(www.vknews.in) : ರಾಜಸ್ಥಾನದ ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇಯಲ್ಲಿ ಟ್ರಕ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಮನೀಶ್ ಶರ್ಮಾ, ಅವರ ಪತ್ನಿ ಅನಿತಾ ಶರ್ಮಾ, ಅವರ ಕುಟುಂಬ ಸದಸ್ಯರಾದ ಸತೀಶ್ ಶರ್ಮಾ, ಪೂನಂ ಸಂತೋಷ್ ಮತ್ತು ಅವರ ಸ್ನೇಹಿತ ಕೈಲಾಶ್ ಎಂದು ಗುರುತಿಸಲಾಗಿದೆ.
ಸವಾಯಿ ಮಾಧೋಪುರ ಜಿಲ್ಲೆಯಲ್ಲಿ ಭಾನುವಾರ ಈ ಘಟನೆ ನಡೆದಿದೆ. ಚಲಿಸುತ್ತಿದ್ದ ಟ್ರಕ್ ಏಕಾಏಕಿ ಯು-ಟರ್ನ್ ಆದ ಕಾರಣ ಅಪಘಾತ ಸಂಭವಿಸಿದೆ. ಅಪಘಾತದ ಸಿಸಿಟಿವಿ ದೃಶ್ಯಾವಳಿ ಬಿಡುಗಡೆಯಾಗಿದೆ. ಪೊಲೀಸರು ಟ್ರಕ್ ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಆದರೆ ಚಾಲಕ ತಲೆಮರೆಸಿಕೊಂಡಿದ್ದಾನೆ.
ಟ್ರಕ್ ಹಠಾತ್ತನೆ ನಿಧಾನಗೊಂಡು ಎಕ್ಸ್ಪ್ರೆಸ್ವೇಯಲ್ಲಿ ಎಡಕ್ಕೆ ತಿರುಗುವುದನ್ನು ದೃಶ್ಯಾವಳಿ ತೋರಿಸುತ್ತದೆ. ಆಗ ವೇಗವಾಗಿ ಬಂದ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಟ್ರಕ್ ಇದ್ದಕ್ಕಿದ್ದಂತೆ ಎಡಕ್ಕೆ ತಿರುಗಿತು ಮತ್ತು ಚಾಲಕನಿಗೆ ಕಾರನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಅಪಘಾತದ ನಂತರ ಟ್ರಕ್ ನಿಲ್ಲದಿರುವುದನ್ನು ದೃಶ್ಯಾವಳಿಗಳು ತೋರಿಸುತ್ತವೆ.
ಕುಟುಂಬವು ಸಿಕರ್ ಜಿಲ್ಲೆಯಿಂದ ರಣಥಂಬೋರ್ನಲ್ಲಿರುವ ತ್ರಿನೇತ್ರ ಗಣೇಶ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಮುಖ್ಯಮಂತ್ರಿ ಭಜನಲಾಲ್ ಶರ್ಮಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
मुख्यमंत्री जी इन बजरी माफिया से डरने की जगह इन पर कार्यवाही कीजिए तीन दिन से @RajCMO पुलिस आपका निर्देश नही मान रही हैं। @PoliceRajasthan अभी तक ट्रक चालक को नही पकड़ सकी पूरा परिवार सदमे में हैं अगर परिवार के किसी अन्य सदस्य को आघात से नुकसान आपकी जिमेदारी होगी @BhajanlalBjp pic.twitter.com/3GIjqpbC7t — Dinesh Dadiya (@DineshDadiya) May 7, 2024
मुख्यमंत्री जी इन बजरी माफिया से डरने की जगह इन पर कार्यवाही कीजिए तीन दिन से @RajCMO पुलिस आपका निर्देश नही मान रही हैं। @PoliceRajasthan अभी तक ट्रक चालक को नही पकड़ सकी पूरा परिवार सदमे में हैं अगर परिवार के किसी अन्य सदस्य को आघात से नुकसान आपकी जिमेदारी होगी @BhajanlalBjp pic.twitter.com/3GIjqpbC7t
— Dinesh Dadiya (@DineshDadiya) May 7, 2024
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.