ಕೋಲಾರ (ವಿಶ್ವ ಕನ್ನಡಿಗ ನ್ಯೂಸ್) : ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನ್ಯಾಯಾಂಗಣ ಸಭಾಂಗಣದಲ್ಲಿ ಕೆ.ಪಿ.ಎಂ.ಇ ಕಾಯ್ದೆಯನ್ವಯ ನೋಂದಣಿಯಾಗದೆ ಮತ್ತು ಅರ್ಹ ವಿದ್ಯಾರ್ಹತೆ ಇಲ್ಲದೆ ಕ್ಲಿನಿಕ್ಗಳನ್ನು ನಡೆಸುತ್ತಿರುವವರನ್ನು ಜಿಲ್ಲಾ ಸಕ್ಷಮ ಪ್ರಾಧಿಕಾರದ ಮುಂದೆ ಹಾಜರುಪಡಿಸಿ ಒಟ್ಟು 13 ಕ್ಲಿನಿಕ್ ಮಾಲೀಕರನ್ನು ಹಾಜರಾಗಲು ಸೂಚಿಲಾಗಿತ್ತು.
ಕರ್ನಾಟಕ ಖಾಸಗಿ ವೈದ್ಯಕೀಯ ಅಧಿನಿಯಮ 2007 ಹಾಗೂ ತಿದ್ದುಪಡಿ ನಿಯಮ 2017 ರಂತೆ ಖಾಸಗಿ ಆರೋಗ್ಯ ಸಂಸ್ಥೆಗಳು ಕಡ್ಡಾಯವಾಗಿ ಕೆ.ಪಿ.ಎಂ.ಇ ನಿಯಮಾನುಸಾರ ನೊಂದಣಿ ಪಡೆಯಬೇಕಾಗಿರುತ್ತದೆ ಅದರಂತೆ ಖಾಸಗಿ ಆರೋಗ್ಯ ಸಂಸ್ಥೆಗಳಿಂದ ಅರ್ಜಿದಾರರು ಅರ್ಜಿಗಳನ್ನು ಸಲ್ಲಿಸುವ ದಿನಾಂಕ 90 ದಿನಗಳೊಳಗಾಗಿ ಅರ್ಜಿಯನ್ನು ಇತ್ಯರ್ಥಗೊಳಿಸುವ ಜವಾಬ್ದಾರಿಯು ಜಿಲ್ಲಾ ಕೆ.ಪಿ.ಎಂ.ಇ ಸಕ್ಷಮ ಪ್ರಾಧಿಕಾರದ ಜವಾಬ್ದಾರಿಯಾಗಿರುತ್ತದೆ. ಪ್ರತಿ ಎರಡು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಸಕ್ಷಮ ಪ್ರಾಧಿಕಾರಿದವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಏರ್ಪಡಿಸಿ ಅರ್ಜಿಯನ್ನು ವಿಲೇವಾರಿ ಮಾಡಲಾಗುವುದು ಅದರಂತೆ ಈ ಹಿಂದೆ ನಡೆದ ಸಭೆಯಲ್ಲಿ ಯಾವುದೇ ಅರ್ಹ ವೈದ್ಯಕೀಯ ವಿದ್ಯಾರ್ಹತೆಯಿಲ್ಲದೆ ಅನಧಿಕೃತವಾಗಿ ಆರೋಗ್ಯ ಸಂಸ್ಥೆಗಳನ್ನು ನಡೆಸುತ್ತಿರುವ ನಕಲಿ ವೈದ್ಯರನ್ನು ಹಾಜರು ಪಡಿಸಲು ಜಿಲ್ಲಾಧಿಕಾರಿಗಳ ಆದೇಶಿಸಿರುತ್ತಾರೆ ಮುಂದುವರೆದು.
ದಿನಾಂಕ : 14.09.2023 ರಂದು ಒಟ್ಟು 13 ಆರೋಗ್ಯ ಸಂಸ್ಥೆಯವರನ್ನು ಪ್ರಾಧಿಕಾರದ ಮುಂದೆ ಹಾಜರಾಗಲು ನೋಟೀಸ್ ನೀಡಲಾಗಿ ಒಟ್ಟು 13 ಆರೋಗ್ಯ ಸಂಸ್ಥೆಗಲ್ಲಿ 10 ಆರೋಗ್ಯ ಸಂಸ್ಥೆಯವರು ಹಾಜರಾಗಿರುತ್ತಾರೆ . ಒಟ್ಟು 10 ಆರೋಗ್ಯ ಸಂಸ್ಥೆಯವರು ಯಾವುದೇ ಅರ್ಹ ವಿದ್ಯಾರ್ಹತೆ ಇಲ್ಲದೆ ಚಿಕಿತ್ಸೆಯನ್ನು ನೀಡುತ್ತಿರುವುದು ಸಾಬೀತಾದ ಕಾರಣ 05 ಆರೋಗ್ಯ ಸಂಸ್ಥೆಗಳನ್ನು ಸೀಜ್ ಮಾಡಲು ಹಾಗೂ ಉಳಿದ 05 ಆರೋಗ್ಯ ಸಂಸ್ಥೆಯವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ವಹಿಸಲು ಹಾಗೂ ಗೈರು ಹಾಜರಾದ 03 ಆರೋಗ್ಯ ಸಂಸ್ಥೆಯವರನ್ನು ಮುಂದಿನ ಸಭೆಯಲ್ಲಿ ಹಾಜರು ಪಡಿಸಲು ಜಿಲ್ಲಾಧಿಕಾರಿಗಳು ಆದೇಶಿಸಿರುತ್ತಾರೆ.
