(www.vknews.in) : ಸಚಿವ ಜಮೀರ್ ಅಹ್ಮದ್ ಅವರು ಮಂಗಳವಾರ ಮಧ್ಯಾಹ್ನ ಮರ್ಕಝ್ ಕಾರಂದೂರು ಕ್ಯಾಂಪಸ್ ಭೇಟಿ ನೀಡಿ, ಶೈಖುನಾ ಸುಲ್ತಾನುಲ್ ಉಲಮಾರ ಭೇಟಿಯಾಗಿ, ಸಂಜೆ 4.30ಗಂಟೆ ಹೊತ್ತಿಗೆ ಮರ್ಕಝ್ ನಾಲೆಜ್ ಸಿಟಿಗೆ ಇಫ್ತಾರ್ ಅತಿಥಿಯಾಗಿ ತಲುಪಿದರು. ಮೌಲಾನಾ NKM ಶಾಫಿ ಸಅದಿ, ನೌಫಾಲ್ NM, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾದ ಜನಾಬ್ ಅನ್ವರ್ ಭಾಷಾ ಒಳಗೊಂಡಿದ್ದ 5-6ಜನರ ತಂಡ ಗ್ರಾಂಡ್ ಮಸ್ಜಿದ್ ಆಗಮಿಸುತ್ತಲೇ, ಅಸರ್ ನಮಾಝ್ ಇಮಾಮ್ ಜಮಾಅತ್ ಮಾಡಿ ನಮಾಝ್ ನಿರ್ವಹಿಸಿ, ಅವರಷ್ಟಕ್ಕೆ ಮಸ್ಜಿದ್ ವೀಕ್ಷಣೆ ಮಾಡುತ್ತಿದ್ದರು.
ಮಸ್ಜಿದ್ ಮುಂಬಾಗ ನಡೆಯುತ್ತಿದ್ದ ಮಜ್ಲಿಸ್ ಆಗಲಿ, ಮಸ್ಜಿದ್ ಒಂದು ಮೂಲೆಯಲ್ಲಿ ಕುಳಿತು ಕಿತಾಬ್ ನೋಡುತ್ತಿದ್ದ ನಾಲೆಜ್ ಸಿಟಿ ಚಾಲಕ ಶಕ್ತಿ ಹಕೀಂ ಅಝ್ಝರಿ ಯವರಲ್ಲಿ, ಕುಳಿತಿದ್ದ ವಿಶ್ವಾಸಿಗಳಿಗಾಗಲಿ ಯಾವುದೇ ವಿಶೇಷತೆ ಕಂಡು ಬರಲಿಲ್ಲ. ಒಬ್ಬ ರಾಜಕಾರಣಿ ಬಂದಾಗ ನಡೆಯುವ ದೃಶ್ಯಕ್ಕಿಂತ ವಿಭಿನ್ನವಾದ ನಡೆ ಡಿಫರೆಂಟ್ ಆಗಿ ಅನುಭವಕ್ಕೆ ಬಂತು. ಒಬ್ಬ ವಿಶ್ವಾಸಿಯಾಗಿ ಮಸ್ಜಿದ್ ಒಳಗಡೆ ಯಾವ ರೀತಿ ಒಬ್ಬರು ಆಗಮಿಸಿ, ನಿರ್ಗಮಿಸಬಹುದೋ ಅದೇ ದೃಶ್ಯಗಳು ಆಗಿತ್ತು ಕಣ್ಣಮುಂದೆ. ಒಬ್ಬರು ಸಾರ್ವಜನಿಕ ರಂಗದಲ್ಲಿ ಇರುವ ಒಬ್ಬರನ್ನು ಗೌರವಿಸುವುದು ತಪ್ಪೇನೂ ಅಲ್ಲ. ಆದರೆ ಅಲ್ಲಾಹುವಿನ ಭವನದೊಳಗೆ ಯಾವ ರೀತಿ ಇತಿಮಿತಿ ಪಾಲಿಸಬಹುದೆಂಬುದನ್ನು ಸ್ಪಷ್ಟವಾಗಿ ನೋಡಿ ತಿಳಿದುಕೊಂಡೆ.
ಕಿತಾಬ್ ನೋಡುತ್ತಿದ್ದ ಹಕೀಂ ಅಝ್ಝರಿ ಉಸ್ತಾದ್, ಘನವೆತ್ತ ಕರ್ನಾಟಕದ ಪ್ರಮುಖ ಸಚಿವರನ್ನು ಭೇಟಿಯಾಗಲು ತೆರಳುವುದು ಇಫ್ತಾರ್ ಗೆ ಹತ್ತಿರವಾಗುವ ಸುಮಾರು 6ಗಂಟೆ ಹೊತ್ತಿಗೆ. ಅದರೆಡೆ ನಾಲೆಜ್ ಸಿಟಿ ಕ್ಯಾಂಪಸ್ ಜಮೀರ್ ವೀಕ್ಷಿಸಿ ಬಂದಿದ್ದರು. ಬಹಳ ಗೌರವಾದರಗಳಿಂದ ಹಕೀಂ ಉಸ್ತಾದರನ್ನು ಸ್ವೀಕರಿಸಿ ಗೌರವಿಸಿದ ಜಮೀರ್. ಇಫ್ತಾರ್ ಗೆ ಕುಳಿತುಕೊಂಡವರ ಜೊತೆ ಒಂದು ಸುತ್ತು ನಡೆದುಕೊಂಡು ಇಫ್ತಾರ್ ಗೆ ಎಲ್ಲರೊಂದಿಗೆ ಕುಳಿತುಕೊಂಡರು.
