(www.vknews.in) : ನೋಟ್ ಬ್ಯಾನ್ ಆದಾಗ ಜನಸಾಮಾನ್ಯರು ಹೇಗೆ ಬ್ಯಾಂಕ್ ಮುಂದೆ ಗಂಟೆಗಟ್ಟಲೆ ಕ್ಯೂ ನಿಂತಿದ್ಜರೋ, ಹಾಗೆಯೇ ಯಾವುದೋ ಒಂದು ವಾಯ್ಸ್ ಮೆಸೇಜ್ ಕೇಳಿ ಜನರು ತಮ್ಮ ಕೆವೈಸಿ ಅಪ್ಡೇಟ್ ಮಾಡಲು ಗ್ಯಾಸ್ ವಿತರಕ ಕಂಪನಿಗಳ ಮುಂದೆ ಕ್ಯೂ ನಿಲ್ಲ ತೊಡಗಿದ್ದಾರೆ. ಯಾರಿಗೂ ಇದರ ಕುರಿತು ಸ್ಪಷ್ಟತೆಯಿಲ್ಲ. ಎಲ್ಲರ ಬಾಯಯಲ್ಲೂ ‘ಅಂತೆ ಕಂತೆ’. ವಿಪರ್ಯಾಸವೆಂದರೆ ಕೇವಲ ಅವಿದ್ಯಾವಂತರು ಮಾತ್ರವಲ್ಲ ದೊಡ್ಡ ದೊಡ್ಡ ಡಬ್ಬಲ್ ಗ್ರಾಜ್ಯುವೇಟ್ ಗಳು ಕೂಡ ಈ ವಾಯ್ಸನ್ನು ಪಾರ್ವರ್ಡ್ ಮಾಡುವುದೇ ಮಾಡುವುದು. ವಾಟ್ಸಾಪ್ ನಲ್ಲಿ ಬಂದ ಯಾವುದೋ ಐಟಿ ಸೆಲ್ ನ ಅನಾಮಧೇಯ ವಾಯ್ಸ್ ಮೆಸೇಜ್ ಗೆ ವಿದ್ಯಾವಂತ ಜನ ಈ ರೀತಿ ಮರುಳಾಗುತ್ತಾರೆಂದರೆ ಮತ್ತೆ ನಾವೆಲ್ಲಿ ಬದಲಾವಣೆಯಾಗುವುದು?.
ಇದರ ಸತ್ಯಾಂಶವೇನೆಂದರೆ ಪ್ರದಾನಮಂತ್ರಿ ಉಜ್ವಲ್ ಯೋಜನೆಯಡಿಯಲ್ಲಿ ಗ್ಯಾಸ್ ಸಂಪರ್ಕ ಪಡೆದವರು ತಮ್ಮ ಮಾಸಿಕ ಸಬ್ಸಿಡಿಯನ್ನು ಪಡೆಯುವ ಸಲುವಾಗಿ ಡಿಸೆಂಬರ್ 31ರ ಒಳಗಾಗಿ ತಮ್ಮ ಕೆವೈಸಿ ಅಪ್ಡೇಟ್ ಮಾಡಲು ಆಹಾರ ಇಲಾಖೆ ವಿನಂತಿಸಿದೆ. ಇತರರಿಗೆ ಕವೈಸಿ ತಮ್ಮ ಅಪ್ಡೇಟ್ ಮಾಡುವುದು ಕಡ್ಡಾಯವೂ ಮಾಡಿಲ್ಲ ಅದಕ್ಕಾಗಿ ಕೊನೆಯ ದಿನಾಂಕವನ್ನೂ ನಿಗದಿ ಪಡಿಸಿಲ್ಲ.
ಯಾರೋ ಓರ್ವ ವಾಟ್ಸಾಪ್ ಯೂನಿವರ್ಸಿಟಿಯ ಪದವೀದರ ಇದಕ್ಕೆ ಖಾರ ಮಸಾಲೆ ಸೇರಿಸುವ ಮೂಲಕ ಜನರನ್ನು ಯಾಮಾರಿಸಿದ್ದಾನೆ. ನಾವು ಕಂಪ್ಯೂಟರ್ ಯುಗದಲ್ಲಿದ್ದರೂ ಈ ವೀರನ ವಾಯ್ಸನ್ನು ಪ್ರಪಂಚವಿಡೀ ಶೇರ್ ಮಾಡುವ ಮೂಲಕ ವೈರಲ್ ಮಾಡಿದ್ದೇವೆ. ಕೆಲವರಂತೂ ಈ ವಾಯ್ಸ್ ಶೇರ್ ಮಾಡಿದರೆ ತಮಗೆ ಸಬ್ಸಿಡಿ ದೊರೆಯುತ್ತದೆ ಎನ್ನುವ ರೀತಿಯಲ್ಲಿ ವಾಯ್ಸ್ ಶೇರ್ ಮಾಡಿದ್ದಾರೆ.
— ಎಸ್.ಎ.ರಹಿಮಾನ್ ಮಿತ್ತೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.