ಬೈಕಂಪಾಡಿ(ವಿಶ್ವಕನ್ನಡಿಗ ನ್ಯೂಸ್): ಕೊರೋನಾ ವೈರಸ್ತಡೆಗಟ್ಟುವ ಸಲುವಾಗಿ ಕೇಂದ್ರ ಸರಕಾರಘೋಷಣೆ ಮಾಡಿರುವ ಲಾಕ್ಡೌನ್ನಿಂದಾಗಿದೇಶದಆರ್ಥಿಕತೆತೀರಾ ಹಾಳಾಗಿದ್ದು, ಮತ್ತೊಂದುಕಡೆಅದನ್ನೇ ನೆಪಮಾಡಿಕೊಂಡು ಸಾಮಾಜಿಕಅಂತರವನ್ನು ಕಾಯ್ದುಕೊಳ್ಳುವ ಹೆಸರಿನಲ್ಲಿ ನಗರದ ಹೃದಯಭಾಗದಲ್ಲಿದ್ದಕೇಂದ್ರ ಮಾರುಕಟ್ಟೆಯನ್ನುಏಕಾಏಕಿಯಾಗಿ ಬೈಕಂಪಾಡಿಯ ಎಪಿಎಂಸಿ ಯಾರ್ಡ್ಗೆತಾತ್ಕಾಲಿಕ ನೆಲೆಯಲ್ಲಿಎತ್ತಂಗಡಿ ಮಾಡಿರುವುದು ಹಾಗೂ ಯಾವುದೇರೀತಿಯ ಪರ್ಯಾಯ ವ್ಯವಸ್ಥೆಕಲ್ಪಿಸದಿರುವುದುತೀರಾಅವೈಜ್ಞಾನಿಕಕ್ರಮ ಹಾಗೂ ಖಂಡನೀಯವಾಗಿದೆ.
ದ.ಕ. ಜಿಲ್ಲೆಯಆರ್ಥಿಕತೆಯಜೀವನಾಡಿಯಾದಕೇಂದ್ರ ಮಾರುಕಟ್ಟೆ ಕಳೆದ ಹಲವು ದಶಕಗಳಿಂದ ಮಂಗಳೂರು ನಗರದ ಹೃದಯಭಾಗದಲ್ಲಿರುವ 2 ಕಟ್ಟಡಗಳಲ್ಲಿ ಕಾರ್ಯಚರಿಸಿಕೊಂಡಿದ್ದು, ದಿನವೊಂದಕ್ಕೆಕೋಟ್ಯಾಂತರರೂ.ವಹಿವಾಟು ನಡೆಸುವ ಸ್ಥಳವಾಗಿದೆ.ಅಂತಹ ಮಾರುಕಟ್ಟೆಯ ಪರಿಸರದಲ್ಲಿ ವಿಪರೀತಜನಸಂದಣಿ ಸೇರುವುದನ್ನೇ ನೆಪ ಮಾಡಿದ.ಕ.ಜಿಲ್ಲಾಡಳಿತವು ಪ್ರತೀ ದಿನ ರಾತ್ರಿ 11ರಿಂದ ಮುಂಜಾನೆ 4 ಗಂಟೆಯವರೆಗೆ ಸಗಟು ವ್ಯಾಪಾರಸ್ಥರು ವ್ಯಾಪಾರ ಮಾಡಬೇಕು, ಚಿಲ್ಲರೆ ವ್ಯಾಪಾರಸ್ಥರು ಬೆಳಿಗ್ಗೆ 7ರಿಂದ 12ರವರೆಗೆ ವ್ಯಾಪಾರ ಮಾಡಬೇಕೆಂದು ತೀರ್ಮಾನಿಸಿತು.
