(www.vknewd.in) ; ಹಝ್ರತ್* ಶೀಶ್ ರವರ ಮಕ್ಕಳಲ್ಲಿ ಅವರದೇ ರೂಪ ಭಾವವಿರುವ ಒಬ್ಬರಾಗಿದ್ದರು ಹಝ್ರತ್ *ಅನೂಷ್.* ಶೀಶ್ರವರಿಗೆ ತಂದೆ ಆದಮರು ಕೊಟ್ಟ ಪೆಟ್ಟಿಗೆಯಲ್ಲಿ ಶೇಖರಿಸಿಟ್ಟಿದ್ದ ಅವರ ಗಡ್ಡದ ಕೂದಲುಗಳು ಬಿಳಿಯಾಗ ತೊಡಗಿದಾಗ ಮಗನಿಗೆ ಖಚಿತವಾಯಿತು, ತನ್ನ ಮರಣ ಸಮೀಪದಲ್ಲೇ ಇದೆ ಎಂದು. ಬಳಿಕ ಕೆಲವೇ ವರ್ಷಗಳಾಗುವಾಗ ಹಝ್ರತ್ ಶೀಶ್ರವರು ತನ್ನ ಏಳುನೂರ ಇಪ್ಪತ್ತನೆಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಆ ವೇಳೆ ಅವರು ಮಗ *ಅನೂಷರಿಗೆ* ತಂದೆಯ ಆಸ್ತಿಯಾಗಿದ್ದ ಪೆಟ್ಟಿಗೆಯನ್ನು ಹಸ್ತಾಂತರ ಮಾಡಿದರು. ಮಾತ್ರವಲ್ಲ ಖಾಬೀಲನ ಸಂತತಿಯನ್ನು ಸದೆಬಡಿಯಲು ಕೂಡ ಮಗನಲ್ಲಿ ವಸಿಯ್ಯತ್ ಮಾಡಿದರು.
*ಅನೂಷ್ರವರು* ಸುಮಾರು ಮುನ್ನೂರು ಚಿಲ್ಲರೆ ವರ್ಷಗಳ ಕಾಲ ಬದುಕಿದರು. ಅವರು ತನ್ನ ಮರಣವೇಳೆ ತನ್ನ ಜವಾಬ್ದಾರಿಯನ್ನು ಮಗನಾದ *ಖಯ್ನಾನ್* ಗೆ ಕೊಟ್ಟರು. *ಖಯ್ನಾನ್* ರವರು ತಂದೆ *ಅನೂಷರ* ಮರಣ ನಂತರ ಸುಮಾರು ಇನ್ನೂರ ಐವತ್ತು ವರ್ಷ ಬದುಕಿದ್ದರು.
*ಖಯ್ನಾನ್* ವಫಾತಾದಾಗ ಈ ಜವಾಬ್ದಾರಿಯು ಅವರ ಮಗ *ಮಹ್ಲಾಯೀಲ್* ಎಂಬವರಿಗೆ ಬಂತು. ಆ ಸಂದರ್ಭದಲ್ಲಿ ಆದಮರ ಸಂತತಿಯ ಸಂಖ್ಯೆಯಲ್ಲಿ ಜಾಸ್ತಿಯಾಗಿ ಮಕ್ಕಾ ಮತ್ತು ಪರಿಸರ ಪ್ರದೇಶ ಬದುಕಲು ಕೂಡ ಕಷ್ಟವಾದ ರೂಪದಲ್ಲಾಗಿತ್ತು.
