ಮಲಪ್ಪುರಂ (www.vknews.in) ; ಕೆಲಸಕ್ಕೆಂದು ಪೇರಿಸಿಟ್ಟಿದ್ದ ಕಲ್ಲು ಮೈಮೇಲೆ ಬಿದ್ದ ಪರಿಣಾಮ ಬಾಲಕಿಯೊಬ್ಬಳು ದಾರುಣ ಅಂತ್ಯ ಕಂಡಿದ್ದಾಳೆ. ಕೂನೊಲ್ಮಾಡ್ ಚಮ್ಮಿನಿಪರಂ ನಿವಾಸಿ ಕಂಜಿರಸ್ಸೆರಿ ಪೋಕಟ್ ವಿನೋದ್ ಮತ್ತು ರಮ್ಯಾ ದಂಪತಿಯ 4 ವರ್ಷದ ಪುತ್ರಿ ಗೌರಿ ನಂದಾ ಮೃತಳು.
ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಅವಘಡ ಸಂಭವಿಸಿದೆ. ಅಪೂರ್ಣಗೊಂಡ ಮನೆಯಲ್ಲಿ ಮೆಟ್ಟಿಲುಗಳ ರೀತಿಯಲ್ಲಿ ಜೋಡಿಸಲಾದ ಕಲ್ಲಿನ ಮೇಲೆ ಹೆಜ್ಜೆ ಹಾಕಲು ಯತ್ನಿಸುತ್ತಿದ್ದಾಗ ಆ ಕಲ್ಲು ಮಗುವಿನ ಮೈಮೇಲೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ರಕ್ಷಿಸಲು ಸಾಧ್ಯವಾಗಲಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.