ದುಬೈ (www.vknews.in) : ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಇದರ ಯು ಎ ಇ ಕಲ್ಚರಲ್ ಸಮಿತಿಯ ವತಿಯಿಂದ ದಿನಾಂಕ 17/03/2024 ನೇ ರವಿವಾರದಂದು ದುಬೈ ಅಲ್ ರಾಶಿದಿಯ್ಯದಲ್ಲಿರುವ ಪೇಸ್ ಮಾಡ್ರನ್ ಬ್ರಿಟಿಷ್ ಸ್ಕೂಲ್ ನಲ್ಲಿ ವಿಜೃಂಭಣೆಯಲ್ಲಿ ಇಫ್ತಾರ್ ವಿದ್ ಖಾಝಿಯಾರ್ ಕಾರ್ಯಕ್ರಮ ನೆರವೇರಿತು.
ಇಫ್ತಾರ್ ಪೂರ್ವ ಕಾರ್ಯಕ್ರಮದ ಪ್ರಕಾರ ಅಪರಾಹ್ನ 04.30 ಕ್ಕೆ ಸರಿಯಾಗಿ ಸಯ್ಯದ್ ಆಸ್ಕರ್ ಅಲಿ ತಂಗಳ್ ರವರ ನೇತೃತ್ವದಲ್ಲಿ ಮಜ್ಲಿಸುನ್ನೂರ್ ನೆರವೇರಿತು. ಬಳಿಕ ಉಸ್ತಾದ್ ಶಹೀರ್ ಹುದವಿಯವರಿಂದ ಮುಖ್ಯ ಪ್ರಭಾಷಣ ನೆರವೇರಿತು. ಈ ಸಂದರ್ಭ ವೇದಿಕೆಯಲ್ಲಿ ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಕೇಂದ್ರ ಸಮಿತಿಯ ಅದ್ಯಕ್ಷರೂ, ಸಮಸ್ತ ಕೇಂದ್ರ ಮುಶಾವರ ಸದಸ್ಯರೂ, ದಕ್ಷಿಣ ಕನ್ನಡ ಜಿಲ್ಲಾ ಖಾಝಿಯೂ ಆಗಿರುವ ಶೈಖುನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ , ದಾರುನ್ನೂರ್ ಯುಎಇ ಅದ್ಯಕ್ಷರಾದ ಜನಾಬ್ ಮಹಮ್ಮದ್ ಮಾಡಾವು , ದಾರುನ್ನೂರ್ ಮಜ್ಲಿಸುನ್ನೂರ್ ಅಮೀರ್ ಹಾಗೂ ಉಪದೇಶಕರಾದ ಸಯ್ಯದ್ ಆಸ್ಕರ್ ಅಲಿ ತಂಗಳ್ , ದಾರುನ್ನೂರ್ ಕಾಶಿಪಟ್ಣ ಸದರ್ ಮುದರ್ರಿಸ್ ಉಸ್ತಾದ್ ಹುಸೈನ್ ರಹಮಾನಿ ಅಲ್ ಖಾಸಿಮಿ , ದಾರುನ್ನೂರ್ ಯು ಎ ಇ ಗೌರವಾದ್ಯಕ್ಷರಾದ ಜನಾಬ್ ಮಹಮ್ಮದ್ ಮುಸ್ತಾಕ್ ಕದ್ರಿ , ದಾರುನ್ನೂರ್ ಯು ಎ ಇ ಉಪದೇಶಕರಾದ ಉಸ್ತಾದ್ ಶೌಖತ್ ಹುದವಿ ಮೊದಲಾದವರು ಉಪಸ್ಥಿತರಿದ್ದರು. ಇಫ್ತಾರ್ ಗೆ ಮುನ್ನ ಶೈಖುನಾ ತ್ವಾಕಾ ಉಸ್ತಾದರಿಂದ ಭಕ್ತಿ ಪೂರ್ವಕ ದುಆ ಕಾರ್ಯ ನೆರವೇರಿತು.