*ಇದನ್ನರಿತ* ಕುಟುಂಬದ ಹಿರಿಯ ನಾಯಕ *ಮಹ್ಲಾಯೀಲ್* ರವರು ಬೇರೆ ಐದು ಜಾಗಗಳಿಗೆ ಕುಟುಂಬವನ್ನು ಐದು ಪಂಗಡಗಳಾಗಿ ವಿಂಗಡಿಸಿ ಕಳುಹಿಸಿ ಕೊಟ್ಟರು. ಮಾತ್ರವಲ್ಲ ಅಲ್ಲಿ ಅವರಿಗೆ ವಾಸಿಸಲು ಬೇಕಾದ ಮನೆ ಮತ್ತು ವ್ಯವಹಾರ ಮಾಡಲು ಬೇಕಾದ ವ್ಯವಸ್ಥೆ ಕೂಡ ಮಾಡಿಕೊಟ್ಟರು. ಅಲ್ಲದೆ ಅವರಿಗೆ ಪ್ರವಾದಿ ಆದಮರ ಶರೀಅತ್ ಪ್ರಕಾರ ಧಾರ್ಮಿಕವಾಗಿ ಬೋಧನೆ ಮಾಡಲು ಕುಟುಂಬದಲ್ಲಿ ಐದು ಜನರು ವಿದ್ವಾಂಸರಾದ ಹಿರಿಯರನ್ನು ಕಳುಹಿಸಿ ಕೊಟ್ಟರು. *ವದ್ದ್, ಸುವಾಅ್, ಯಗೂಸ್, ಯವೂಖ್, ನಸ್ರ್* ಎಂಬ ಈ ಐದು ಮಂದಿ ಐದು ಪಟ್ಟಣಗಳಲ್ಲಿ ಖಲೀಫರುಗಳಂತೆ ಭೋದನೆ ಮಾಡ ತೊಡಗಿದರು.
ಜನಸಮುದಾಯವು ಇವರುಗಳಿಗೆ ಬಹಳ ಉತ್ತಮ ರೀತಿಯಲ್ಲಿ ಸ್ಪಂದಿಸಿ ಬದುಕು ಬಹಳ ಉತ್ತಮವಾಗಿ ನಡೆಯುತ್ತಿತ್ತು. ಕಾಲಕ್ರಮೇಣ ಈ ಐವರು ಒಬ್ಬೊಬ್ಬರಾಗಿ ವಫಾತಾದರು. ಆದರೆ ಜನರಿಗೆ ಮಾತ್ರ ಇವರಲ್ಲಿದ್ದ ಪ್ರೀತಿ ಮಾಯವಾಗಿರಲಿಲ್ಲ. ಪ್ರೀತಿಯ ಸಂಕೇತವಾಗಿ ಬಳಿಕ ಕೆಲವರು ಇವರ ರೂಪವನ್ನು ಮಾಡಿ ಮನೆಯಲ್ಲಿಟ್ಟರು. ಅದು ಆರಾಧನೆ ಮಾಡಲಿಕ್ಕೆ ಆಗಿರಲಿಲ್ಲ. ಬದಲಾಗಿ ಅವರಲ್ಲಿರುವ ಪ್ರೀತಿಯ ಕಾರಣದಿಂದಾಗಿತ್ತು.
*ಒಂದು* ಪೀಳೆಗೆಯು ಮುಗಿಯಿತು. ನಂತರ ಬಂದ ಅವರ ಮರಿಮಕ್ಕಳು ತಮ್ಮ ಮನೆಯಲ್ಲಿ ಕಾಣಲ್ಪಡುವ ಆ ವಿಗ್ರಹಗಳನ್ನು ಇಬ್ಲೀಸನ ಫಿತ್ನದಿಂದ ಆರಾಧನೆ ಮಾಡಲು ಶುರುಮಾಡಿದರು. ಅಂದಿನಿಂದ ಶುರುವಾಯಿತು ವಿಗ್ರಹಾರಾಧನೆಗೆ ಅಥವಾ ಶಿರ್ಕ್.
*ಇತ್ತ* ಮಹ್ಲಾಯಿಲರಿಂದ ಈ ಜವಾಬ್ದಾರಿಯು ಅವರ ಮಗ ಹಝ್ರತ್ *ಇದ್ರೀಸರಿಗೆ* ಬಂತು. ಇವರನ್ನು ಅಲ್ಲಾಹನು ಪ್ರವಾದಿಯನ್ನಾಗಿ ಮಾಡಿದನು. ಅಲ್ಲದೆ ಮೂವತ್ತು ಹಾಳೆಗಳನ್ನು ಕೂಡ ಕೊಟ್ಟನು. ಅಂತೆಯೇ ಶೀಶ್ರವರಿಗೆ ಅಲ್ಲಾಹನಿಂದ ದೊರೆತ ಹಾಳೆಗಳು ಮತ್ತು ತಂದೆ ಆದಮರ ಪೆಟ್ಟಿಗೆ ಬಳಿಕ ಇವರ ವಶವಾಯಿತು.