ಬಂಗಾರಪೇಟೆ ತಾಲ್ಲೂಕಿನ ಚಿಕ್ಕ ಕಳವಂಜಿ ಗ್ರಾಮದ ಪ್ರತಾಪ್ ಶ್ರೀ ವೆಂಕಟೇಶ್ವರ ಕ್ಲಿನಿಕ್ , ದೇಶಹಳ್ಳಿ ಗ್ರಾಮದ ರಜನಿಕಾಂತ್ ಪ್ರಗತಿನಿಕ್. ಕೆ.ಜಿ.ಎಫ್ ತಾಲ್ಲೂಕಿನ ಮಿನಿ ಇಬ್ರಾಹಿಂ ರಸ್ತೆ , ಉರಿಗಾಂಪೇಟೆ ಗ್ರಾಮದ ಅಣ್ಣಯ್ಯ ಸಂಗೀತ ಕ್ಲಿನಿಕ್ , ಮಿನಿ ಇಬ್ರಾಹಿಂ ರಸ್ತೆ ಇಂಡಿಯನ್ ಕ್ಲಿನಿಕ್ ಹಮ್ಮ.ಎಂ , ಸತ್ಯಜಿತ್ ಪೂಜಾಕ್ಲಿನಿಕ್ , ಸುರೇಶ್ ಆರೋಗ್ಯ ವೆಲೆಸ್ ಸೆಂಟರ್ , ಮಾಲೂರು ತಾಲ್ಲೂಕಿನ ಟೇಕಲ್ ಗ್ರಾಮದ ಶ್ರೀನಿವಾಸಗೌಡ ಬ್ಯಾಂಕ್ ಆಫ್ ಬರೋಡ ಮುಂಬಾಗ , ಶ್ರೀನಿವಾಸಪುರ ತಾಲ್ಲೂಕಿನ ಅಗರಂ ರಸ್ತೆ , ಯಲ್ದೂರು ಗ್ರಾಮದ ಮಧು ಹಿಂದೂಕ್ಲಿನಿಕ್ , ಸೋಮಯಾಜಲಹಳ್ಳಿ ಗ್ರಾಮದ ಶಂಕರ್ ಟಿ.ಎಂ ಹೇಂ ಕ್ಲಿನಿಕ್ , ರಾಯಲ್ಪಾಡು ಗ್ರಾಮದ ಬಾಲಾಜಿ ಸಿಂಗ್ ಶ್ರೀ ವಿನಾಯಕ ಕ್ಲಿನಿಕ್.
ಈ ಕ್ಲಿನಿಕ್ ಮಾಲೀಕರು ಸಭೆಗೆ ಹಾಜರಾಗಿದ್ದು , ನಕಲಿ ಪ್ರಮಾಣ ಪತ್ರವನ್ನು ಸೃಷ್ಟಿಸಿ ಜನರ ಜೀವದ ಜೊತೆಗೆ ಚಲ್ಲಾಟವಾಡಿದ ಇವರಿಗೆ ತೀವ್ರತರವಾದ ಶಿಕ್ಷೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು. ಬಂಗಾರಪೇಟೆ ತಾಲ್ಲೂಕಿನ ತೊಪ್ಪನಹಳ್ಳಿ ಗ್ರಾಮದ ಅರುಣ್ ಕ್ಲಿನಿಕ್ ಹಾಗೂ ಬಲಮಂದೆ ಗ್ರಾಮದ ಕೋಟೇಶ್ವರನ್ ಕುಷಾಲ್ ಕ್ಲಿನಿಕ್.
ಕೆ.ಜಿ.ಎಫ್ ತಾಲ್ಲೂಕಿನ ಉರಿಗಾಂಪೇಟೆ ಗ್ರಾಮದ ನದೀಮ್ ಹೆಲ್ತ್ ಪಾಯಿಂಟ್ ಕ್ಲಿನಿಕ್ ಇವರುಗಳು ಸಭೆಗೆ ಗೈರು ಹಾಜರಾಗಿದ್ದು , ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಒಟ್ಟು ಹತ್ತು ಆರೋಗ್ಯ ಸಂಸ್ಥೆಯವರು ಯಾವುದೇ ಅರ್ಹ ವಿದ್ಯಾರ್ಹತೆ ಇಲ್ಲದೆ ಚಿಕಿತ್ಸೆಯನ್ನು ನೀಡುತ್ತಿರುವುದು ಸಾಬೀತಾದ ಕಾರಣ ಹತ್ತು ಕ್ಲಿನಿಕ್ಗಳನ್ನು ಸೀಜ್ ಮಾಡಲು ಮತ್ತು ಏಳು ಕ್ಲಿನಿಕ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲು ಹಾಗೂ ಮುಟ್ಟುಗೋಲು ಹಾಕಿಕೊಂಡಿರುವ ದಾಖಲೆಗಳ ಸತ್ಯಾ ಸತ್ಯತೆಯನ್ನು ತಿಳಿಯಲು ಸೈಬರ್ ಕ್ರೈಂ ವಿಭಾಗಕ್ಕೆ ಸಲ್ಲಿಸುವಂತೆ ಮಾನ್ಯ ಜಿಲ್ಲಾಧಿಕಾರಿಗಳು ಆದೇಶಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷ , ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ , ಅಪರ ಜಿಲ್ಲಾಧಿಕಾರಿ ಡಾ . ಶಂಕರ್ ವಣಿಕ್ಯಾಳ್ , ಆರೋಗ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.