ಬಳಿಕ ಒಂದೇ ದಿನದ ಪರಿಸ್ಥಿತಿಯನ್ನು ನೋಡಿ, ಮೊದಲೇಕೇಂದ್ರ ಮಾರುಕಟ್ಟೆಯ ಬಗ್ಗೆ ಪೂರ್ವಾಗ್ರಹ ಹೊಂದಿದ್ದ ಜಿಲ್ಲಾಡಳಿತವು ಸಾಮಾಜಿಕಅಂತರದ ಪ್ರಶ್ನೆಯನ್ನು ಮುಂದಿಟ್ಟುಅಲ್ಲಿನ ವ್ಯಾಪಾರಸ್ಥರೊಂದಿಗೆಯಾವುದೇರೀತಿಯಲ್ಲಿಚರ್ಚಿಸದೆ, ಕನಿಷ್ಠ ಮುನ್ಸೂಚನೆಯನ್ನುಕೂಡಕೊಡದೆಏಕಾಏಕಿಯಾಗಿಕೇಂದ್ರ ಮಾರುಕಟ್ಟೆಯನ್ನು ಬೈಕಂಪಾಡಿಯ ಎಪಿಎಂಸಿ ಯಾರ್ಡ್ಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿಕೆಯನ್ನು ಕೊಟ್ಟಿತು. ಕೇಂದ್ರ ಮಾರುಕಟ್ಟೆಯಲ್ಲಿ ಸಗಟು, ಚಿಲ್ಲರೆ ವ್ಯಾಪಾರಸ್ಥರು ಸೇರಿದಂತೆ ಬಟ್ಟೆ, ಎಲೆಕ್ಟ್ರಾನಿಕ್ಸ್, ದಿನಸಿ ಅಂಗಡಿಗಳ ವ್ಯಾಪಾರಸ್ಥರುಇದ್ದರೂಅವರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದ ಜಿಲ್ಲಾಡಳಿತವು, ಎಪ್ರಿಲ್ 2ರಿಂದ 14ರವರೆಗೆ ಸಗಟು ವ್ಯಾಪಾರಸ್ಥರು ಮಾತ್ರತಮ್ಮ ವ್ಯಾಪಾರವನ್ನುತಾತ್ಕಾಲಿಕ ನೆಲೆಯಲ್ಲಿ ಬೈಕಂಪಾಡಿಯ ಎಪಿಎಂಸಿ ಯಾರ್ಡ್ಗೆ ಸ್ಥಳಾಂತರಿಸಬೇಕೆಂದು ಆದೇಶ ಹೊರಡಿಸಲಾಯಿತು.
ಉಳಿದ ಚಿಲ್ಲರೆ ವ್ಯಾಪಾರಸ್ಥರು ಶಾಪ್ಗಳ ಬಗ್ಗೆ ಯಾವುದೇಚಕಾರವನ್ನುಎತ್ತಲಿಲ್ಲ. ಬಳಿಕ ಕಾಟಾಚಾರಕ್ಕೆ ವ್ಯಾಪಾರಸ್ಥರ ಸಭೆಯನ್ನು ಆಯೋಜಿಸಿ ಜಿಲ್ಲಾಡಳಿತದ ತೀರ್ಮಾನವನ್ನು ಹೇರಿದ್ದರೇ ಹೊರತು ವ್ಯಾಪಾರಸ್ಥರ ಅಹವಾಲಿಗೆ ಸ್ಪಂದಿಸಲಿಲ್ಲ. ಬಳಿಕ ಸಂಸದರು, ಶಾಸಕರ ಸಮಕ್ಷಮದಲ್ಲಿ ಎಪಿಎಂಸಿ ಸಭಾಂಗಣದಲ್ಲಿ ಸಭೆ ನಡೆದು, ಯಾವುದೇಕಾರಣಕ್ಕೂಕೇಂದ್ರ ಮಾರುಕಟ್ಟೆಯನ್ನು ಎಪಿಎಂಸಿ ಯಾರ್ಡ್ಗೆ ಸ್ಥಳಾಂತರಿಸಬಾರದು, ನೂತನಕಟ್ಟಡದ ಪ್ರಕ್ರಿಯೆ ಪ್ರಾರಂಭವಾಗುವವರೆಗೆ ಈ ಹಿಂದಿನ ಕಟ್ಟಡದಲ್ಲೇಕಾರ್ಯಾಚರಿಸಲು ಅವಕಾಶ ನೀಡಬೇಕೆಂದು ವ್ಯಾಪಾರಸ್ಥರು ಒತ್ತಾಯಿಸಿದಾಗ, ಸಂಸದರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿಕೇಂದ್ರ ಮಾರುಕಟ್ಟೆಯ ನೂತನಕಟ್ಟಡದ ಪ್ರಸ್ತಾಪವನ್ನು ಮುಂದಿಟ್ಟರು. ಒಟ್ಟಿನಲ್ಲಿ ಸಂಸದರು ಶಾಸಕರುಇಲ್ಲಿಯವರೆಗೆಅಧಿಕೃತವಾಗಿಕೇಂದ್ರ ಮಾರುಕಟ್ಟೆಯ ನೂತನಕಟ್ಟಡದಯೋಜನೆಯ ಬಗ್ಗೆ ಬಹಿರಂಗ ಹೇಳಿಕೆಯನ್ನು ಕೊಡದೆ, ಕೇವಲ ಕೊರೋನಾ ನೆಪದಲ್ಲಿ, ಸಾಮಾಜಿಕಅಂತರವನ್ನುಕಾಪಾಡುವ ಹೆಸರಿನಲ್ಲಿಈಗಿರುವಕೇಂದ್ರ ಮಾರುಕಟ್ಟೆಯನ್ನೇಇನ್ನಿಲ್ಲವಾಗಿಸಲು ಹೊರಟಿದ್ದಾರೆ.4-5 ದಿನಗಳಲ್ಲಿ ಕೇಂದ್ರ ಮಾರುಕಟ್ಟೆಯ ವ್ಯಾಪಾರಸ್ಥರ ಸಭೆಯನ್ನುಕರೆಯುವುದಾಗಿ ವಾಗ್ದಾನವಿತ್ತ ಸಂಸದರು, 21 ದಿನಗಳು ಕಳೆದರೂ ಈ ಬಗ್ಗೆ ದಿವ್ಯಮೌನ ವಹಿಸಿರುವುದು ಹಲವಾರು ಸಂಶಯಗಳಿಗೆ ಎಡೆ ಮಾಡಿದೆ.
ಕಳೆದ 2 ತಿಂಗಳಿನಿಂದ ಲಾಕ್ಡೌನ್ನಿಂದಾಗಿ ಪ್ರತಿಯೊಬ್ಬರ ಬದುಕುತೀರಾ ಸಂಕಷ್ಟದಲ್ಲಿದ್ದು, ವ್ಯಾಪಾರಸ್ಥರುಕೂಡಾಅದರಿಂದ ಹೊರತಾಗಿಲ್ಲ. ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ 598 ವ್ಯಾಪಾರಸ್ಥರನ್ನು ಒಳಗೊಂಡ ಕೇಂದ್ರ ಮಾರುಕಟ್ಟೆಯನ್ನುಕೊರೋನಾದ ಹೆಸರಿನಲ್ಲಿ ಹಾಗೂ ನವೀಕರಣದ ನೆಪದಲ್ಲಿ ಪರ್ಯಾಯ ವ್ಯವಸ್ಥೆ ಮಾಡದೆಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಬೀದಿಪಾಲು ಮಾಡಿರುವುದು ಸರ್ವಥಾ ಸರಿಯಲ್ಲ.