*ಇವರು* ಹೊಲಿಗೆಯ (Tailoring) ವೃತ್ತಿ ಮಾಡುತ್ತಿದ್ದರು. ಜಗತ್ತಿನಲ್ಲಿ ಮೊಟ್ಟ ಮೊದಲಿಗೆ ವಸ್ತ್ರ ಹೊಲಿದು ಧರಿಸಲು ಶುರುಮಾಡಿದ್ದು ಇವರಾಗಿರುತ್ತಾರೆ. ಅದಕ್ಕೆ ಮೊದಲು ಜನರು ಪ್ರಾಣಿಗಳ ಚರ್ಮವನ್ನು ಉಡುತ್ತಿದ್ದರು.
*ಈ* ಜಗತ್ತಿನಲ್ಲಿ ಮೊಟ್ಟ ಮೊದಲಾಗಿ ಆಯುಧ ತಯಾರಿ ಮಾಡಿದ್ದು, ತೂಕ ಮತ್ತು ಅಳತೆ ಕಂಡು ಹಿಡಿದದ್ದು ಮತ್ತು ಗೋಳ ಶಾಸ್ತ್ರಕ್ಕೆ ಅಡಿಪಾಯ ಹಾಕಿದ್ದು ಇವರಾಗಿರುತ್ತಾರೆ. ಅಂತೆಯೇ ಪೆನ್ನು ಕಂಡು ಹಿಡಿದು ಮೊದಲಾಗಿ ಬರೆಯಲು ಆರಂಭಿಸಿದವರೂ ಇವರು ತಾನೆ.
*ಪ್ರವಾದಿಯಾಗಿ* ನೇಮಕವಾದ ಇವರು ಖಾಬೀಲನ ಮಕ್ಕಳನ್ನು ಸನ್ಮಾರ್ಗಕ್ಕೆ ಕರೆದರು. ಅವರು ಜಗತ್ತಿನಲ್ಲಿ ಪ್ರಥಮವಾಗಿ ವಾದ್ಯ, ವೀಣೆ, ಕೊಳಲು , ಬ್ಯಾಂಡ್ ಮುಂತಾದ ಸಂಗೀತ ಉಪಕರಣಗಳನ್ನು ಮಾಡಿ ಅದರ ಶಬ್ದ ಕೇಳಿ ಆನಂದಿಸಲು ಶುರುಮಾಡಿದರು. ಹಝ್ರತ್ ಇದ್ರೀಸರು ವಾರದ ಮೂರು ದಿನ ಅವರಿಗೆ ಭೋದನೆ ಕೊಡಲೂ ನಾಲ್ಕು ದಿನ ತನ್ನ ಆರಾಧನೆಗೂ ಮುಡಿಪಾಗಿಟ್ಟರು.
*ಈ* ಇದ್ರೀಸರಿಗೆ ತನ್ನ ಬದುಕಿನಲ್ಲಿ ಒಮ್ಮೆ ಸ್ವರ್ಗ ಕಾಣಬೇಕೆಂಬ ಹಂಬಲವಿತ್ತು. “ಯಾವೊಬ್ಬನೂ ಮರಣ ಹೊಂದದೆ ಸ್ವರ್ಗ ಪ್ರವೇಶ ಮಾಡಲಾರ” ಎಂದು ತಿಳಿದಿದ್ದರೂ ಅವರಿಗೆ ಆ ಆಸೆ ಯಾವಾಗಲೂ ಇತ್ತು.
