ಬೆಂಗಳೂರು (www.vknews.in) : ಶಿವಮೊಗ್ಗ ಲಷ್ಕರ್-ಮುಹಲ್ಲಾದಲ್ಲಿ ಬುಧವಾರ ಇಬ್ಬರು ಯುವಕರನ್ನು ಹತ್ಯೆ ಮಾಡಲಾಗಿದೆ. ತುಂಗಾನಗರದ ಕೆ.ಶುಐಬ್ (35) ಮತ್ತು ದೊಡ್ಡಪೇಟೆಯ ಮಹಮ್ಮದ್ ಗೌಸ್ (30) ಎಂಬುವರು ಕೊಲೆಯಾದವರು.
ಎಂಕೆಕೆ ರಸ್ತೆಯ ನಿವಾಸಿಗಳಾಗಿರುವ ಇವರಿಬ್ಬರೂ ಗ್ಯಾಂಗ್ಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ. ಹಿಂಸಾಚಾರದ ಹಿಂದೆ ಹಿಂದಿನ ದ್ವೇಷವಿದೆ ಎಂದು ಪೊಲೀಸರು ಹೇಳಿದ್ದಾರೆ. ಹಿಂಸಾಚಾರದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಲಷ್ಕರ್-ಮೊಹಲ್ಲಾದ ಕುರಿ ಮಾಂಸ ವ್ಯಾಪಾರಿ ಯಾಸಿನ್ ಖುರೈಶಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಿಂದಿನ ಕೆಲ ಸಮಸ್ಯೆಗಳಿಂದಾಗಿ ಯಾಸಿರ್ ಮೇಲೆ ಹಲ್ಲೆ ನಡೆಸಲು ಬಂದವರು ಬುಧವಾರ ಸಾವಿಗೀಡಾಗಿದ್ದರು ಎನ್ನಲಾಗಿದೆ. ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಹಾಗೂ ಇತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.