ಉಳ್ಳಾಲ (www.vknews.in) : ಪಡಿಕ್ಕಲ್ ಮಂಜೇಶ್ವರ ತಾಲೂಕಿನ ಚಿಗುರುಪಾದೆ ಸಮೀಪದ ಚಿನಾಲದಲ್ಲಿ ಧರ್ಮ ಭೋದನಾ ರಂಗದಲ್ಲಿ ವಿನೂತನ ಹೆಜ್ಜೆಯನ್ನಿಟ್ಟು, ಧರ್ಮ ಕ್ರಾಂತಿಯ ಅಲೆಯೆಬ್ಬಿಸುತ್ತಾ, ವಿನೂತನ ಅಧ್ಯಾಯವನ್ನು ರಚಿಸಿ, ಹಲವಾರು ಕನಸುಗಳನ್ನು ಹೊತ್ತು ಮುನ್ನಡೆಯುತ್ತಿರುವ ದಾರುನ್ನಜಾತ್ ಸಂಸ್ಥೆಯ ಹದಿನಾಲ್ಕನೇ ವರ್ಷದ ಸಂಭ್ರಮ ಆಚರಣೆ, ಅಜ್ಮೀರ್ ಮೌಲಿದ್, ರಝ್ವಿ ಸನದುದಾನ ಸಮ್ಮೇಳನ ಜನವರಿ ತಿಂಗಳ 19, 20 ಶುಕ್ರವಾರ ಮತ್ತು ಶನಿವಾರ ನಡೆಯಲಿದೆ.
ಆ ಪ್ರಯುಕ್ತ ನಿನ್ನೆ ಡಿಸೆಂಬರ್ 15 ಶುಕ್ರವಾರ ಜುಮುಅ ನಮಾಝ್ ಬಳಿಕ ಕೈರಂಗಳದ ಪಡಿಕ್ಕಲ್ ಮಸೀದಿಯಲ್ಲಿ ದಾರುನ್ನಜಾತ್ ಕನ್ವೆನ್ಷನ್ ನಡೆಯಿತು. ಸಂಸ್ಥೆಯ ಪ್ರ. ಕಾರ್ಯದರ್ಶಿಯೂ, ಯುವ ಬರಹಗಾರರೂ, ಪ್ರಗಲ್ಭ ವಾಗ್ಮಿಯೂ ಆಗಿರುವ ಅಬೂ ಆಶಿಖ್ ಶಬೀರ್ ಅಶ್ಅರಿ ಕೆ.ಸಿ. ರೋಡ್ ಸಂಸ್ಥೆಯ ಅಭಿವೃದ್ಧಿಗಾಗಿ ಕೈಜೋಡಿಸಲು ಕರೆ ನೀಡಿದರು.
ಸಂಸ್ಥೆಯ ಪ್ರಮುಖರಾದ *ಸೈಫುಲ್ಲಾ ರಝ್ವಿ ಅಲ್ ಮದನಿ, ಜುನೈದ್ ರಝ್ವಿ, ಪಡಿಕ್ಕಲ್ ಖತೀಬರಾದ ನಾಸಿರುದ್ದೀನ್ ಮದನಿ. ಅಧ್ಯಾಪಕರುಗಳಾದ, ಅಬೂಬಕರ್ ಮದನಿ ನಡುಪರೆ, ಅಬ್ದುಲ್ ಮಜೀದ್ ಮುಸ್ಲಿಯಾರ್, ಮಸೀದಿ ಅಧ್ಯಕ್ಷರಾದ, ಇಬ್ರಾಹಿಂ ಬಾವ ಹಾಜಿ, ಮಾಜಿ ಅಧ್ಯಕ್ಷ ಅಬ್ದುಲ್ ಹಮೀದ್ ಮದನಿ, ಕಾರ್ಯದರ್ಶಿಗಳಾದ, ಖಲಂದರ್, ನಹೀಂ, ಮುಸ್ಲಿಂ ಜಮಾಅತ್ ನಾಯಕರುಗಳಾದ, ಇಂಜಿನಿಯರ್ ಅಬ್ದುಲ್ ಹಮೀದ್ ಹಾಜಿ, ಬಾವ ಹಾಜಿ, ಅಬ್ಬು ಹಾಜಿ, ಎಸ್.ವೈ.ಎಸ್ ನಾಯಕರುಗಳಾದ, ಪಿ.ಎಸ್. ಇಸ್ಮಾಯೀಲ್, ಇಬ್ರಾಹಿಂ ಮಾಸ್ಟರ್, ಶೇಕುಞ, ಅಬ್ದುಲ್ ಅಝೀಝ್, ಕೆ.ಯು.ಆಸಿಫ್, ನಾಸಿರ್ ಮೊದಲಾದವರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.