(www.vknews.in) ; ಸರ್ವ ಧರ್ಮಿಯರು ಸಹೋದರ, ಸಹೋದರಿಯರಾಗಿ ಬಾಳ ಬೇಕಾದ ಭಾರತದಲ್ಲಿ ಪ್ರತಿ ನಿತ್ಯ ವರ್ಗ, ವರ್ಣ, ಭಾಷೆ, ಪ್ರಾಂತ್ಯ, ಕುಲ, ಜಾತಿಗಳ ಹೆಸರಲ್ಲಿ ಸಂಘರ್ಷ ನಡೆಯುತ್ತಲೇ ಇದ್ದು, ಭಾರತಾಂಬೆಯ ಮೊಲೆ ಹಾಲುಂಡು ಬದುಕಿದ ಸಹೋದರರು ಪರಸ್ಪರ ಕಚ್ಚಾಡಿಕೊಂಡು ಭಾರತದಲ್ಲಿ…. ರಕ್ತದ ಹೊಳೆ ಹರಿಸುತ್ತಿದ್ದಾರೆ. ಸರ್ವಧರ್ಮ, ಸಮ ಭಾರತದ ಭವ್ಯ ಸಂಸ್ಕ್ರತಿಗೆ ಕಳಂಕ ಹಚ್ಚುತ್ತಿದ್ದಾರೆ. ಅಧಿಕಾರ ದಾಹದ ರಾಜಕೀಯ ಮುಖಂಡರು ಜಾತಿ ಧರ್ಮಗಳ ಹೆಸರಲ್ಲಿ ಜನರನ್ನು ಪರಸ್ಪರ ಕಚ್ಚಾಡಿಸುತ್ತಿದ್ದಾರೆ. ಸ್ವಾರ್ಥ ರಾಜಕಾರಣಿಗಳ ಕುಯುಕ್ತಿಗಳಿಗೆ ಬಲಿಯಾಗಿ ಜನರು ಸಹೋದರತೆ ಸಾಮರಸ್ಯಗಳನ್ನು ಮರೆತು ಸಂಘರ್ಷದ ಹಾದಿ ಹಿಡಿದಿದ್ದಾರೆ.
ಮಹಾತ್ಮ ಗಾಂಧಿ, ಪಂಡಿತ್ ನೆಹರು, ಇಂದಿರಾ ಗಾಂಧಿ, ವಾಜಪೇಯಿ ಮುಂತಾದ ರಾಷ್ಟ್ರೀಯ ನಾಯಕರು ಕಟ್ಟಿದ ಭವ್ಯ ಭಾರತ ಮತೀಯ ಸಂಘರ್ಷದ ರುದ್ರ ಭೂಮಿಯಾಗಿ ಮಾರ್ಪಟ್ಟಿರುವುದು ನಮ್ಮ ದೌರ್ಭಾಗ್ಯ! ಇದರಿಂದಾಗಿ ದೇಶ ಅವನತಿಯತ್ತ ಸಾಗುತ್ತಿದೆ; ಬಡವರ ಕಷ್ಟ ಕಾರ್ಪಣ್ಯಗಳು ಹೆಚ್ಚುತ್ತಲೇ ಇವೆ. ಕಾಂಗ್ರೆಸ್ ಅಲ್ಲದೆ ಬೇರೆ ಯಾವ ರಾಜಕೀಯ ಪಕ್ಷಗಳು ದೇಶೋದ್ಧಾರದ ಚಿಂತನೆಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಅಧಿಕಾರ ದಾಹ ಮತ್ತು ಸ್ವಾರ್ಥ ಸಾಧನೆಯ ಪರಕಾಷ್ಠೆಯಲ್ಲಿ ಮೆರೆಯುತ್ತಿವೆ. ಈ ಅವ್ಯವಸ್ಥೆಯ ಕುರಿತು ಎಲ್ಲಾ ಧರ್ಮೀಯ ಬುದ್ಧಿ ಜೀವಿಗಳು ಜಾಗೃತರಾಗಬೇಕಾದುದು ರಾಷ್ಟ್ರೀಯ ಹಿತ ದೃಷ್ಟಿಯಿಂದ ಅತ್ಯಂತ ಅನಿವಾರ್ಯ ಎಂದು ರೈ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶಾಸಕ, ಉದ್ಯಮಿ ಕೋಡಿಂಬಾಡಿ ಅಶೋಕ್ ರೈ ಜನತೆಗೆ ಕರೆ ನೀಡಿದ್ದಾರೆ.
