ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಸಾಮಾಜಿಕ ಕಳಕಳಿಯಲ್ಲ ಯುವಕರ ತಂಡ ಜಾತಿ ಮತ ಬೇದ ಮರೆತು ಬಡವರ, ಆನಾಥರ, ನಿರ್ಗತಿಕರ ಸಂಕಷ್ಟಗೊಳಗಾದವರ ಪರವಾಗಿ ರಾತ್ರಿ ಹಗಲೆನ್ನದೆ ನಿರಂತರವಾಗಿ ಕಾರ್ಯಚರಿಸುತ್ತಿರುವ ಕಾರುಣ್ಯ ನಿಧಿ ಕರ್ನಾಟಕ ಎಂಬ ವಾಟ್ಸಪ್ ಗ್ರೂಪನ್ನು ಸಾಮಾಜಿಕ, ಶೈಕ್ಷಣಿಕ,ಸಾಂಸ್ಕ್ರತಿಕ,ಮಾಧ್ಯಮ ವಲಯದಲ್ಲಿ ಕಾರ್ಯಚರಿಸುವ ಸಲುವಾಗಿ ಚಾರಿಟೇಬಲ್ ಟ್ರಸ್ಟಾಗಿ ನೋಂದಣಿ ಮಾಡಲಾಯಿತು.
ಈ ಸಂಸ್ಥೆಯನ್ನು ಪ್ರಗತಿಪರ ಚಿಂತಕ ಮತ್ತು ನ್ಯಾಯವಾದಿಯಾದ ಸುದೀರ್ ಕುಮಾರ್ ಮುರೋಳಿಯವರ ಸಹಕಾರದಿಂದ ಕಾರುಣ್ಯ ನಿಧಿ ಚಾರಿಟೇಬಲ್ ಟ್ರಸ್ಟ್ಗೆ ಸರ್ಕಾರದ ಮಾನ್ಯತೆ ಪಡೆಯಲಾಯಿತು.
ಕಾರುಣ್ಯ ನಿಧಿ ತಂಡದ ಮುಖ್ಯ ಸಲಹೆಗಾರರಾಗಿ ಹಾಗೂ ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಸುದೀರ್ ಕುಮಾರ್ ಮುರೋಳಿಯವರನ್ನು ಆಯ್ಕೆ ಮಾಡಲಾಯಿತು. ಈ ಸಂಧರ್ಭದಲ್ಲಿ ಕಾರುಣ್ಯ ನಿಧಿ ಕರ್ನಾಟಕ ಚಾರಿಟೇಬಲ್ ಟ್ರಸ್ಟಿನ(ರಿ) ಸ್ಥಾಪಕರಾದ ಅಬ್ದುಲ್ ಜಲೀಲ್ ಕಳಾರ,ನಿಚ್ಚು ಮಂಗಳೂರು,ಹರ್ಷದ್ ಕೊಪ್ಪ, ಅಬ್ದುಲ್ ಖಾದರ್ ಸದಸ್ಯರಾದ ರಮೀಝ್, ಸುಪೈದ್ ಕೊಪ್ಪ,ತೌಸೀಫ್ ಕೊಪ್ಪ,ಶಾರೂಕು ಕೊಪ್ಪಳ,ದಾವೂದ್ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.