ಈ ಬಗ್ಗೆ ಜಿಲ್ಲಾಡಳಿತವು ತುರ್ತು ಗಮನ ಹರಿಸಿ ಸದ್ಯದ ಪರಿಸ್ಥಿತಿಯಲ್ಲಿ ವ್ಯಾಪಾರಕ್ಕೆತೀರಾ ಅನಾನುಕೂಲವಾಗಿರುವ ಬೈಕಂಪಾಡಿಯ ಎಪಿಎಂಸಿ ಯಾರ್ಡ್ನಲ್ಲಿ ಸಗಟು ವ್ಯಾಪಾರವನ್ನು ಮುಂದುವರಿಸುವಇರಾದೆಯನ್ನುತಕ್ಷಣಕೈಬಿಡಬೇಕು, ನಗರದ ಹೃದಯಭಾಗದಲ್ಲಿರುವಕೇಂದ್ರ ಮಾರುಕಟ್ಟೆಯಕಟ್ಟಡದಲ್ಲೇ, ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡಬೇಕು, ವೈಜ್ಞಾನಿಕ ನೆಲೆಯಲ್ಲಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿದ ಬಳಿಕವಷ್ಟೇ ನೂತನಕಟ್ಟಡದಕಾರ್ಯಕ್ಕೆ ಮುಂದಾಗಬೇಕು ಹಾಗೂ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಸುಮಾರು 50 ಲಕ್ಷರೂ.ಯಷ್ಟು ನಷ್ಟವಾಗಿದ್ದು, ಸಂತ್ರಸ್ತಗೊಂಡ ವ್ಯಾಪಾರಸ್ಥರಿಗೆಕೂಡಲೇ ಪರಿಹಾರವನ್ನು ಘೋಷಿಸಬೇಕೆಂದುಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘ (ರಿ) ಹಾಗೂ ನ್ಯೂ ಸೆಂಟ್ರಲ್ ಮಾರ್ಕೆಟ್ ಶಾಪ್ಓನರ್ಸ್ ಎಸೋಸಿಯೇಶನ್ (ರಿ) ಉಭಯ ಸಂಘಟನೆಗಳು ಜಂಟಿಯಾಗಿ ಒತ್ತಾಯಿಸಿದೆ. ಇಲ್ಲದಿದ್ದಲ್ಲಿಕೇಂದ್ರ ಮಾರುಕಟ್ಟೆಯ ಉಳಿವಿಗಾಗಿ ಈ ತಿಂಗಳ ಅಂತ್ಯದವರೆಗೆ ಪ್ರಬಲ ಹೋರಾಟವನ್ನು ಸಂಘಟಿಸುವುದಾಗಿಯೂ ಹಾಗೂ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳನ್ನು ಒಟ್ಟು ಸೇರಿಸಿ ಹೋರಾಟ ಸಮಿತಿಯನ್ನುರೂಪಿಸುವ ಮೂಲಕ ಹೋರಾಟದತೀವ್ರತೆಯನ್ನು ಹೆಚ್ಚಿಸಲಾಗುವುದುಎಂದು ಸಂಘಟನೆಗಳು ತಿಳಿಸಿವೆ. ವಂದನೆಗಳೊಂದಿಗೆ,
ಸುನೀಲ್ಕುಮಾರ್ ಬಜಾಲ್ ಮುಸ್ತಫಕುಂಞ ಜನಾರ್ಧನ ಸಾಲಿಯಾನ್ ಕಾರ್ಯಾಧ್ಯಕ್ಷರು ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿ ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘ (ರಿ) ಮಂಗಳೂರು
ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದಇತರರು: ಅನಿಲ್ಕುಮಾರ್, ಗೌರವ ಸಲಹೆಗಾರರು, ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘ (ರಿ) ಎ.ಜೆ. ಶೇಖರ್, ಉಪಾಧ್ಯಕ್ಷರು, ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘ (ರಿ) ಶ್ರೀಮತಿ ಗ್ರೇಸಿ ಫೆರ್ನಾಂಡಿಸ್, ಉಪಾಧ್ಯಕ್ಷರು, ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘ (ರಿ) ಗಣೇಶ್, ಪ್ರಧಾನ ಕಾರ್ಯದರ್ಶಿ, ನ್ಯೂ ಸೆಂಟ್ರಲ್ ಮಾರ್ಕೆಟ್ ಶಾಪ್ಓನರ್ಸ್ ಅಸೋಸಿಯೇಶನ್ (ರಿ) ಮುಸ್ತ್ತಾಕ್, ಮುಖಂಡರು, ನ್ಯೂ ಸೆಂಟ್ರಲ್ ಮಾರ್ಕೆಟ್ ಶಾಪ್ಓನರ್ಸ್ ಅಸೋಸಿಯೇಶನ್ (ರಿ)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.