(www.vknews. in) ; ಶೈಕ್ಷಣಿಕ -ಸಮಾಜಿಕ ಸಾಂಸ್ಕೃತಿಕ ಕಲಾ -ಸಾಹಿತ್ಯ ಜಾನಪಧ- ಕ್ರೀಡೆ ಮೊದಲಾಗಿ ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ಅನನ್ಯ ಕೊಡುಗೆ ನೀಡಿ ಜಿಲ್ಲೆಯ ಹೆಮ್ಮೆಯ ಪುತ್ರರೆನಿಸಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ : ಎಂ ಮೋಹನ್ ಆಳ್ವ ರವರನ್ನು ಸಯ್ಯದ್ ಅಬ್ದುಲ್ ರಹಿಮಾನ್ ಬಾಫಕಿ ತಂಗಳ್ ಫೌಂಡೇಶನ್ – ಕರ್ನಾಟಕ ,ಲೈಫ್ ಪಬ್ಲಿಷಿಂಗ್ ಟ್ರಸ್ಟ್ -ಮಂಗಳೂರು ಇವುಗಳ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಧಾರ್ಮಿಕ ಸೌಹಾರ್ದತೆಗೆ ಡಾ : ಆಳ್ವ ರವರು ನೀಡುತ್ತಿರುವ ಕಾಣಿಕೆಯನ್ನು ಸ್ಮರಿಸಲಾಯಿತು. ಬಾಫಕಿ ತಂಗಳ್ ಫೌಂಡೇಶನ್ ಅಧ್ಯಕ್ಷರಾದ ಡಾ : ಶೇಖ್ ಭಾವ, ಮುಂದಾಳುಗಳಾದ ದ.ಕ ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷ ಸಿ. ಅಬ್ದುಲ್ ರಹಿಮಾನ್, ರಿಯಾಝ್ ಹರೇಕಳ , ನೌಶಾದ್ ಮಲಾರ್, ಸಯ್ಯದ್ ಪಿ.ಕೆ ಬಂಗೇರುಕಟ್ಟೆ ,ಭಾರತ್ ಪ್ರಮೋಟರ್ಸ್ ಮಾಲಕ ಮುಸ್ತಫ ಲೈಫ್ ಪಬ್ಲಿಷಿಂಗ್ ಟ್ರಸ್ಟ್ ಮಾನೇಜಿಂಗ್ ಟ್ರಸ್ಟಿ ಎ.ಎಸ್ ಇಬ್ರಾಹೀಂ ಕರೀಂ ಮೊದಲಾದವರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.