಯಲ್ಲಿ ಬೆಳೆದು ಬಂದ ರೀತಿ ಅನನ್ಯ. ಮಾಡನ್ನೂರು ಎಂಬ ಗ್ರಾಮ ಪ್ರದೇಶ ಆದರೆ ಧಾರ್ಮಿಕ ವಿಷಯಗಳಲ್ಲಿ ಮುಂಚೂಣಿಯಲ್ಲಿದ್ದ ನಾಡು ಜಮಾತರ ಕಾಲಿಕವಾದ ಚಿಂತನೆಯಿಂದ ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದು ತದನಂತರ 32 ಮಂದಿ ಊರ ಪರ ಊರ ಧಾರ್ಮಿಕ ಮುಖಂಡರ ಟ್ರಸ್ಟ್ ಸ್ಥಾಪನೆಯಾಗಿ ತದನಂತರ ಹಿತೈಷಿಗಳ ಮನದಂತೆ 313 ಮಂದಿಯ ಸಮಿತಿ ಅಸ್ತಿತ್ವಕ್ಕೆ ತಂದು ನಂತರ ಪ್ರಸ್ತುತ ಸಮಿತಿಯಿಂದ 77 ಮಂದಿ ಸದಸ್ಯರನ್ನು ಆರಿಸಿ ಎಕ್ಸಿಕ್ಯೂಟಿವ್ ಸಮಿತಿ ರಚಿಸಿ ಸೃಷ್ಟಿ ಸಮಿತಿಯೊಂದಿಗೆ ಕೈಜೋಡಿಸಿ ಕಾರ್ಯಾಲಯವನ್ನು ಆತ್ಮಬಲದೊಂದಿಗೆ ಮುನ್ನೇರುತ್ತಿದೆ.
ಊರಿನ ಮಾದರಿಯಲ್ಲೇ ಯುಎಇ ಸಮಿತಿ ಹೆಗಲಿಗೆ ಹೆಗಲು ಕೊಟ್ಟು ಸಹಸಮಿತಿಗಳನ್ನು ರಚಿಸಿ ಕಾರ್ಯರೂಪಕ್ಕೆ ತಂದು ಸಂಸ್ಥೆಗೆ ಬೆನ್ನೆಲುಬಾಗಿ ನಿಂತಿದೆ. ರಕ್ಷಕ ಶಿಕ್ಷಕ ಸಮಿತಿಯು ಅಪಾರ ಕೊಡುಗೆಗಳನ್ನು ನೀಡಿ ಕೈಜೋಡಿಸುತ್ತಿದೆ.
ಕ್ರಾಂತಿಕಾರಿ ಎಂಟು ವರ್ಷಗಳನ್ನು ಪೂರೈಸಿದ ಈ ಸಂದರ್ಭದಲ್ಲಿ ಹಿನ್ನೋಟದಲ್ಲಿ ಕೃತಜ್ಞತೆ ಸಲ್ಲಿಸಲು ಅಪಾರ ಬಂಧು ಬಳಗವೇ ಇದೆ. ಸಕಾಲಿಕ ಚಿಂತನೆಗಳ ಮೂಲಕ ಸಮದಾರಿಯನ್ನು ರೂಪಿಸಿ ಮೈಲುಗಲ್ಲಿನ ದೂರ ನೋಡದೆ ಗುರಿ ಕಡೆ ತಲುಪುವ ಪ್ರಯತ್ನವನ್ನು ಮಾಡುತ್ತಿರುವ ಸಮಿತಿ ಪದಾಧಿಕಾರಿಗಳು ಸದಸ್ಯರು, ಮಾಡನ್ನೂರ್ ಜಮಾಅತ್ ಕಮಿಟಿ, ಸೇವೆಗೈದ ಖತೀಬ್ ಉಸ್ತಾದರು, ಜಮೀನು ಕೊಟ್ಟು ಸಹಕರಿಸಿದವರು, ಹಲವಾರು ಸಹಕಾರದ ಕೈಗಳು ಎಲ್ಲರನ್ನೂ ಕೃತಜ್ಞತಾ ಪೂರ್ವಕ ನೆನಪಿಸಿಕೊಳ್ಳುತ್ತಿದ್ದೇನೆ.
