ಪುತ್ತೂರು (www.vknews. in) : ಪುತ್ತೂರು ರೇಂಜ್ ಜಂ ಇಯ್ಯತುಲ್ ಮುಅಲ್ಲಿಮೀನ್ ಇದರ ಮಹಾಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ ಬಪ್ಪಳಿಗೆ ಮದರಸದಲ್ಲಿ ನಡೆಯಿತು ಸ್ಥಳೀಯ ಮಸೀದಿ ಖತೀಬರಾದ ಸಿರಾಜುದ್ದೀನ್ ಫೈಝಿ ಉದ್ಘಾಟಿಸಿದರು ಸಮಸ್ತ ಮುಫತ್ತಿಷ್ ಹನೀಫ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಸಕ್ತ ಶೈಕ್ಷಣಿಕ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು ಸಮಸ್ತ ಮುದರ್ರಿಬರಾದ ತಾಜುದ್ದೀನ್ ರಹ್ಮನಿ ತದ್ರೀಬ್ ಕ್ಲಾಸ್ ನಡೆಸಿಕೊಟ್ಟರು ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷರಾದ ರಫೀಕ್ ಹಾಜಿ ಕೊಡಾಜೆ ಕಾರ್ಯದರ್ಶಿ ಅಝೀಝ್ ಬಪ್ಪಳಿಗೆ ಕೋಶಾಧಿಕಾರಿ ಅಬ್ದುಲ್ ಹಮೀದ್ ಲವ್ಲಿ ಪಡೀಲ್ ಜುಮಾ ಮಸೀದಿ ಅಧ್ಯಕ್ಷರಾದ ಆರ್.ಪಿ ರಜಾಕ್ ಬಿ ಎಚ್ ಮೊಹಮ್ಮದ್ ಹಾಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ 2024-25ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಅಧ್ಯಕ್ಷರಾಗಿ ಹನೀಫ್ ದಾರಿಮಿ ನೆಕ್ಕಿಲಾಡಿ ಉಪಾಧ್ಯಕ್ಷರುಗಳಾಗಿ ಸುಲೈಮಾನ್ ದಾರಿಮಿ, ಅಶ್ರಫ್ ದಾರಿಮಿ ಬೀಟಿಗೆ ಮಂಜ, ಪ್ರಧಾನ ಕಾರ್ಯದರ್ಶಿಯಾಗಿ ಬಶೀರ್ ದಾರಿಮಿ ಸಾಲ್ಮರ ಕಾರ್ಯದರ್ಶಿಗಳಾಗಿ ಕರೀಂ ದಾರಿಮಿ ದರ್ಬೆ, ಅಬ್ದುಲ್ ಖಾದರ್ ಹನೀಫೀ ಕೋಶಾಧಿಕಾರಿಯಾಗಿ ಎಲ್ ಟಿ ರಝಾಕ್ ಹಾಜಿ ಪುತ್ತೂರರವರನ್ನು ಆಯ್ಕೆ ಮಾಡಲಾಯಿತು ಪರೀಕ್ಷಾ ಬೋರ್ಡ್ ಚೇರ್ಮನ್ ಆಗಿ ಶಾಫಿ ಮುಸ್ಲಿಯಾರ್ ಬಪ್ಪಳಿಗೆ ವೈಸ್ ಚೇರ್ಮನಾಗಿ ಇಬ್ರಾಹಿಂ ಕೌಸರಿ ಖಾಲಿದ್ ಅಕ್ರಂ ಅಸ್ಲಮಿ ಐ.ಟಿ. ಕೋಡಿನೇಟರ್ ಆಗಿ ಮುಸ್ತಫಾ ಫೈಝಿ ಎಸ್ ಕೆ ಎಸ್ ಬಿ ವಿ ಚೇರ್ಮನ್ ಆಗಿ ಸಿದ್ದೀಕ್ ಫೈಝಿ ಕೆದ್ವಡ್ಕ ಕನ್ವೀನರಾಗಿ ನಾಸಿರ್ ಫೈಝಿ ಪರ್ಲಡ್ಕ ಆಯ್ಕೆ ಮಾಡಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.