ಕುಂದಾಪುರ (www.vknews.in) : ನೆರೆ ಮನೆಯ ಯುವಕನೊಬ್ಬನನ್ನು ಪುಸಲಾಯಿಸಿ, ಅತ್ಯಾಚಾರಕ್ಕೆ ಯತ್ನಿಸಿದ ಎಂದು ದೂರು ನೀಡುವುದಾಗಿ ಹೆದರಿಸಿ ಹಣಕ್ಕಾಗಿ ಬೇಡಿಕೆ ಇಟ್ಟ ಬಗ್ಗೆ ಕುಂದಾಪುರ ಮಾವಿನಕಟ್ಟೆಯ ಮಹಿಳೆಯೊಬ್ಬರ ಮೇಲೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾವಿನಕಟ್ಟೆಯ ಮಹಿಳೆಯೊಬ್ಬರು ಅದೇ ಊರಿನ ನಿವಾಸಿ ನವಾಜ್ ಅವರನ್ನು ಮನೆಗೆ ಹಾಲು ತರಲೆಂದು ಕರೆಸಿ ಮೈಮೇಲೆ ಎರಗಿ ದೈಹಿಕ ಸಂಪರ್ಕಕ್ಕೆ ಪ್ರಯತ್ನಪಟ್ಟಿದ್ದು, ತಾನು ಗರ್ಭವತಿಯೆಂದು, ಇದಕ್ಕೆ ನೀನೇ ಕಾರಣ ಎಂದಿದ್ದಾರೆ. ಅತ್ಯಾಚಾರದ ದೂರು ದಾಖಲಿಸುವುದಾಗಿ ಹೇಳಿ 5 ಲಕ್ಷ ರೂ. ಹಣದ ಬೇಡಿಕೆ ಇಟ್ಟಿದ್ದು, 30 ಸಾವಿರ ರೂ. ಪಡೆದಿದ್ದಾರೆ ಎಂದು ನವಾಜ್ ದೂರಿನಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.