(www.vknews.in) ; ಬಳಿಕ* ಹಝ್ರತ್ ಇದ್ರೀಸರು ಹೇಳಿದರು. *”ನನಗೆ ಬೇರೊಂದು ಬೇಡಿಕೆ ಇದೆ. ಒಮ್ಮೆ ನರಕ ನೋಡಿ ಬರಬೇಕು. ಕರೆದುಕೊಂಡು ಹೋಗಬಹುದಾ?”* ಮಲಕ್ ಅಝ್ರಾಯೀಲ್ ರವರು ಹೇಳಿದರು. *”ಅದು ಬಾರೀ ಕಷ್ಟದ ಸಂಗತಿ. ಅಲ್ಲದೆ ನಿಮಗೆ ಅಲ್ಲಿನ ಭಯಾನಕತೆ ಮತ್ತು ಜನರ ಗೋಳನ್ನು ನೋಡಲು ಸಾಧ್ಯವಿಲ್ಲ. ಏನೇ ಆಗಲಿ ನರಕದ ಕಾವಲುಗಾರ ಹಝ್ರತ್ ಮಾಲಿಕ್ (ಅ) ರವರ ಹತ್ತಿರ ನರಕಕ್ಕೆ ಪ್ರವೇಶಿಸುವ ಯಾವುದಾದರೂ ಬಾಗಿಲ ಬಳಿ ಎಲ್ಲಾದರೂ ಮಾಡುತ್ತೇನೆ.”* ಬಳಿಕ ಹಾಗೆ ಮಾಡಲಾಯಿತು. ನರಕದ ಕಾವಲುಗಾರ ಹಝ್ತತ್ ಮಾಲಿಕ್ (ಅ) ರವರು ಇವರನ್ನು ಕಂಡಾಗ ಒಮ್ಮೆ ದಿಟ್ಟಿಸಿ ಕಣ್ಣು ಮೇಲೆತ್ತಿ ನೋಡಿದರು. ಮಾಲಿಕ್ (ಅ) ರವರ ಈ ನೋಟದಿಂದ ಅವರು ಭಯಭೀತರಾಗಿ ನಡುಕ ತೊಡಗಿದರು. ಬಳಿಕ ಅಲ್ಲಾಹನ ನಿರ್ದೇಶದಂತೆ ಹಝ್ರತ್ ಮಾಲಿಕ್ (ಅ) ರವರು ಇದ್ರೀಸ್ (ಅ) ರವರನ್ನು ನರಕದ ಒಂದು ದ್ವಾರದ ಕಡೆ ನಿಲ್ಲಿಸಿ ಒಳಗಡೆಯ ಭಯಾನಕಗಳನ್ನು ತೋರಿಸಿ ಕೊಟ್ಟರು. ನಂತರ ಭೂಮಿಗೆ ತರಲಾಯಿತು.
*ಮತ್ತೊಮ್ಮೆ* ಒಂದು ದಿನ ಹಝ್ರತ್ ಇದ್ರೀಸರನ್ನು ಮಲಕ್ ಅಝ್ರಾಯೀಲ್ (ಅ) ರವರು ಸಂದರ್ಶಿಸಿದ ವೇಳೆ *”ತನಗೆ ಒಮ್ಮೆ ಸ್ವರ್ಗ ಕಾಣಬೇಕೆಂಬ ಬಯಕೆಯಿದೆ.”* ಎಂದು ಹೇಳಿದರು. ಆಗ ಮಲಕ್ರವರು ಇವರನ್ನು ಕೊಂಡುಹೋಗಿ ಸ್ವರ್ಗದ ಬಾಗಿಲ ಬಳಿ ನಿಲ್ಲಿಸಿದರು. ಕಾವಲುಗಾರ ಹಝ್ರತ್ ರಿದ್ವಾನ್ (ಅ) ರವರು ಒಂದು ಹೊಸ ಮುಖವನ್ನು ನೋಡಿದಾಗ *”ಇದು ಯಾರೆಂದು, ಇಲ್ಲಿಗೆ ಯಾಕೆ ಬಂದಿದ್ದೀರಿ?”* ಎಂದು ಕೇಳಿದರು. ಆಗ ಮಲಕ್ ಅಝ್ರಾಯೀಲ್ (ಅ) ರವರು ಹೇಳಿದರು. *”ಇದು ಪ್ರವಾದಿ ಇದ್ರೀಸ್. ಇವರಿಗೆ ಸ್ವರ್ಗ ಕಾಣಬೇಕಂತೆ.”* ಆಗ ಮಲಕ್ ರಿದ್ವಾನ್ ರವರು ಅಲ್ಲಾಹನ ಅನುಮತಿ ಪಡೆದು ಅವರನ್ನು ಸ್ವರ್ಗದ ಒಳಗೆ ಕೊಂಡುಹೋದರು.
