ಕೋಲಾರ (ವಿಶ್ವಕನ್ನಡಿಗ ನ್ಯೂಸ್) : – ಜಿಲ್ಲೆಯ ೧೧೭ ಪರೀಕ್ಷಾ ಕೇಂದ್ರಗಳಲ್ಲಿ ಇಂದು ನಡೆದ ಎಸ್ಸೆಸ್ಸೆಲ್ಸಿ ಗಣಿತ , ವಿಜ್ಞಾನ , ಸಮಾಜ ವಿಜ್ಞಾನ ಪರೀಕ್ಷೆಗೆ ನೋಂದಾಯಿಸಿದ್ದ ಒಟ್ಟು ೨೦೪೭೨ ವಿದ್ಯಾರ್ಥಿಗಳ ಪೈಕಿ ಕೇವಲ ೭೦ ಮಂದಿ ಗೈರಾಗಿದ್ದಾರೆ ಮತ್ತು ಅನಾರೋಗ್ಯದ ಕಾರಣದಿಂದ ೩ ವಿದ್ಯಾರ್ಥಿಗಳು ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದಾರೆ ಎಂದು ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್. ನಾಗೇಂದ್ರಪ್ರಸಾದ್ ತಿಳಿಸಿದ್ದಾರೆ.
ಇಂದು ಪರೀಕ್ಷೆಗೆ ನೋಂದಾಯಿಸಿದ ಒಟ್ಟು ೨೧೪೭೨ ಮಂದಿ ಪೈಕಿ ೨೦೪೦೨ ಮಂದಿ . ಹಾಜರಾಗಿದ್ದು , ಹಿಂದಿನ ಎಲ್ಲಾ ಪರೀಕ್ಷೆಗಳಿಗಿಂತ ಗೈರು ಹಾಜರಿ ಪ್ರಮಾಣ ಅತ್ಯಂತ ಕಡಿಮೆಯೆಂದು ದಾಖಲಾಗಿದೆ.
ತಾಲೂಕುವಾರು ಹಾಜರಿ ವಿವರ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಹಾಜರಾಗಿ ಅಂಕಿ ಅಂಶ ನೀಡಿದ್ದು , ಬಂಗಾರಪೇಟೆ ೩೨೫೧ ಮಂದಿ ನೋಂದಾಯಿಸಿದ್ದು , ೩೨೪೩ ಮಂದಿ ಹಾಜರಾಗಿ ೮ ಮಂದಿ ಗೈರಾಗಿದ್ದಾರೆ. ಕೆಜಿಎಫ್ ತಾಲ್ಲೂಕಿನಲ್ಲಿ ೨೫೧೭ ಮಂದಿ ನೋಂದಾಯಿಸಿದ್ದು , ೨೫೧೩ ಮಂದಿ ಹಾಜರಾಗಿ ಕೇವಲ ೪ ಮಂದಿ ಗೈರಾಗಿದ್ದಾರೆ. ಕೋಲಾರ ತಾಲ್ಲೂಕಿನಲ್ಲಿ ೫೮೦೧ ಮಂದಿ ನೋಂದಾಯಿಸಿದು , ೫೭೭೬ ಮಂದಿ ಹಾಜರಾಗಿ ೨೫ ಮಂದಿ ಗೈರಾಗಿದ್ದಾರೆ, ಮಾಲೂರು ತಾಲೂಕಿನಲ್ಲಿ ೨೯೬೦ ಮಂದಿ ನೋಂದಾಯಿಸಿದ್ದು , ೨೯೪೫ ಮಂದಿ ಹಾಜರಾಗಿ ೧೯ ಮಂದಿ ಗೈರಾಗಿದ್ದಾರೆ.
ಉಳಿದಂತೆ ಮುಳಬಾಗಿಲು ತಾಲ್ಲೂಕಿನಲ್ಲಿ ೩೧೬೫ ಮಂದಿ ನೋಂದಾಯಿಸಿದ್ದು , ೩೧೫೩ ಮಂದಿ ಹಾಜರಾಗಿದ್ದು , ೧೨ ಮಂದಿ ಗೈರಾಗಿದ್ದಾರೆ. ಹಾಗೆಯೇ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ೨೭೭೮ ಮಂದಿ ನೋಂದಾಯಿಸಿದ್ದು , ೨೭೭೨ ಮಂದಿ ಹಾಜರಾಗಿ ೬ ಮಂದಿ ಗೈರಾಗಿದ್ದಾರೆ.
ಎಸೆಸೆಲ್ಸಿ ಪರೀಕ್ಷಾ ಇತಿಹಾಸದಲ್ಲೇ ಅತಿ ಕಡಿಮೆ ವಿದ್ಯಾರ್ಥಿಗಳು ಗೈರಾಗಿರುವುದು ದಾಖಲೆಯಾಗಿದ್ದು , ಇದರಲ್ಲಿ ಖಾಸಗಿ ಅಭ್ಯರ್ಥಿಗಳು , ಪುನರಾವರ್ತಿತ ಅಭ್ಯರ್ಥಿಗಳೂ ಇದ್ದಾರೆ. ಪ್ರಥಮಭಾಷೆ , ದ್ವಿತೀಯ ಹಾಗೂ ತೃತೀಯ ಭಾಷಾ ವಿಷಯಗಳ ಪರೀಕ್ಷೆ ಒಟ್ಟು ೧೨೦ ಅಂಕಗಳಿಗೆ ಜು .೨೨ ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.