ಪುತ್ತೂರು (www.vknews.com) : ಕ್ಯಾಂಪಸ್ ಫ್ರಂಟ್ ಪುತ್ತೂರು ಜಿಲ್ಲೆಯ ವತಿಯಿಂದ ಎಳೆಯ ಪ್ರಾಯದಲ್ಲಿಯೇ ವಿಶಿಷ್ಠ ಸಾಧನೆಗೈದ ಯುವ ವಿಜ್ಞಾನಿ ಝಹ್ರಾನ್ ನಿಹಾಲ್ರವರಿಗೆ ಸನ್ಮಾನ ಮಾಡಲಾಯಿತು. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಸಣ್ಣ ಪ್ರಾಯದಲ್ಲಿಯೇ ಕರಗತ ಮಾಡಿಕೊಂಡು ಸಂಶೋಧನೆ ನಡೆಸಿ ಚಾಲಕ ರಹಿತ ವಾಹನ, ಸೂರ್ಯನ ಕಿರಣಗಳತ್ತ ವಾಲುವ ವಿಶಿಷ್ಟ ರೀತಿಯ ಸೋಲಾರ್ ಪ್ಯಾನೆಲ್, ವೈಫೈ ಮೂಲಕ ಜಗತ್ತಿನ ಯಾವುದೇ ಮೂಲೆಯಿಂದ ನಿಯಂತ್ರಿಸಬಲ್ಲ ಫ್ಯಾನ್ ಹಾಗೂ ಬಲ್ಬುಗಳು ಹೀಗೆ ಹಲವಾರು ನೂತನ ಆವಿಷ್ಕಾರಗಳ ಮೂಲಕ ಝಹ್ರಾನ್ ನಿಹಾಲ್ರವರು ಯುವ ವಿಜ್ಞಾನಿ ಎನಿಸಿಕೊಂಡು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಪುತ್ತೂರು ಜಿಲ್ಲಾ ಅಧ್ಯಕ್ಷರಾದ ಅನ್ಸಾರ್ ಬೆಳ್ಳಾರೆ, ಜಿಲ್ಲಾ ಕಾರ್ಯದರ್ಶಿ ಮುಸ್ತಾಫಾ ಕೊಡಿಪ್ಪಾಡಿ, ಪರ್ಲಡ್ಕ ಯುನಿಟ್ ಕಾರ್ಯದರ್ಶಿ ಅನಸ್ ಪರ್ಲಡ್ಕ, ಉಪಾಧ್ಯಕ್ಷರಾದ ಅಪ್ರಾಜ್ ಪರ್ಲಡ್ಕ ಉಪಸ್ಥಿತರಿದ್ದರು.
ಕ್ಯಾಂಪಸ್ ಫ್ರಂಟ್ ಪುತ್ತೂರು
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.