*ಒಂದು* ದಿನ ಅವರು ಆರಾಧನೆಯಲ್ಲಿ ಮುಳುಗಿರುವಾಗ ಹಝ್ರತ್ ಅಝ್ರಾಯಿಲರು ಒಬ್ಬ ಸುಂದರನಾದ ಯುವಕನ ರೂಪದಲ್ಲಿ ಅವರತ್ತ ಬಂದರು. ಮಾತನಾಡಿ ಮಾತನಾಡಿ ಮಿತ್ರರಾದರು. ಈ ವೇಳೆಯಲ್ಲಿ ಹಝ್ರತ್ ಇದ್ರೀಸ್ರವರಿಗೆ ಇದು ಮಲಕ್ ಎಂದು ತಿಳಿದಿರಲಿಲ್ಲ. ನಂತರ ಮನೆಯಲ್ಲಿ ಮಾಡಿದ ಔತಣದಲ್ಲಿ ಅತಿಥಿ ಏನನ್ನೂ ತಿನ್ನುವುದಿಲ್ಲವೆಂದು ಕಂಡಾಗ ಸಂಶಯಗೊಂಡ ಅವರು ಕೇಳಿದರು. *”ನೀವು ಯಾರು? ಯಾಕೆ ತಿನ್ನುವುದಿಲ್ಲ”* ಆಗ ಅವರು ಹೇಳಿದರು. *”ನಾನು ಮಲಕುಲ್ ಮೌತ್* ಆಗ ಅವರು ಕೇಳಿದರು. *”ನೀವು ನನ್ನ ರೂಹ್ ತೆಗೆಯಲು ಬಂದಿರುವುದಾ?”* ಆಗ ಅವರು *”ಅಲ್ಲ. ಅದಕ್ಕೆ ಬಂದದ್ದು ಅಲ್ಲ. ಅದಕ್ಕೆ ಬಂದಿದ್ದರೆ ಈ ಒಂದು ದಿನ ಪೂರ್ತಿಯಾಗಿ ನಿಮ್ಮೊಂದಿಗೆ ಇರುತ್ತಿದ್ದೆನಾ? ತಡಮಾಡದೆ ರೂಹ್ ಹಿಡಿಯುತ್ತಿದ್ದೆ. ನಾನು ಬಂದದ್ದು ನಿಮ್ಮೊಂದಿಗೆ ಒಂದೆರಡು ದಿನ ಕಳೆಯಲು”* ಎಂದು ಉತ್ತರ ಕೊಟ್ಟರು. ಆಗ ಹಝ್ರತ್ ಇದ್ರೀಸರು ಹೇಳಿದರು.ಅವರ *”ಏನೇ ಆಗಲಿ. ಇವತ್ತು ಬಂದಿದ್ದೀರಲ್ವಾ? ಬಂದದ್ದಕ್ಕೆ ಬರಿಗೈಯಲ್ಲಿ ಹೋಗಬೇಡಿ. ಒಂದು ಕೆಲಸ ನಡೆಯಲಿ. ನನ್ನ ರೂಹ್ ಒಮ್ಮೆ ಹಿಡಿಯಿರಿ. ನೋಡುವ ಹೇಗಾಗುತ್ತದೆ ಅಂತ?”* ಹಝ್ರತ್ ಅಝ್ರಾಯೀಲ್ (ಅ) ರವರು ಹೇಳಿದರು. *”ಅದು ಅಷ್ಟು ಸುಲಭದ ಕೆಲಸ ಅಲ್ಲ. ಅದರಿಂದ ನಿಮಗೆ ತುಂಬಾ ನೋವು ಕೂಡ ಆಗುತ್ತದೆ.”* ಅದಕ್ಕೆ ಅವರು “ಪರವಾಗಿಲ್ಲ. ನನಗೆ ಒಮ್ಮೆ ಮರಣದ ರುಚಿ ನೋಡಬೇಕು. ಬಳಿಕ ಜೀವ ಪಡೆಯುವಾಗ ಅಲ್ಲಾಹನಲ್ಲಿ ಭಯಭಕ್ತಿ ಜಾಸ್ತಿಯಾಗುತ್ತದೆ” ಎಂದು ಉತ್ತರಿಸಿದರು. ಅಲ್ಲಾಹನ ನಿರ್ದೇಶದಂತೆ ರೂಹ್ ಹಿಡಿದು ನಿಮಿಷದಲ್ಲೇ ವಾಪಾಸು ಕೊಡಲಾಯಿತು.
✍🏻 ಯೂಸುಫ್ ನಬ್ಹಾನಿ ಕುಕ್ಕಾಜೆ
ಸಂಗ್ರಹ: ಇಮಾಮ್ ನುಮೈರಿಯವ ನಿಹಾಯತುಲ್ ಅರಬ್ ಎಂಬ ಗ್ರಂಥದಿಂದ.
ಮುಂದುವರಿಯುವುದು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.