ಇಫ್ತಾರ್ ಬಳಿಕ ಸರಿಯಾಗಿ 7.30 ಕ್ಕೆ ಸಭಾ ಕಾರ್ಯಕ್ರಮವನ್ನು ಜನಾಬ್ ಮಹಮ್ಮದ್ ಮಾಡಾವು ರವರ ಅದ್ಯಕ್ಷತೆಯಲ್ಲಿ ಆರಂಭಿಸಲಾಯಿತು. ವೇದಿಕೆಯಲ್ಲಿ ಶೈಖುನಾ ತ್ವಾಕಾ ಉಸ್ತಾದ್ , ಸಯ್ಯದ್ ಆಸ್ಕರ್ ಅಲಿ ತಂಗಳ್ ಉಪದೇಶಕರು ದಾರುನ್ನೂರ್ , ಜನಾಬ್ ಮಹಮ್ಮದ್ ಮುಸ್ತಾಕ್ ಕದ್ರಿ , ಜನಾಬ್ ಶಂಸುದ್ದೀನ್ ಕಲ್ಕಾರ್ ಉಪದೇಶಕರು ದಾರುನ್ನೂರ್ , ಜನಾಬ್ ಫೈಸಲ್ ದೀನಾರ್ , ಉಸ್ತಾದ್ ಶೌಕತ್ ಹುದವಿ ಉಪದೇಶಕರು ದಾರುನ್ನೂರ್ , ಉಸ್ತಾದ್ ಹುಸೈನ್ ರಹಮಾನಿ, ಉಸ್ತಾದ್ ಶಹೀರ್ ಹುದವಿ ಅದ್ಯಕ್ಷರು ಯಸ್ ಕೆ ಯಸ್ ಯಸ್ ಯಫ್ ಅಬುಧಾಬಿ, ಹಾಜಿ ಯೂಸುಫ್ ಈಶ್ವರಮಂಗಲ ಉಪದೇಶಕರು ದಾರುನ್ನೂರ್ , ಜನಾಬ್ ಅನ್ವರ್ ಅಡ್ಡೂರ್ ಉಪದೇಶಕರು ದಾರುನ್ನೂರ್ , ಜನಾಬ್ ಅಶ್ರಫ್ ಶಾ ಮಾ0ತೂರ್ ಉಪದೇಶಕರು ದಾರುನ್ನೂರ್ , ಜನಾಬ್ ಯೂಸುಫ್ ಹಾಜಿ ಬೇರಿಕೆ, ಜನಾಬ್ ಅಬ್ದುಲ್ ಲತೀಫ್ ಹಾಜಿ ಮದರ್ ಇಂಡಿಯಾ ಉಪದೇಶಕರು ದಾರುನ್ನೂರ್, ಜನಾಬ್ ಅಬ್ದುಲ್ ಸಲೀಂ ಅದ್ಯಕ್ಷರು ಶಂಸುಲ್ ಉಲಮಾ ಅರಬಿಕ್ ಕಾಲೇಜ್ ತೋಡಾರ್ ಯು ಎ ಇ , ಜನಾಬ್ ಅಬ್ದುಲ್ ಖಾದರ್ ಬೈತಡ್ಕ ಅದ್ಯಕ್ಷರು ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಕುಂಬ್ರ ಯು ಎ ಇ , ಜನಾಬ್ ಶರೀಫ್ ನಾಟೆಕಲ್ , ಜನಾಬ್ ಅಶ್ರಫ್ ನಾಟೆಕಲ್ ಉಪಾದ್ಯಕ್ಷರು ದಾರುನ್ನೂರ್ ಯು ಎ ಇ , ಜನಾಬ್ ಮಹಮ್ಮದ್ ಶರೀಫ್ ಕಾವು ಅದ್ಯಕ್ಷರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರ್ ಯು ಎ ಇ , ಜನಾಬ್ ಖಾಲಿದ್ ಮೊಹಿದ್ದೀನ್ ಸೌದಿ ಅರೇಬಿಯಾ, ಹಾಜಿ ಮೊಹಿದ್ದೀನ್ ಕುಟ್ಟಿ ಕಕ್ಕಿಂಜೆ ಉಪದೇಶಕರು ದಾರುನ್ನೂರ್ ,.ಮೊದಲಾದವರು ಉಪಸ್ಥಿತರಿದ್ದರು