ಸಾಧನೆಗಳು.. ಶಿಕ್ಷಣ ಆತ್ಮೀಯ ಪ್ರಗತಿಗೆ ಎಂಬ ಧ್ಯೇಯ ವಾಕ್ಯವನ್ನು ಸಕಾರ ಗೊಳಿಸುವ ನಿಟ್ಟಿನಲ್ಲಿ ಸಾಗುತ್ತಾ ಬಂದಿರುವ ನೂರುಲ್ ಹುದಾ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಧಾರ್ಮಿಕ ಲೌಕಿಕ ವಿಕಾಸಗಳಿಗೆ ಬೇಕಾದ ಎಲ್ಲಾ ರೀತಿಯ ಫೆಸಿಲಿಟಿಗಳನ್ನು ಅಳವಡಿಸಲಾಗಿದೆ. ಆಧುನಿಕ ಕಾಲಘಟ್ಟದಲ್ಲಿ ಮತ ಪಂಡಿತರಿಗೆ ಎದುರಾಗುವ ತಾಂತ್ರಿಕ ವಿದ್ಯುನ್ಮಾನ ಉಪಕರಣಗಳು ಮತ್ತು ಬಹುವಿಧ ಭಾಷೆಗಳ ಸಮಸ್ಯೆಗಳನ್ನು ಪರಿಹರಿಸಿ ಈ ವಿಜ್ಞಾನಿಕೇತನದಿಂದ ಹೊರಬರುವ ವಿದ್ವಾಂಸರು ಎಲ್ಲಾ ಕ್ಷೇತ್ರಗಳಲ್ಲೂ ಪಳಗಿದವರಾಗಿ ಎಲ್ಲಾ ಸಮಕಾಲೀನ ಸಮಸ್ಯೆಗಳನ್ನು ನಿಭಾಯಿಸತಕ್ಕಂತಹ ಸಮರ್ಥ ಪಂಡಿತರಾಗಿ ರೂಪುಗೊಂಡಿರಬೇಕೆಂಬ ಉದ್ದೇಶವಿಟ್ಟುಕೊಂಡು ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲಾಗಿದೆ.
ಶೈಖುನಾ ಝೈನುಲ್ ಉಲಮಾ ಚೆರುಶ್ಶೈರಿ ಉಸ್ತಾದ್ ಲೈಬ್ರರಿ ಎಂಬ ಹೆಸರಲ್ಲಿ ಸ್ಥಾಪಿತವಾಗಿರುವ ಇಲ್ಲಿನ ಬೃಹತ್ ಗ್ರಂಥಾಲಯ ವಿದ್ಯಾರ್ಥಿಗಳ ಮತ ಭೌತಿಕ ಜ್ಞಾನಾಭಿವೃದ್ಧಿಗೆ ಪೂರಕ ಪರಿಕರಣವನ್ನು ಒದಗಿಸುತ್ತದೆ. ಹತ್ತು ಸಾವಿರಕ್ಕೂ ಮಿಕ್ಕಿ ಗ್ರಂಥ ಸಂಗ್ರಹಕ್ಕೆ ಯೋಜನೆ ಹಾಕಿದ್ದು ಕಾಲಿಕ ಪ್ರಶಸ್ತಿಯುಳ್ಳ ಪ್ರಖ್ಯಾತ ಸಾಹಿತಿಗಳ ರಾಷ್ಟ್ರೀಯ ಅಂತರಾಷ್ಟ್ರೀಯ ಖ್ಯಾತಿಯ ಬರಹಗಾರರ ಆಧುನಿಕ ಗ್ರಂಥಗಳು ಸಹಿತ ಪುರಾತನ ಧಾರ್ಮಿಕ ತಫ್ಸೀರ್ ಹದೀಸ್ ಫಿಕ್ಹ್ ಗ್ರಂಥಗಳನ್ನಡಗಿದೆ. ಹೈಟೆಕ್ ಲೈಬ್ರರಿಗೆ ಯೋಜನೆ ಹಾಕಿದ್ದು ಸ್ಕ್ಯಾನ್ ಮೂಲಕ ಗ್ರಂಥಗಳನ್ನು ಸೆಲೆಕ್ಟ್ ಮಾಡುವ ಕಾರ್ಯತಂತ್ರ ರೂಪಿಸಲಾಗಿದೆ.
