(www.vknews. in) SKSSF ಕಟ್ಟತ್ತಾರು ಶಾಖೆಯಿಂದ SKSSF ಸ್ಥಾಪಕ ದಿನಾಚರಣೆ.
SKSSF ಕೇಂದ್ರ ಸಮಿತಿಯ ಅಧ್ಯಕ್ಷರಾದ ಸೈಯದ್ ಹಮೀದ್ ಅಲಿ ಶಿಹಾಬ್ ತಂಙಲ್ ನಿರ್ದೇಶನದಂತೆ ಪ್ರತಿ ಯುನಿಟ್ ನಲ್ಲಿ SKSSF ನ ಸ್ಥಾಪಕ ದಿನ ಆಚರಿಸವಸುವಂತೆ ಕೇಂದ್ರ ಸಮಿತಿಯ ಅಹ್ಮಾನ ನೀಡಿದರು .
ಆದುದರಿಂದ SKSSF ಕಟ್ಟತ್ತಾರು ಶಾಖೆಯಿಂದ ಇಂದು ಬೆಳಿಗ್ಗೆ ಕಟ್ಟತ್ತಾರು ಜಂಕ್ಷನ್ ನಲ್ಲಿ SKSSF ನ ಸ್ಥಾಪಕ ದಿನ ಆಚರಿಸಲಾಯಿತು. ಶಾಖಾಧ್ಯಕ್ಷರಾದ ಅಶ್ರಫ್ ಕೆ ಪಿ ರವರ ಅಧ್ಯಕ್ಷತೆಯಲ್ಲಿ. ಸಮಸ್ತ ಕೇರಳ ಜಂಯ್ಯತುಲ್ ಉಲಮಾ ಪುತ್ತೂರು ತಾಲ್ಲೂಕು ಕೋಶಾಧಿಕಾರಿಯಾದ ಬಹು ಶೈಖುನಾ ಉಮರ್ ಉಸ್ತಾದ್ ನಂಜೆ ಧ್ವಜಾರೋಹಣಕ್ಕೆ ನೇತೃತ್ವ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದನಂತರ ಕುಂಬ್ರ ರೇಂಜ್ ಜಂಯ್ಯತುಲ್ ಮುಅಲ್ಲಿಂನ ಉಪಾಧ್ಯಕ್ಷರಾದ ಬಹು ಆಬೂಬಕ್ಕರ್ ದಾರಿಮಿ ಉಸ್ತಾದ್ ಕಟ್ಟತ್ತಾರು ದುಅ ನೇತೃತ್ವ ವಹಿಸಿದ್ದರು.ಶಾಖಾ ಮಾಜಿ ಅಧ್ಯಕ್ಷಾರದ ಬಹು ಶಮೀರ್ ಪೈಝಿ ಕಟ್ಟತ್ತಾರು ಸಭಿಕರನ್ನು ಸ್ವಾಗತಿಸಿ ಸಂದೇಶ ಭಾಷಣ ಮಾಡಿದರು. ಸಮಸ್ತದ ಮಹತ್ವ SKSSF ನಡೆದು ಬಂದ ಹಾದಿಯನ್ನು ಮತ್ತು ಸಮ್ತಸದ ನಾಯಕರನು ಸ್ಮರಸಿ ಅವರು ಸೇವೆಯನ್ನು ಗುರುತಿಸಿ ಅದೇ ಸಮಸ್ತ ಹಾದಿಯಲ್ಲಿ ಮರಣ ತನಕ ಧೃಡವಾಗಿ ನಿಲ್ಲಲು ಕಾರ್ಯಕರ್ತರಿಗೆ ಉಪದೇಶಿಸಿದರು .ಕಾರ್ಯಕ್ರಮದಲ್ಲಿ ಶಾಖಾ ಕೋಶಾಧಿಕಾರಿ ಅಬೂಬಕರ್ ಕಟ್ಟತ್ತಾರು, ಬಿ.ಎಂ. ಉಮರ್ ಹಾಜಿ ಕಟ್ಟತ್ತಾರು, ಪುತ್ತು ಹಾಜಿ ಕಟ್ಟತ್ತಾರು,ಯೂಸುಫ್ ಹಾಜಿ ಕಟ್ಟತ್ತಾರು ಮುಹಮ್ಮದ್ ಕೋಟ್ರಾಸ್, ಖಾಲಿದ್ ಸಂಟ್ಯಾರ್ ನವೀದ್ ನಿಡ್ಯಾಣ, ಸಿ.ಬಿ. ಬಶೀರ್ ಕಟ್ಟತ್ತಾರು, ಶಾಪಿ ನಿಡ್ಯಾಣ ,ಸಮದ್ ಸಂಟ್ಯಾರ್, ಮುಹಮ್ಮದ್ ನಿಡ್ಯಾಣ, ಹಮೀದ್ ನಿಡ್ಯಾಣ, ಅಬ್ಬಾಸ್ ನಿಡ್ಯಾಣ, ಅನ್ವರ್ ಅಲಿ ಕಟ್ಟತ್ತಾರು, ಫಾರೂಖ್ ಕಟ್ಟತ್ತಾರು ಸ್ವಫ್ವಾನ್ ಬೇರಿಕೆ , ಇನ್ನಿತರ ಹಲವಾರು ಉಲಮಾ ಉಮರಾ ನಾಯಕರು ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಖಬರ್ ಝಿಯಾರತ್ ಹಾಗೂ ಸಿಹಿ ತಿಂಡಿ ವಿತರಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.