ಸಾಮಾಜಿಕ ಕ್ಷೇತ್ರಕ್ಕೆ ಬದುಕನ್ನೇ ಸಮರ್ಪಿಸಿ ತನ್ನ ಸಂಪತ್ತಿನ ಒಂದು ಭಾಗವನ್ನು ತಾಯ್ನಾಡಿನ ಸೇವೆಗಾಗಿ ಧಾರೆಯೆರೆದ ಶಾಸಕ ಶ್ರೀಮಾನ್ ಅಶೋಕ್ ರೈಯವರು ಅಸಂಖ್ಯಾತ, ಅಸಹಾಯಕರ, ದುರ್ಬಲರ, ನಿರ್ಗತಿಕರ, ದೀನ ದುಃಖಿತರ ಕಣ್ಣೀರು ಒರಸಿ ಅವರಿಗೆ ಅಭಯ ಹಸ್ತವನ್ನು ನೀಡಿ ಸಂತೈಸಿದ ಸಹೃದಯಿ. ಜಾತಿ ಧರ್ಮಗಳ ಹೆಸರಲ್ಲಿ ಪರಸ್ಪರ ಕಾದಾಡುತ್ತಿರುವ ದೃಶ್ಯವನ್ನು ಕಂಡು ಹೃದಯ ಕರಗಿದ ಶ್ರೀ ಅಶೋಕ್ ರೈ ಎಲ್ಲಾ ಧರ್ಮೀಯ ಸಹೋದರರನ್ನು ಭಾವೈಕ್ಯದ ಬಂಧನದಲ್ಲಿ ಅಪ್ಪಿಕೊಂಡು ನಾವೆಲ್ಲಾ ಒಂದೇ ತಾಯಿಯ ಮಕ್ಕಳು ಒಂದೇ ತಾಯಿಯ ಮಮತೆಯ ಮಡಿಲಲ್ಲಿ ಬೆಳೆದು ಬಂದವರು. ಪರಸ್ಪರ ಸಹೋದರತೆಯಿಂದ ಕಲೆತು ಬಾಳೋಣ ಎಂಬ ಮಾನವೀಯತೆಯ ಮಾತುಗಳಿಂದ ಪರಸ್ಪರರನ್ನು ಒಂದುಗೂಡಿಸಿ ಸಾಧಿಸುವಲ್ಲಿ ಸೌಹಾರ್ದತೆಯ ಸಂಕೋಲೆ ಬಿಗಿದ ರಾಷ್ಟ್ರ ಪ್ರೇಮಿ ಶ್ರೀ ಅಶೋಕ್ ರೈ ನಾಡಿನಲ್ಲಿ ಮತೀಯ ಸೌಹಾರ್ದತೆ ಸ್ಥಾಪಿಸಲು ಯತ್ನಿಸುತ್ತಿದ್ದಾರೆ. ಶ್ರೀ ಅಶೋಕ್ ರೈ ಗಳ ಸೌಹಾರ್ದತಾ ಅಭಿಯಾನ, ಸಾಮಾಜಿಕ ಕಳಕಳಿ ಬಡವರ ಬಗ್ಗೆ ಅವರು ತೋರುವ ಕಾಳಜಿಯನ್ನು ಮುರಿಯಲು ಕೆಲ ರಾಜಕಾರಣಿಗಳು ಶತ ಪ್ರಯತ್ನ ಮಾಡಿದರೂ ಅದು ಫಲಿಸಲಿಲ್ಲ.
ನಿಷ್ಕಳಂಕ ವ್ಯಕ್ತಿತ್ವ, ನಿಸ್ವಾರ್ಥ ಮನೋಭಾವ ಶ್ರೀ ಅಶೋಕ್ ರೈಗಳು ಜೀವನದಲ್ಲಿ ಪಾಲಿಸಿಕೊಂಡು ಬಂದ ಸತ್ಯ ಅವರನ್ನು ಎಲ್ಲಾ ವಿಪ್ಪತ್ತುಗಳಿಂದ ರಕ್ಷಿಸಿದೆ ಎಂದು ಅಭಿಮಾನದಿಂದ ಹೇಳಬಹುದು. ದೇಶದಲ್ಲಿ ಶಾಂತಿ ಸೌಹಾರ್ದತೆಗಳು ಶಾಶ್ವತವಾಗಿ ನೆಲೆಗೊಂಡು ಜನರಲ್ಲಿ ಭಾರತೀಯತೆಯ ಭಾವನೆ ಮೂಡಿ ಬರಬೇಕಾದರೆ ಜನಪ್ರಿಯ ಶಾಸಕ ಪುತ್ತೂರಿನ ಶ್ರೀ ಆಶೋಕ್ ರೈ ರಂತಹ ನಾಯಕತ್ವ ಪ್ರಸಕ್ತ ಸನ್ನಿವೇಶದಲ್ಲಿ ಅನಿವಾರ್ಯವಾಗಿದೆ.
ಶೇಖ್ ಇಸಾಕ್ ಸಂಪಾದಕರು, ಕಾಕೋ೯ಟಕ ಸಾಪ್ತಾಹಿಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.