ಮುಖ್ಯ ಅತಿಥಿಗಳಾಗಿ , ಜನಾಬ್ ನಾಸಿರ್ ಸುರತ್ಕಲ್ ಉಪದೇಶಕರು ದಾರುನ್ನೂರ್ , ಜನಾಬ್ ಇಬ್ರಾಹಿಂ ಅಬುಬಕ್ಕರ್ ಪ್ರಧಾನ ಕಾರ್ಯದರ್ಶಿ ದಾರುಸ್ಸಲಾಂ ಎಜುಕೇಷನ್ ಸೆಂಟರ್ ಬೆಳ್ತಂಗಡಿ ಯು ಎ ಇ , ಜನಾಬ್ ಅಲಿ ಈಶ್ವರ ಮಂಗಲ ಕೋಶಾಧಿಕಾರಿ ಯಸ್ ಕೆ ಯಸ್ ಯಸ್ ಯಫ್ ಕರ್ನಾಟಕ ಯು ಎ ಇ ,ಜನಾಬ್ ಉಮ್ಮರ್ ಕುಂಜಿ ಕಳ್ಳಡಕುಟ್ಟಿ , ಜನಾಬ್ ಅಶ್ರಫ್ ಪಾವೂರ್ , ಜನಾಬ್ ಫೈಸಲ್ ಸೀತಾ0ಗೋಳಿ , ಜನಾಬ್ ಜಬ್ಬಾರ್ ಎಡನೀರ್ ಉಪದೇಶಕರು ಮೊದಲಾದವರು ಆಗಮಿಸಿದ್ದರು..
ದುಆ ಕಾರ್ಯವನ್ನು ಉಸ್ತಾದ್ ಶೌಕತ್ ಹುದವಿಯವರು ನೆರವೇರಿಸಿದರು. ಸ್ವಾಗತ ಭಾಷಣವನ್ನು ದಾರುನ್ನೂರ್ ಯು ಎ ಇ ಇದರ ಮುಖ್ಯ ಉಪದೇಶಕರಾದ ಜನಾಬ್ ಶಂಸುದ್ದೀನ್ ಸೂರಲ್ಪಾಡಿಯವರು ನೆರವೇರಿಸಿದರು. ಈ ಸಂದರ್ಭ ದಾರುನ್ನೂರಿನ ಹೃಸ್ವ ಪರಿಚಯ ಮತ್ತು ಪ್ರಸಕ್ತ ಸನ್ನಿವೇಶವನ್ನು ವಿವರಿಸಿದರು. ಬಳಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಶೈಖುನಾ ತ್ವಾಕಾ ಉಸ್ತಾದರು ನೆರವೇರಿಸಿದರು. ಈ ಸಂದರ್ಭ ದಾರುನ್ನೂರ್ ವಿದ್ಯಾ ಕೇಂದ್ರಕ್ಕೆ ಯು ಎ ಇ ಸಮಿತಿಯ ಕೊಡುಗೆಯನ್ನು ಬಣ್ಣಿಸಿ ಮಾತನಾಡಿದರು. ದಶಮಾನೋತ್ಸವ ಆಚರಣೆಯ ಹೊಸ್ತಿಲಲ್ಲಿ ನಿಂತಿರುವ ದಾರುನ್ನೂರ್ ತನ್ನ ಪ್ರಥಮ ಬ್ಯಾಚ್ ಸನದು ದಾನ ಪಡೆಯಲು ಸಿದ್ಧರಾಗಿದ್ದು ಮೇ ತಿಂಗಳ 4,5,6 ತಾರೀಕು ಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ದಾರುನ್ನೂರ್ ಕಾಶಿಪಟ್ಣದಲ್ಲಿ ಹಮ್ಮಿಕೊಂಡಿದ್ದು ಉಸ್ತಾದ್ ಸಿಂಸಾರುಲ್ ಹಕ್ ಹುದವಿ, ಉಸ್ತಾದ್ ವಲಿಯುದ್ದೀನ್ ಫೈಝೀ , ಉಸ್ತಾದ್ ಸಿರಾಜುದ್ದೀನ್ ಖಾಸಿಮಿ ಮೊದಲಾದವರ ಪ್ರಭಾಷಣ ಹಾಗೂ ಇತರ ರಾಜಕೀಯ ಸಾಮಾಜಿಕ ಧಾರ್ಮಿಕ ಮುಖಂಡರುಗಳ ಸಮ್ಮಿಲನ ನಡೆಯಲಿದ್ದು