ಆಧುನಿಕ ರೀತಿಯಲ್ಲಿ ವರಮಾನಕ್ಕನುಸಾರವಾಗಿ ಇದೀಗ ಕಂಪ್ಯೂಟರ್ ಲ್ಯಾಬ್ ರೂಮ್ ಅಳವಡಿಸಿ ವಿದ್ಯಾರ್ಥಿಗಳಿಗೆ ಬಿಟ್ಟುಕೊಡಲಾಗಿದೆ.ದಾರುಲ್ ಹುದಾ ವಿಶ್ವವಿದ್ಯಾನಿಲಯದ ನಿರ್ದೇಶನದಂತೆ ಡಿಪಾರ್ಟ್ಮೆಂಟ್ ಗಳನ್ನು ಆಯ್ಕೆ ಮಾಡುವ ವ್ಯವಸ್ಥೆ ಸಹಸಂಸ್ಥೆಗಿದೆ ನೂರುಲ್ ಹುದಾ ಫಿಕ್ಹ್ ಸೆಲೆಕ್ಟ್ ಮಾಡಿ ವೈಶಿಷ್ಟವಾದ ರೀತಿಯಲ್ಲಿ ಕರ್ಮ ಶಾಸ್ತ್ರದ ವಿವಿಧ ನೈಜತೆಯನ್ನು ಜನರ ಮುಂದಿಡುತ್ತಿದೆ. ವಿದ್ಯಾರ್ಥಿಗಳ ಮಸ್ತಿಷ್ಕದಿಂದ ಮೂಡಿ ಬರುವ ಚಿಗುರು ಕನ್ನಡ ಮಾಸಿಕ ಚಿಗುರೊಡೆದು ಅಲ್ಪಾವಧಿಯಲ್ಲಿಯೇ ಸೈ ಎಂದುಕೊಂಡಿದೆ.ಅಲ್ಫಖೀಹ್,ಪ್ರಯಾಣ,ಮಜ್ಲಿಸುನ್ನೂರ್ ಇಂತಹ ಅನೇಕ ಸಾಧನೆ ಸಾಧಕದ ಬಗ್ಗೆ ಮತ್ತೊಂದು ದಿವಸ ಬರೆಯಲು ಸಮಯ ಕಾಣುವೆ.
ಸಂಸ್ಮರಣೆ.. ವಿದ್ಯಾ ಸಮಚಯಕ್ಕೆ ಪ್ರೋತ್ಸಾಹ ಪ್ರಾರ್ಥನೆ ಆಶೀರ್ವಾದ ಗಳನ್ನು ನೀಡಿದ ಸಮಸ್ತದ ಸಮುನ್ನತ ನಾಯಕರಿದ್ದಾರೆ ಅವರ ಪೈಕಿ ಹಲವರು ಮರಣ ಹೊಂದಿರುತ್ತಾರೆ ಅದೇ ರೀತಿ ನಾಡಿನ ಮತ್ತು ಪರಿಸರ ಗಳಲ್ಲಿ ಅನನ್ಯ ಸಹಕಾರ ಸಹಾಯ ನೀಡಿದ ಅನೇಕ ಮಂದಿ ನಮ್ಮನ್ನಗಲಿದ್ದಾರೆ. ಅವರೆಲ್ಲರಿಗೂ ಅಲ್ಲಾಹನು ಮಗ್ಫಿರತ್ ಮರ್ಹಮತ್ ಹಾಗೂ ಪಾರತ್ರಿಕ ಪದೋನ್ನತಿ ನೀಡಲೆಂದು ದುಆ ಮಾಡುತ್ತಿದ್ದೇನೆ. ಸಹಾಯ ಸಹಕಾರ ಪ್ರೋತ್ಸಾಹ ನೀಡಿದ ಎಲ್ಲರನ್ನು ಈ ಸಂದರ್ಭ ಮತ್ತೊಮ್ಮೆ ಮದದೊಮ್ಮೆ ಕೃತಜ್ಞತಾಭಾವದೊಂದಿಗೆ ನೆನಪಿಸುತ್ತ ಅಲ್ಲಾಹನು ಸ್ವೀಕರಿಸಲೀ ಅಮೀನ್..
✒️ ಕೆಯು ಖಲೀಲ್ ರಹ್ಮಾನ್ ಅರ್ಶದಿ ಕೋಲ್ಪೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.