*ಸ್ವರ್ಗ* ಪ್ರವೇಶ ಮಾಡಿದ ಹಝ್ರತ್ ಇದ್ರೀಸರು ಸ್ವರ್ಗದ ಎಲ್ಲಾ ಸುಖ ಸವಲತ್ತುಗಳನ್ನು ನೋಡಿ ಆನಂದಿಸಿದರು. ಅಷ್ಟರಲ್ಲಿ ಕಾವಲುಗಾರ ರಿದ್ವಾನ್ (ಅ) ರವರು ಅವರಲ್ಲಿ ಹೇಳಿದರು. *”ಸಮಯ ಆಯಿತು. ನೋಡಿ ಆಯಿತಲ್ವಾ? ಇನ್ನು ಹೊರಗೆ ಹೋಗುವ”* ಆಗ ಇದ್ರೀಸರು *”ಹೊರಹೋಗ ಬೇಕೆಂದಿದ್ದರೆ ನಾನು ಒಳಗೆ ಸ್ವರ್ಗಕ್ಕೆ ಬರುತ್ತೇನಾ? ಸ್ವರ್ಗ ಪ್ರವೇಶ ಮಾಡಿದ ಒಬ್ಬನು ಹೊರಹೋಗುವ ಕತೆ ಎಲ್ಲಾದರೂ ಇದೆಯಾ? ಇದೆಂತಹಾ ನ್ಯಾಯ? “* ಎಂದು ಕೇಳಿದರು. ಒಟ್ಟಿನಲ್ಲಿ ಅವರಿಬ್ಬರ ಮಧ್ಯೆ ಅಲ್ಲಿ ಮಾತಿನ ಜಟಾಪಟಿಯಾಯಿತು.
*ಆ ಸಂದರ್ಭದಲ್ಲಿ* ಅವರ ರೂಹ್ ಹಿಡಿಯಲು ಹಝ್ರತ್ ಅಝ್ರಾಯೀಲ್ (ಅ) ರವರು ಬಂದರು. ಪ್ರವಾದಿ ಇದ್ರೀಸರು ಅವರಲ್ಲಿ ಕೇಳಿದರು. *”ಯಾಕೆ ಬಂದಿದ್ದೀರಿ. ಒಬ್ಬನ ರೂಹ್ ಎರಡು ಸಲ ತೆಗೆಯುವ ಕಾನೂನು ಎಲ್ಲಾದರೂ ಉಂಟಾ?”* ಒಟ್ಟಿನಲ್ಲಿ ಅಲ್ಲಿಯೂ ಅವರೊಂದಿಗೂ ಮಾತಿನ ಚಕಮಕಿಯಾಯಿತು.
*ಬಳಿಕ* ಇವರ ದೂರನ್ನು ತೆಗೆದುಕೊಂಡು ಹಝ್ರತ್ ಅಝ್ರಾಯೀಲ್ (ಅ) ರವರು ಅಲ್ಲಾಹನ ಬಳಿ ಹೋದಾಗ ಇವರು ಮಾತನಾಡುವುದಕ್ಕಿಂತ ಮೊದಲೇ ಅಲ್ಲಾಹನು ಹೇಳಿದನು. *”ಅವರನ್ನು ಹಾಗೆಯೇ ಬಿಟ್ಟುಬಿಡಿ. ಅವರು ಸ್ವರ್ಗ ಪ್ರವೇಶ ಮಾಡಿದ್ದು ಮತ್ತು ನಿಮ್ಮಲ್ಲಿ ಮತ್ತು ರಿದ್ವಾನರಲ್ಲಿ ಮಾತಾಡಿದ್ದು ನನಗೆ ತಿಳಿದಾಗಿದೆ. ಅವರು ಸ್ವರ್ಗದಲ್ಲೇ ಇರಲಿ. ಅವರು ನಿಮ್ಮಲ್ಲಿ ಮಾತಾಡಿದ್ದೆಲ್ಲವೂ ನನ್ನ ಇರಾದೆಯಿಂದಲೂ ಆಗಿದೆ.”* ಈ ಘಟನೆಯನ್ನು ಅಲ್ಲಾಹನು ಪವಿತ್ರ ಕುರ್ಆನಿನ ಮರ್ಯಮ್ ಅಧ್ಯಾಯದ ಐವತ್ತೇಳನೆಯ ಸೂಕ್ತದಲ್ಲಿ *”ಅವರನ್ನು ನಾವು ಉನ್ನತವಾದ ಸ್ಥಳಕ್ಕೆ ಏರಿಸಿದ್ದೇವೆ”* ಎಂದು ಹೇಳಿ ಬಣ್ಣಿಸಿದ್ದಾನೆ.
*ಒಟ್ಟಿನಲ್ಲಿ* ಹಝ್ರತ್ ಇದ್ರೀಸರು ಈಗಲೂ ಸ್ವರ್ಗದಲ್ಲಿ ಬಹಳ ಸುಖದಿಂದ ಇದ್ದಾರೆ. ಕೆಲವೊಮ್ಮೆ ನಾಲ್ಕನೆಯ ಆಕಾಶಕ್ಕೆ ಬಂದು ಅಲ್ಲಾಹನ ಧ್ಯಾನದಲ್ಲಿ ಮುಳುಗುತ್ತಾರೆ.
✍🏻 ಯೂಸುಫ್ ನಬ್ಹಾನಿ ಕುಕ್ಕಾಜೆ
ಸಂಗ್ರಹ: ಇಮಾಮ್ ನುಮೈರಿಯ *ನಿಹಾಯತುಲ್ ಅರಬ್* ಎಂಬ ಗ್ರಂಥದಿಂದ.
ಮುಂದುವರಿಯುವುದು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.