(www.vknews.in) : ಕರ್ನಾಟಕ ರಾಜ್ಯ ಬೋರ್ಡ್ ಆಯೋಜಿಸಿದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಬೂಬಕ್ಕರ್ ಅಜಿಲಮೊಗರು ಹಾಗೂ ಅಸ್ಮಾ ದಂಪತಿಗಳ ಪುತ್ರಿ ಆಫ್ಘಾಝ್ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಇವರು ಮೂಲ್ಕಿ ಕಾರ್ನಾಡುವಿನ ನಿವಾಸಿಗಳಾಗಿದ್ದಾರೆ.
ಅಲ್-ಇಹ್ಸಾನ್ ವುಮನ್ಸ್ ಕಾಲೇಜು, ಮೂಳೂರು ಇಲ್ಲಿನ ವಿದ್ಯಾರ್ಥಿಯಾಗಿರುವ ಆಫ್ನಾಝ್ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಹೆತ್ತವರು, ಶಾಲೆಗೆ ಹಾಗೂ ಕುಟುಂಬಸ್ಥರಿಗೇ ಹೆಮ್ಮೆಯನ್ನು ತಂದಿದ್ದಾರೆ. ಇವರು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿಯೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದರು.
ಆಫ್ಘಾಝ್ ತಂದೆಯವರಾದ ಅಬೂಬಕ್ಕರ್ ಅಜಿಲಮೊಗರು ಸೌದಿ ಅರೇಬಿಯಾದಲ್ಲಿ ಉಧ್ಯಮಿಯಾಗಿದ್ದು, ಝಕೋ ಸಂಸ್ಥೆಯ ಮಾಲಕರಾಗಿದ್ದಾರೆ. ಇವರು ಅಲ್ ಇಹ್ಸಾನ್ ರೆಸಿಡೆನ್ಸಿಯಲ್ ಸ್ಕೂಲ್ ಹಾಗೂ ಕಾಲೇಜು, ಮೂಳೂರು ಇದರ ಪೋಷಕರಾಗಿದ್ದಾರೆ. ಆಫ್ನಾಝ್ ವೈಧ್ಯೆಯಾಗುವ ಬಯಕೆಯನ್ನು ಹೊಂದ್ದಿದ್ದು, ಅದಕ್ಕಾಗಿ ಮುಂದಿನ ಸಿಇಟಿ ಪರೀಕ್ಷೆಯನ್ನು ಬರೆಯಲು ತರಬೇತಿಯನ್ನು ಪಡೆಯುತ್ತಿದ್ದಾರೆ.
ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ತನ್ನ ಮಗಳ ಫಲಿತಾಂಶವನ್ನು ಕಂಡು ಸಂತುಷ್ಟರಾಗಿ ತಂದೆ ಅಬೂಬಕ್ಕರ್ ಅಜಿಲಮೊಗರು ಇವರು ತನ್ನ ಪುತ್ರಿಯನ್ನು ವೈಧ್ಯೆಯನ್ನಾಗಿಸುವ ಆಶಯವನ್ನು ಈ ಸಂಧರ್ಭದಲ್ಲಿ ವ್ಯಕ್ತಪಡಿಸಿರುತ್ತಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.