(www.vknews.in) : ಮಹತ್ವದ ಬೆಳವಣಿಗೆಯಲ್ಲಿ ಕಳೆದ ಹತ್ತು ವರ್ಷಗಳಿಂದಲೂ ಜಾತ್ಯತೀತ ಜನತಾದಳದ ಬೆಳವಣಿಗೆಗೆ ಯಾವುದೇ ಸ್ವಾರ್ಥವಿಲ್ಲದೆ ಶ್ರಮಿಸುತ್ತಿದ್ದ JDS KSPC (JanataDal Secular Karnataka State Planning Council) ಅನ್ನು ಇದೀಗ ಅಧಿಕೃತವಾಗಿ ನೂತನ ಪಕ್ಷ MSS (Maardani ಸಮಾಜ ಸೇವಾ ಪಕ್ಷ) ಜೊತೆಗೆ ವಿಲೀನಗೊಳಿಸಲು ನಿರ್ಧರಿಸಲಾಗಿದೆ. ಇದು ಜೆಡಿಎಸ್ ಪಕ್ಷಕ್ಕೆ ಅತ್ಯಂತ ದೊಡ್ಡ ಹಿನ್ನಡೆ ಉಂಟುಮಾಡಿದೆ.
ಏಕೆಂದರೆ, ಕಳೆದ ಹಲವಾರು ಚುನಾವಣೆಗಳಲ್ಲಿ ಜೆಡಿಎಸ್ ಅಧಿಕಾರಕ್ಕೇರುವ ಹಾಗೂ ಅದರ ಅಭ್ಯರ್ಥಿಗಳು ಗೆಲ್ಲುವ ದಿಸೆಯಲ್ಲಿ, ಯಾವುದೇ ಪ್ರತಿಫಲ, ಸ್ಥಾನಮಾನಗಳ ಆಸೆಯಿಲ್ಲದೇ ಸಾಮಾಜಿಕ ಮಾಧ್ಯಮಗಳ ಮೂಲಕ ಪರಿಣಾಮಕಾರಿ ರೀತಿಯಲ್ಲಿ ಪರಿಶ್ರಮಪಡುತ್ತಿದ್ದ JDS KSPC ಯು JDS ಪಕ್ಷವು ಕೋಮುವಾದಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ತೀರ್ಮಾನಿಸಿದ ನಡೆಯನ್ನು ತಾತ್ವಿಕವಾಗಿ ಪ್ರಶ್ನಿಸಿ, ಮತಾಂಧ ಪಕ್ಷದ ಜೊತೆಗಿನ ಮೈತ್ರಿಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು, ಹಾಗಾಗಿ ತಕ್ಷಣವೇ ಬಿಜೆಪಿ ಜೊತೆಗಿನ ಎಲ್ಲಾ ತರಹದ ಹೊಂದಾಣಿಕೆಯನ್ನು ಮುರಿದು, ಸ್ವತಂತ್ರವಾಗಿ ಚುನಾವಣೆ ಎದುರಿಸಬೇಕು ಎಂದು ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರ ಒತ್ತಾಯ ಮಾಡುತ್ತಾ ಬಂದಿತ್ತು.
ಆದರೆ, ಅದರ ಪ್ರಸ್ತಾಪಕ್ಕೆ ಜೆಡಿಎಸ್ ವರಿಷ್ಠರು ಕಿವಿಗೊಡದೆ ಉನ್ನತ ಮಟ್ಟದಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಆಗಿತ್ತು. ಇದನ್ನು ಪ್ರತಿಭಟಿಸಿ ಜೆಡಿಎಸ್ ಪಕ್ಷದ ಬಗ್ಗೆ ತಟಸ್ಥ ಧೋರಣೆ ಹೊಂದಿದ್ದ ಹಾಗೂ JDS ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದ ಸ್ವತಂತ್ರ ಸಂಸ್ಥೆಯಾದ ಜೆಡಿಎಸ್ KSPC ಇದೀಗ ಪ್ರಜ್ವಲ್ ರೇವಣ್ಣ ಕಾಮಕಾಂಡ ಪ್ರಕರಣವು ಜೆಡಿಎಸ್ ಗೆ ಭಯಂಕರ ಹಾನಿಯುಂಟು ಮಾಡುತ್ತಿರುವ ಈ ಸಂಧರ್ಭದಲ್ಲಿ ಜೆಡಿಎಸ್ ಜೊತೆಗೆ ಸಂಪೂರ್ಣ ಸಂಬಂಧ ತ್ಯಜಿಸಿ, ಅದನ್ನು MSS (Maardani ಸಮಾಜ ಸೇವಾ ಪಕ್ಷ)ದ ಜೊತೆಗೆ ವಿಲೀನಗೊಳಿಸಲು ತೀರ್ಮಾನಿಸಲಾಗಿದೆ.
ಈ ದಿಸೆಯಲ್ಲಿ ಈಗಾಗಲೇ ಮೊದಲ ಹಂತದಲ್ಲಿ ಜೆಡಿಎಸ್ KSPC ಪ್ರಮುಖ ನೇತಾರ ಬೆಂಗಳೂರಿನ ವಿದ್ಯಾನಗರದ ಶ್ರೀ ನಂದನ್ ಗೌಡ ಅವರನ್ನು MSS ಕರ್ನಾಟಕ ರಾಜ್ಯ ಘಟಕದ ಕಾರ್ಯಾಧ್ಯಕ್ಷರಾಗಿ ನೇಮಿಸಲಾಗಿದೆ. ಪ್ರಚಲಿತ ಅಸ್ತಿತ್ವದಲ್ಲಿರುವ ಬಹುತೇಕ ಎಲ್ಲ ರಾಜಕೀಯ ಪಕ್ಷಗಳೂ ಜನರ ವಿಶ್ವಾಸ ಕಳೆದುಕೊಂಡಿರುವುದು. ಹಾಗಾಗಿ ಯಾವುದೇ ಆಕ್ಷೇಪಗಳು ಇಲ್ಲದಂಥ ಕಾರ್ಯಸೂಚಿ ಹೊಂದಿರುವ MSS ಅರ್ಥಾತ್ SESMA ಎಂಬ ಜಾಗತಿಕ ಮಟ್ಟದ ಸಾಮಾಜಿಕ ಸೇವಾ ಸಂಸ್ಥೆಯ ರಾಜಕೀಯ ಮುಖದ ಜೊತೆಗೆ ಸೇರಬಹುದು ಎಂದು MSS ದಕ್ಷಿಣ ಭಾರತ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ, SESMA ಅಖಿಲ ಭಾರತ ಘಟಕದ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಹಾಗೂ ವಿಸರ್ಜಿತ JDS ಕರ್ನಾಟಕ State Planning ಕೌನ್ಸಿಲ್ ಪ್ರಧಾನ ಸಂಚಾಲಕ ಪತ್ರಕರ್ತ AK ಉಮರುಲ್ ಫಾರೂಕ್ ಬಿಕ್ಕೋಡು, ಹಾಸನ ಅವರು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.