ಪುತ್ತೂರು (www.vknews.in) : ಕಲ್ಲೇಗ ಜಮಾಅತ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಜಮಾಅತ್ ನ ಯವಕರ ಸಂಘಟನೆಯಾದ ಅಲ್ – ಅಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ (ರಿ )ಇದರ ಕಛೇರಿಯು ನವೀಕೃತಗೊಂಡು ಬುಧವಾರ ಮಗ್ರಿಬ್ ನಮಾಝ್ ಬಳಿಕ ಉದ್ಘಾಟನೆಗೊಂಡಿತು.
ಕಾರ್ಯಕ್ರಮದಲ್ಲಿ ಕಛೇರಿಯನ್ನು ಕಲ್ಲೇಗ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಜಃ ಕೆ.ಪಿ.ಮುಹಮ್ಮದ್ ಹಾಜಿಯವರು ಉದ್ಘಾಟಿಸಿದರು, ಕಲ್ಲೇಗ ಜುಮಾ ಮಸೀದಿಯ ಮುದರ್ರಿಸ್ ಬಹುಃ ಶಾಫಿ ಫೈಝಿ, ಇರ್ಫಾನಿ ಉಸ್ತಾದ್ ದುವಾಃ ನೆರವೇರಿಸಿದರು. ಕಲ್ಲೇಗ ಜಮಾಅತ್ ನ ಗೌರವಾಧ್ಯಕ್ಷರಾದ ಬಿ.ಎ.ಶಕೂರ್ ಹಾಜಿಯವರು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಪುತ್ತೂರಿನ ಸಾಲ್ಮರದ ಮೌಂಟನ್ ವೀವ್ ಅಸ್ವಾಲಿಯಾ ವುಮೆನ್ಸ್ ಕಾಲೇಜಿನ ಮುಖ್ಯಸ್ಥರಾದ ಬಹುಃ ಕೆ.ಎಂಎ.ಕೊಡುಗಾಯಿ ಉಸ್ತಾದ್, ಜಮಾಅತ್ ಕಮಿಟಿಯ ಪದಾಧಿಕಾರಿಗಳು, ಅಲ್ – ಅಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ನ ಪದಾಧಿಕಾರಿಗಳು SKSSF ಕಲ್ಲೇಗ ಮತ್ತು ಶಾಂತಿ ನಗರದ ಶಾಖೆಯ ಪದಾಧಿಕಾರಿಗಳು ಮದ್ರಸ ವಿಧ್ಯಾರ್ಥಿಗಳು ಹಾಗೂ ಜಮಾಅತ್ ಭಾಂಧವರು ಪಾಲ್ಗೊಂಡರು ಅಲ್ – ಅಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಜಃ ಅಬ್ದುಲ್ ರಶೀದ್ ರವರು ಕಾರ್ಯಕ್ರಮದಲ್ಲಿ ಸೇರಿದ ಎಲ್ಲಾರನ್ನ ಸ್ವಾಗತಿಸಿದರು ಪ್ರಧಾನ ಕಾರ್ಯದರ್ಶಿ ಅಬೂತ್ವಾಹಿರ್ ರವರು ಧನ್ಯವಾದ ಸಮರ್ಪಿಸಿದರು
ಕಾರ್ಯಕ್ರಮದ ಕೊನೆಯಲ್ಲಿ ಕಛೇರಿಯ ನವೀಕೃತ ಕಾಮಗಾರಿಗಾಗಿ ಸಹಕರಿಸಿದವರಿಗೆ ಪ್ರತ್ಯೇಕವಾಗಿ ದುವಾಃ ಮಾಡಲಾಯಿತು ಹಾಗೂ ಸಿಹಿತಿಂಡಿ ಮತ್ತು ಪಾನೀಯ ವಿತರಿಸಲಾಯಿತು
ವರದಿ :- ಹನೀಫ್ ಹಾಜಿ ಉದಯ ಪುತ್ತೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.