ಅದಕ್ಕೆ ಎಲ್ಲರಿಗೂ ಆಹ್ವಾನ ನೀಡಿ ದಾರುನ್ನೂರಿನ ಸಂಪೂರ್ಣ ಚಿತ್ರಣ ತಮ್ಮ ಮುಂದೆ ಬರಲು ಇನ್ನೂ 10-15 ವರ್ಷಗಳು ಕಾಯಬೇಕಾಗಬಹುದು.. ಅದರ ಬಳಿಕ ನಮ್ಮ ನಾಡಿನಲ್ಲಿ ಅತ್ಯಂತ ಉನ್ನತ ಶೈಕ್ಷಣ ಸಂಸ್ಥೆಗಳಲ್ಲಿ ಮುಂಚೂಣಿಯನ್ನು ಅಲಂಕರಿಸಲಿದೆ ದಾರುನ್ನೂರ್ ಎಂದು ಹೇಳುತ್ತಾ ಅಲ್ಲಾಹನ ನಾಮದಿಂದ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ತ್ವಾಕಾ ಉಸ್ತಾದ್ , ಹುಸೈನ್ ರಹಮಾನಿ ಮತ್ತು ಸಹೀರ್ ಹುದವಿಯವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಬಳಿಕ ದಾರುನ್ನೂರ್ ಮಜ್ಲಿಸುನ್ನೂರ್ ಅಮೀರ್ ಹಾಗೂ ಸಮಸ್ತ ಸಂಘಟನೆಗಳ ನೇತಾರರಾದ ಸಯ್ಯದ್ ಆಸ್ಕರ್ ಅಲಿ ತಂಗಳ್ ರವರ ಸೇವೆಯನ್ನು ಪರಿಗಣಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಪ್ರತಿಷ್ಟಿತ ಕ್ರಿಸ್ಟ್ ಸಂಸ್ಥೆ ನಡೆಸಿದ ಸೈನ್ಸ್ ಒಲಿಂಪಿಯಾಡ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು ಮೆರಿಟ್ ಪ್ರಮಾಣ ಪತ್ರ ಗಳಿಸಿದ ಬಶೀರ್ ಆರಂಬೂರ್ ಇಹಾನ್ ಬಶೀರ್ ರವರನ್ನು ಅವರ ಪ್ರತಿಭೆಯನ್ನು ಪರಿಗಣಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಬಳಿಕ ವೇದಿಕೆಯಲ್ಲಿರುವ ಪ್ರಮುಖರಿಂದ ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣದಲ್ಲಿ ಮೇ ತಿಂಗಳ 4,5,6 ನೇ ತಾರೀಕಿನಂದು ನಡೆಯಲಿರುವ ದಶಮಾನೋತ್ಸವದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಬಳಿಕ ದಿನಾಂಕ 24/03/2024 ರಂದು ನಡೆಯಲಿರುವ ಕರ್ನಾಟಕ ಇಸ್ಲಾಮಿಕ್ ಸೆಂಟರ್ ಮತ್ತು ದಿನಾಂಕ 30/01/2024 ರಂದು ನಡೆಯಲಿರುವ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ವತಿಯಿಂದ ನಡೆಯಲ್ಪಡುವ ಬೃಹತ್ ಇಫ್ತಾರ್ ಕೂಟದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಬಳಿಕ ದಾರುನ್ನೂರ್ ಪರಿಚಯ ಮತ್ತು ಪ್ರಸಕ್ತ ಸನ್ನಿವೇಶವನ್ನು ಉಸ್ತಾದ್ ಹುಸೈನ್ ರಹಮಾನಿ ಯವರು ಎಳೆ ಎಳೆಯಾಗಿ ವಿವರಿಸಿದರು. ಅತ್ಯಂತ ಗುಣಮಟ್ಟದ ಶಿಸ್ತು ಬದ್ಧ ಶುಲ್ಕರಹಿತ ವಿದ್ಯಾ ಕೇಂದ್ರ ದಾರುನ್ನೂರ್ ಆಗಿದ್ದು ಇಲ್ಲಿನ ಪ್ರಶಾಂತ ವಾತಾವರಣ ವಿದ್ಯಾ ಭ್ಯಾಸಕ್ಕೆ ಪೂರಕವಾಗಿದ್ದು ವಿಶ್ವ ಮಟ್ಟದಲ್ಲಿ ಒಂದು ಪುಟ್ಟ ಹಳ್ಳಿಯನ್ನು ಗಮಣಿಸುವ ಹಂತಕ್ಕೆ ನಮ್ಮ ವಿದ್ಯಾಕೇಂದ್ರ ಕಾರಣವಾಗಿರುತ್ತದೆ. ಪ್ರಥಮ ಬ್ಯಾಚ್ ಹೊರಡುವ ಸಮಯ ರೋಮಾಂಚನವಾಗಿದ್ದು ಎಲ್ಲರೂ ಈ ಮಹಾಗಳಿಗೆಗೆ ಸಾಕ್ಷಿಯಾಗಲು ಆಗಮಿಸಬೇಕೆಂದು ಆಮಂತ್ರಿಸಿ ಮಾತಿಗೆ ಪೂರ್ಣವಿರಾಮವನ್ನಿಟ್ಟರು.
ಬಳಿಕ ಅದ್ಯಕ್ಷರ ಭಾಷಣದಲ್ಲಿ ಜನಾಬ್ ಮಹಮ್ಮದ್ ಮಾಡಾವು ರವರು ದಾರುನ್ನೂರ್ ಯು ಎ ಇ ಯಲ್ಲಿ ನಡಸುವ ಕಾರ್ಯ ವೈಖರಿಯನ್ನು ವಿವರಿಸಿದರು. ಪ್ರತೀ ವರ್ಷದಲ್ಲಿ ವಿಜೃಂಭಣೆಯಲ್ಲಿ ನಡೆಸುವ ಇಫ್ತಾರ್ ಮತ್ತು ಮೀಲಾದ್ ಕಾರ್ಯಕ್ಕೆ ಸಹಕರಿಸುವ ಎಲ್ಲರನ್ನು ಅಭಿನಂದಿಸಿದರು. ಅನಾರೋಗ್ಯ ಪೀಡಿತರಾಗಿಯೂ ಈ ಇಳಿ ವಯಸ್ಸಿನಲ್ಲಿ ದಾರುನ್ನೂರ್ ಗಾಗಿ ಓಡಾಡುವ ಶೈಖುನಾ ತ್ವಾಕಾ ಉಸ್ತಾದರ ಪರಿಶ್ರಮವನ್ನು ಕೊಂಡಾಡಿ ತನ್ನ ಮಾತಿಗೆ ಪೂರ್ಣ ವಿರಾಮವನ್ನಿತ್ತರು.
ಅತಿಥಿಗಳ ಭಾಷಣದಲ್ಲಿ ಜನಾಬ್ ಅಬ್ದುಲ್ ಲತೀಫ್ ಹಾಜಿ ಮದರ್ ಇಂಡಿಯಾ ರವರು ಚುಟುಕಾಗಿ ಮಾತನಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಗ್ರಾಂಡ್ ಇಫ್ತಾರ್ ಕೋ ಚೇರ್ಮ್ಯಾನ್ ಜನಾಬ್ ಅಬ್ದುಲ್ ಸಲಾಂ ಬಪ್ಪಳಿಗೆಯವರು ವಂದನಾರ್ಪಣೆಗೈದರು.
