(www.vknews.in) : ಅಸ್ಗರ್ ಅವಾರ್ಡಿಗೆ ಆಯ್ಕೆಯಾಗಲು ಅಣಿಯಾದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣರ 2927 ಕಾಮಕಾಂಡದ ವೀಡಿಯೋ ಚಲನಚಿತ್ರಗಳು ತಮ್ಮ ಕಣ್ಣಿಗೆ ಕಾಣದೆ ಹೋಯಿತೇ?, 2927 ಹಿಂದು ಯುವತಿ ಮತ್ತು ಮಹಿಳೆಯರ ಬೆತ್ತಲೆ ಅರೆಬೆತ್ತಲೆ ದೇಹವನ್ನು ತನ್ನ ಕ್ಯಾಮೆರಾ ಕಣ್ಣಿಂದ ಸೆರೆಹಿಡಿದ ಹಾಸನದ ಜೆಡಿಎಸ್ ಸಂಸದ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣರ ಕಾಮಕೇಳಿ ವಿಡಿಯೋ ಹಿಂದುತ್ವವಾದಿಗಳ ಕಣ್ಣಿಗೆ ಕಾಣದಾಯಿತೇ?
ನಾವು ಹಿಂದೂ ರಕ್ಷಕರು. ಹಿಂದೂ ಹೆಣ್ಮಕ್ಕಳ ರಕ್ಷಕರು ಎಂದು ಡಬ್ಬಿ ಹೊಡೆದು ಬೊಬ್ಬೆ ಹಾಕಿ ದೇಶದಲ್ಲಿ ಅರಾಜಕತೆ ಸ್ರಷ್ಟಿಸಿ ಹಿಂದೂ ಮತಗಳನ್ನು ಕ್ರೋಡೀಕರಿಸಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿರುವ ಬಿಜೆಪಿಯ ಹಿಂದುತ್ವವಾದಿಗಳೇ, ಪ್ರಜ್ವಲ್ ರೇವಣ್ಣ ಮಾಡಿದ ದುಸ್ಸಾಹಸ ತಮ್ಮ ಮೊಬೈಲಿಗೂ ಬಂದಿದೆಯಲ್ಲವೇ..?
ಅಸಂಖ್ಯಾತ ಹಿಂದು ಅಮಾಯಕ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಿರುವ ದೇವೇಗೌಡರ ಮೊಮ್ಮಗನಿಗೆ ಮೋದಿ ಸರಕಾರದಿಂದ ಅಸ್ಗರ್ ಪ್ರಶಸ್ತಿ ಕೊಡಿಸಿ.. ಪ್ರಜ್ವಲ್ ಹೆಸರಿನ ಬದಲಿಗೆ ಮುಸಲ್ಮಾನನ ಹೆಸರಿದ್ದರೆ ಈ ಚುನಾವಣಾ ಸಮಯದಲ್ಲಿ ಇಂದು ಕರ್ನಾಟಕ ಹೊತ್ತಿ ಉರಿಯುತ್ತಿತ್ತು ಅಲ್ಲವೇ..?, ಅದೆಷ್ಟು ಜನರು ಆಸ್ಪತ್ರೆಯಲ್ಲಿರುತ್ತಿದ್ರು, ಅದೆಷ್ಟು ಮನೆ ಅಂಗಡಿ ಮಸೀದಿಗಳು ಪುಡಿಯಾಗುತ್ತಿತ್ತು.
ಆದರೆ ಇಂದು ಕರ್ನಾಟಕ ಬಚಾವಾಯಿತು ಏಕೆಂದರೆ ಮುಸಲ್ಮಾನನ ಹೆಸರಿನ ಬದಲು ಹಿಂದು ಹೆಸರು ಪ್ರಜ್ವಲ್ ಎಂದಾಗಿದೆ ಹಿಂದುತ್ವವಾದಿಗಳಿಗೆ ಏನೂ ಕಸಿಯಲಿಕ್ಕೆ ಆಗಲಿಲ್ಲ. ಅಯ್ಯೋ ದೇವರೇ ಪ್ರಜ್ವಲ್ ಹೆಸರಿನ ಬದಲು ಅನ್ವರ್ ಆಗಿ ಮಾರ್ಪಾಡಾಗಿದ್ದರೆ ಇಂದು ಕರ್ನಾಟಕದ 28 ಲೋಕಸಭಾ ಸೀಟು ಬಿಜೆಪಿ ತೆಕ್ಕೆಗೆ ಬರ್ತಿತ್ತು ಎಂಬ ಕನಸು ಕಂಡಿದ್ದರು ಅಲ್ಲವೇ ಹಿಂದುತ್ವವಾದಿಗಳೇ..?
ಇಂದು ದೇಶದ ಉದ್ದಗಲಕ್ಕೂ ಹಿಂದೂ ಸಹೋದರ ಸಹೋದರಿಯರಿಗೂ ಈ ತೀವ್ರವಾದಿ ನಕಲಿ ಹಿಂದುತ್ವವಾದಿಗಳ ಹಣೆಬರಹ ಗೊತ್ತಾಗಿ ಬಿಟ್ಟಿದೆ. ಒಬ್ಬ ಮುಸಲ್ಮಾನನ ಕೈಯಿಂದ ನಾವು ಅತ್ಯಾಚಾರಕ್ಕೊಳಗಾದರೆ ಅಥವಾ ಕೊಲೆಯಾದರೆ ಮಾತ್ರ ನಮ್ಮ ಜೀವಕ್ಕೆ ಬೆಲೆ ಜಗತ್ತಿನಾದ್ಯಂತ ನಮ್ಮ ಶವ ರಾಜಕೀಯ ವಿಜ್ರಂಭಿಸುತ್ತದೆ, ಕೋಟಿ ಕೋಟಿ ಪರಿಹಾರ ರಾಜಕೀಯ ಗಣ್ಯ ವ್ಯಕ್ತಿಗಳ ಆಗಮನ. ಅದೇ ಒಬ್ಬ ಹಿಂದೂ ಯುವಕನಿಂದ ನಮ್ಮ ಮೇಲೆ ಅತ್ಯಾಚಾರ ಕೊಲೆ ನಡೆದರೆ ನಮ್ಮೂರಿನ ಪಕ್ಕದೂರಿಗೂ ಪ್ರಚಾರ ಆಗಲ್ಲ, ರಾಜಕೀಯ ಗಣ್ಯರಿಲ್ಲ, ಟಿವಿ ಬ್ರೇಕಿಂಗ್ ನ್ಯೂಸ್, ಡಿಬೆಟ್ ಇಲ್ಲ.
ಎಲ್ಲಿಯವರೆಗೆಂದರೆ ನನ್ನ ಶವ ಹೊರಲೂ ನಾಲ್ಕು ಜನ ಇಲ್ಲ, ಇದು ಹಿಂದುತ್ವವಾದಿಗಳ ಧರ್ಮ ರಾಜಕೀಯ ಹಿಂದು ಹೆಣ್ಣುಮಕ್ಕಳೇ. ಇವರ ಧರ್ಮ ಜಂಗಲ್ ರಾಜಕೀಯ ಅರಿತು ಕೊಳ್ಳಿ.. ಅದಕ್ಕಾಗಿ ದೇಶದ ಉದ್ದಗಲಕ್ಕೂ ಹಿಂದೂ ಹೆಣ್ಣು ಮಕ್ಕಳು ಮೋದಿ ಬಿಜೆಪಿ ನಕಲಿ ಹಿಂದುತ್ವದ ವಿರುದ್ಧ ಸೆಟೆದು ನಿಂತು ಬಿಜೆಪಿಯನ್ನು ಬೆತ್ತಲೆ ಮಾಡಿ ಸೇಡು ತೀರಿಸಿ ಕೊಂಡಿದ್ದಾರೆ. ಹಿಂದು ಮುಸ್ಲಿಮ್ ಹೆಣ್ಣುಮಕ್ಕಳ ಮೇಲೆ ನಡೆದ ಮಾನ ಭಂಗ ಅತ್ಯಾಚಾರ ಕೊಲೆಗಳಲ್ಲಿ ಧರ್ಮವನ್ನು ಹುಡುಕಿ ರಾಜಕೀಯ ಮಾಡುವ ಹಿಂದುತ್ವವಾದಿಗಳಿಗೆ ಈ ಚುನಾವಣೆ ಒಂದು ಪಾಠವಾಗಲಿ..
ದೇಶದ ಹಿಂದು ಮುಸ್ಲಿಂ ಕ್ರೈಸ್ತ ಧರ್ಮದ ಪ್ರತಿಯೊಬ್ಬ ಹೆಣ್ಣು ಮಕ್ಕಳು ರಸ್ತೆಯಲ್ಲಿ ರಾಜಾರೋಷವಾಗಿ ಯಾವುದೇ ಹೆದರಿಕೆ ಇಲ್ಲದೆ ನಡೆದುಕೊಂಡು ಹೋಗುವ ಕಾಲ ಬರಬೇಕಾದರೆ, ನಕಲಿ ಹಿಂದುತ್ವವಾದಿಗಳು ನಾಶವಾಗಲೇ ಬೇಕು. ಹೊಸ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿ ಕೂಟ ಸರಕಾರ ಅಧಿಕಾರಕ್ಕೆ ಬರಲೇ ಬೇಕು. ದೇಶದ ಎಲ್ಲಾ ಹೆಣ್ಣು ಮಕ್ಕಳು ಶಾಂತಿ ಸೌಹಾರ್ದತೆಯಿಂದ ಬಾಳಿ ಬದುಕಲು ಆ ಭಗವಂತ ಅನುಗ್ರಹಿಸಲಿ..
✍️ ಅದ್ದು ಪಡೀಲ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.