ಮಗ್ರಿಬ್ ಬಳಿಕ ಜಮೀರ್ ಬಂದಿದ್ದ ವಿಶ್ವಾಸಿಗಳೊಂದಿಗೆ ಈ ರೀತಿ ತನ್ನ ಅಭಿಪ್ರಾಯ ಹಂಚಿಕೊಂಡರು, ನನಗೆ ಶಾಫಿ ಸಅದಿಯವರು ಕೇರಳೀಯ ಉಲಮಾಗಳ ಶೈಕ್ಷಣಿಕ ಕ್ರಾಂತಿ, ಸಮುದಾಯ ಸೇವಾರಂಗದ ಕುರಿತು ಮಾಹಿತಿ ಕೊಡುತ್ತಿರುತ್ತಾರೆ, ಇದು ನಾನು ಯೋಚಿಸಿದಕ್ಕಿಂತ ಭಿನ್ನವಾಗಿದೆ. ದೇಶದಲ್ಲೋ, ವಿದೇಶದಲ್ಲೋ ನಮ್ಮ ಸಮುದಾಯದಲ್ಲಿ ಕಂಡಿರದ ಕನಸು ಹೆಮ್ಮರವಾಗಿ ಬೆಳೆದುಬಿಟ್ಟಿದೆ, ಈ ನಿಮ್ಮ ಸೇವಾರಂಗ ಕರ್ನಾಟಕದಲ್ಲಿ ಬೆಳೆಯಬೇಕು, ನಾನು ಮುಖ್ಯಮಂತ್ರಿಯನ್ನು ಕರೆದುಕೊಂಡು ಬಂದು ಇದು ತೋರಿಸಿ ಕೊಡುತ್ತೇನೆ, ನಮ್ಮ ಮಣ್ಣಲ್ಲಿ ಇಂತಹ ಸಂಸ್ಥೆ ಕಟ್ಟಲು ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂಬ ಭರವಸೆಯ ಮಾತುಗಳು ಆಡಿದರು.
ಒಂದು ರೀತಿ ಸಮುದಾಯದ ಹೊಸ ಮುಖ ನೋಡಿದ ಸಂತೋಷ ಮತ್ತು ಸಂಭ್ರಮ ಅವರ ಮುಖ ಹಾವ ಭಾವದಲ್ಲಿ ಮನೆಮಾಡಿತ್ತು. ಆ ಸಂಭ್ರಮವನ್ನು ಸಂತೋಷದಿಂದ ಆಸ್ವಾದಿಸಿದರು. ಇಂತದ್ದೇ ಶೈಕ್ಷಣಿಕ ಸಿಟಿ ನಮ್ಮ ಮಣ್ಣಲ್ಲಿ ಕಟ್ಟಬೇಕು, ಅದರ ಸ್ಥಳದ ವ್ಯವಸ್ಥೆ ನಾನು ಮಾಡುತ್ತೇನೆಂದು ಭರವಸೆಯನ್ನೂ ಬಹಿರಂಗವಾಗಿ ಘೋಷಿಸಿದರು.
ಉಲಮಾಗಳು ತಮ್ಮ ಅಸ್ತಿತ್ವದಲ್ಲೇ ನಿಂತು, ತಮ್ಮ ಶಕ್ತಿಯ ಅರಿತುಕೊಂಡಾಗ ಯಾವತ್ತೂ ರಾಜಕಾರಣಿಗಳ ಹಿಂದೆ ಹೋಗುವ ಅಗತ್ಯ ಬರುವುದಿಲ್ಲ, ರಾಜಕಾರಣಿಗಳು ಉಲಮಾಗಳ ಜೊತೆ ಬರುತ್ತಾರೆ, ಅದೇ ಆಗಿದೆ ಇತ್ತೀಚಿಗೆ ಶಾಫಿ ಸಅದಿ ಜೊತೆ ಮುಸ್ಲಿಂ ಸಮುದಾಯದ ಸೀಟ್ ಹಂಚಿಕೆ ವಿಷಯವಾಗಿ ದೆಹಲಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಯನ್ನು ಕಾಣಲು ಜಮೀರ್ ಹೋಗಿ ಬಂದಿದ್ದು, ಇವತ್ತು ಹಕೀಂ ಉಸ್ತಾದ್ ತನ್ನ ಕಿತಾಬ್ ಕೆಳಗಿಡದೆ, ತನ್ನ ಜವಾಬ್ದಾರಿ ಅದರ ಸಮಯವಾದಾಗ ನಿರ್ವಹಿಸಿದ್ದು.
ಇದೇ ಸಂದರ್ಭ ಎಪಿ ಉಸ್ತಾದ್, ಶಾಫಿ ಸಅದಿ ಉಸ್ತಾದ್ಗೂ, ವಿಷನ್ ಬಳಗದ ಎಮ್ ಡಿ ನೌಫಲ ಎನ್ ಎಮ್ ಗೂ ಮರ್ಕಝ್ ಜೊತೆ ಶಕ್ತಿ ತುಂಬುವ ಪ್ರಯತ್ನಕ್ಕೆ ವಿಶೇಷ ಪ್ರಾರ್ಥನೆ ಮಾಡಿ ಹಾರೈಸಿದರು.
✍️ ರಾಫಿ ನಗರ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.