ಕಾರ್ಯಕ್ರಮ ಯಶಸ್ವಿಯಾಗಲು ಕರ್ನಾಟಕ ಎಸ್ ಕೆ ಯಸ್ ಯಸ್ ಯಫ್ ಯು ಎ ಇ ಸಮಿತಿ, ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕುಂಬ್ರ ಯು ಎ ಇ ಸಮಿತಿ , ಶಂಸುಲ್ ಉಲಮಾ ಅರಬಿಕ್ ಕಾಲೇಜ್ ತೋಡಾರ್ ಯು ಎ ಇ ಸಮಿತಿ, ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರ್ ಯು ಎ ಇ ಸಮಿತಿ , , ಶಂಸುಲ್ ಉಲಮಾ ಎಜುಕೇಷನ್ ಸೆಂಟರ್ ಬೆಳ್ತಂಗಡಿ ಯು ಎ ಇ ಸಮಿತಿ, ದಾರುಲ್ ಹಸನಿಯ ಹಿಫ್ಲ್ ಕಾಲೇಜ್ ಸಾಲ್ಮರ ಯು ಎ ಇ ಸಮಿತಿ, ಕರ್ನಾಟಕ ಎಸ್ ಕೆ ಯಸ್ ಯಸ್ ಯಫ್ ವಿಖಾಯ ಮೊದಲಾದವರು ಸಹಕರಿಸಿರುತ್ತಾರೆ.
ಅತಿಥಿಗಳ ಸ್ವೀಕಾರ ಮತ್ತು ವ್ಯವಸ್ಥೆಯನ್ನು ಸಿದ್ದ ಪಡಿಸಲು ಜನಾಬ್ ಬದ್ರುದ್ದೀನ್ ಹೆಂತಾರ್ , ಜನಾಬ್ ಮಹಮ್ಮದ್ ರಫೀಕ್ ಸುರತ್ಕಲ್ , ಜನಾಬ್ ಮಹಮ್ಮದ್ ಸಾಜಿದ್ ಬಜ್ಪೆ, ಜನಾಬ್ ಮಹಮ್ಮದ್ ಸಿರಾಜ್ ಬಿ ಸಿ ರೋಡ್ , ಜನಾಬ್ ನವಾಝ್ ಬಿ. ಸಿ ರೋಡ್, ಜನಾಬ್ ಸಮೀರ್ ಇಬ್ರಾಹಿಂ ಕಲ್ಲರೆ ,ಜನಾಬ್ ಮಹಮ್ಮದ್ ಹನೀಫ್ ಮೂಡಬಿದ್ರಿ, ಜನಾಬ್ ಮಹಮ್ಮದ್ ಶಬೀರ್ ಫರಂಗಿಪೇಟೆ, ಜನಾಬ್ ಆನ್ಸಾಫ್ ಪಾತೂರ್, ಜನಾಬ್ ಶರೀಫ್ ಕೊಡ್ನೀರ್, ಜನಾಬ್ ಸಾಹುಲ್ ಬಿ ಸಿ ರೋಡ್, ಜನಾಬ್ ಮಹಮ್ಮದ್ ರೆಡ್ ಟ್ಯಾಗ್ , ಜನಾಬ್ ಅಬ್ದುಲ್ ರಝಾಕ್ ಹಾಜಿ ಮನಿಲ, ಜನಾಬ್ ಇಸ್ಮಾಯಿಲ್ ತಿಂಗಳಾಡಿ , ಜನಾಬ್ ಆನ್ವರ್ ಮಾನಿಲ, ಮೊದಲಾದವರು ಸಹಕರಿಸಿದರು
ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಸ್ವಯಂ ಸೇವಕರಾಗಿ ಜನಾಬ್ ನಾಸಿರ್ ಬಪ್ಪಳಿಗೆ, ಜನಾಬ್ ಇಸ್ಮಾಯಿಲ್ ಮುಂಧೀರ್ ತೋಡಾರ್ , ಜನಾಬ್ ರಿಯಾಝ್ ಕುಳಾಯಿ, ಜನಾಬ್ ಜನಾಬ್ ಜಾಬೀರ್ ಬಪ್ಪಳಿಗೆ, ಜನಾಬ್ ಅಶ್ರಫ್ ಬಾಂಬಿಲ, ಜನಾಬ್ ಜಾಬಿರ್ ಬೆಟ್ಟಂಪಾಡಿ , ಜನಾಬ್ ಇಫ್ತಿಕಾರ್ ಅಡ್ಯಾರ್ ಕಣ್ಣೂರ್, ಜನಾಬ್ ನವಾಝ್ ಮನಲ್, ಜನಾಬ್ ಅಬುಬಕ್ಕರ್ ಸಿದ್ದಿಕ್ ಮೂಡಬಿದ್ರಿ ಜನಾಬ್ ತಾಹಿರ್ ಹೆಂತಾರ್, ಜನಾಬ್ ತ್ವಯ್ಯಿಬ್ ಹೆಂತಾರ್ , ಜನಾಬ್ ಆಸಿಫ್ ಮರೀಲ್ ,ಜನಾಬ್ ಆರಿಫ್ ಕೂರ್ನಡ್ಕ, ಜನಾಬ್ ಆಶಿಕ್ ಕೂರ್ನಡ್ಕ, ಜನಾಬ್ ಅಕ್ರಂ ಕೂರ್ನಡ್ಕ , ಜನಾಬ್ ನೌಫಲ್ ಹೆಂತಾರ್, ಜನಾಬ್ ಸವಾದ್ ಸೊಂಪಾಡಿ, ಜನಾಬ್ ಸಾಮಿತ್ ಇಬ್ರಾಹಿಂ ಕಲ್ಲರೆ, ಜನಾಬ್ ಸಾಬೀತ್ ಏ .ಯಸ್ ಆತೂರ್. ಜನಾಬ್ ಇಸ್ಹಾಕ್ ಕುಡ್ತಮುಗೇರ್, ಜನಾಬ್ ಜಬ್ಬಾರ್ ಬೈತಡ್ಕ, ಜನಾಬ್ ಅಶ್ರಫ್ ಕೆಮ್ಮಿಂಜೆ, ಜನಾಬ್ ಜಬ್ಬಾರ್ ಕಲ್ಲಡ್ಕ , ಜನಾಬ್ ಇಂತಿಯಾಝ್ ಕಡಬ, ಜನಾಬ್ ಜೌಹರ್ ಉರುಮನೆ , ಜನಾಬ್ ನವಾಝ್ ಕಟ್ಟತ್ತಾರ್ ಮೊದಲಾದವರು ಸಹಕರಿಸಿದರು.
ಮಹಿಳೆಯರು ಮತ್ತು ಮಕ್ಕಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿತ್ತು. ಒಟ್ಟು 600 ರಷ್ಟು ಜನರು ಇಫ್ತಾರ್ ವಿದ್ ಖಾಝಿಯಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು . ಇದರಲ್ಲಿ ಸುಮಾರು 160 ರಷ್ಟು ಮಕ್ಕಳು ಮತ್ತು ಮಹಿಳೆಯರು ಭಾಗವಹಿಸಿ ಸಹಕರಿಸಿದ್ದರು.
ಉಸ್ತಾದ್ ಅಬ್ದುಲ್ಲಾ ಹಾಜಿ ನಈಮಿ ಮತ್ತು ಜನಾಬ್ ಜನಾಬ್ ಅಝೀಝ್ ಸೋಪಾಡಿಯವರು ವಿಡಿಯೋ ಮತ್ತು ಸೌಂಡ್ ಸಿಸ್ಟಂ ಏರ್ಪಡಿಸಿ ಸಹಕರಿಸಿದರು. ಜನಾಬ್ ನೂರ್ ಮಹಮ್ಮದ್ ನೀರ್ಕಜೆ ಮತ್ತು ಜನಾಬ್ ಅಝ್ಹರ್ ಹಂಡೆಲ್ ರವರು ಕಾರ್ಯಕ್ರಮವನ್ನು ಚೊಕ್ಕಟವಾಗಿ ನಿರೂಪಿಸಿ ಸಹಕರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.