ಕೋಲಾರ (ವಿಶ್ವಕನ್ನಡಿಗ ನ್ಯೂಸ್) : – ಕೋವಿಡ್ ಆತಂಕದ ನಡುವೆ ಭಾನುವಾರ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆಗೆ ನೋಂದಾಯಿಸಿದ್ದ ೫೫೩೭ ಅಭ್ಯರ್ಥಿಗಳ ಪೈಕಿ ೫೧೨೪ ಮಂದಿ ಹಾಜರಾಗಿದ್ದು , ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕ ಅಭ್ಯರ್ಥಿಗಳು ಸೇರಿದಂತೆ ಒಟ್ಟು ೪೧೩ ಮಂದಿ ಗೈರಾಗಿದ್ದಾರೆ ಎಂದು ಡಿಡಿಪಿಐ ಎಸ್.ಜಿ.ನಾಗೇಶ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು , ಪ್ರಾಥಮಿಕ ಶಿಕ್ಷಕರಗಲು ೨೨೩೫ ಮಂದಿ ಪರೀಕ್ಷೆಗೆ ನೋದಾಯಿಸಿದ್ದು , ಅವರಲ್ಲಿ ೨೦೪೧ ಮಂದಿ ಹಾಜರಾಗಿ ೧೯೪ ಮಂದಿ ಗೈರಾಗಿದ್ದಾರೆ. ಹಾಗೆಯೇ ಪ್ರೌಢಶಿಕ್ಷಕರಾಗಲು ೩೩೦೨ ಮಂದಿ ಹೆಸರು ನೋಂದಾಯಿಸಿದ್ದು , ಪರೀಕ್ಷೆಗೆ ೩೦೮೩ ಮಂದಿ ಹಾಜರಾಗಿದ್ದು , ೨೧೯ ಮಂದಿ ಗೈರಾಗಿದ್ದಾರೆ ಎಂದು ತಿಳಿಸಿದರು.
ಥರ್ಮಲ್ ಸೀನಿಂಗ್ ಸ್ಯಾನಿಟೈಸರ್ ಬಳಕೆ ಪರೀಕ್ಷೆ ನಡೆದ ನಗರದ ಎಲ್ಲಾ ೧೫ ಕೇಂದ್ರಗಳಲ್ಲೂ ಪರೀಕ್ಷೆಗೆ ಮುನ್ನಾ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿತ್ತು ಮತ್ತು ಬೆಳಗ್ಗಿನ ಅವಧಿಯ ಪರೀಕ್ಷೆ ಮುಗಿದ ನಂತರವೂ ಮಧ್ಯಾಹ್ನದ ಪರೀಕ್ಷೆಗೆ ಮುನ್ನಾ ಮತ್ತೆ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಯಿತು ಎಂದು ತಿಳಿಸಿದರು.
ಆರೋಗ್ಯ ಇಲಾಖೆ ಹಾಗೂ ಆಶಾ ಕಾರ್ಯಕರ್ತೆಯರ ಸಹಕಾರದಿಂದ ಪರೀಕ್ಷೆಗೆ ಬರುವ ಎಲ್ಲಾ ಅಭ್ಯರ್ಥಿಗಳು ಮತ್ತು ಸಿಬ್ಬಂದಿಗೆ ಥರ್ಮಲ್ ಸ್ಮಿನಿಂಗ್ ಮಾಡಲಾಯಿತು. ಮಾಸ್ಟ್ ಕಡ್ಡಾಯ ಧರಿಸಲು ಸೂಚಿಸಿದ್ದು , ಮಾಸ್ಕ್ ಇಲ್ಲದ ಅಭ್ಯರ್ಥಿಗಳಿಗೆ ಪ್ರವೇಶ ನಿರಾಕರಿಸಿ ಮಾಸ್ಕ್ ಧರಿಸಿದ ನಂತರ ಒಳ ಬಿಡಲಾಯಿತು , ಆಶಾ ಕಾರ್ಯಕರ್ತೆಯರು ಅಭ್ಯರ್ಥಿಗಳಿಗೆ ಥರ್ಮಲ್ಸ್ ಮಾಡಿ ಸ್ಯಾನಿಟೈಸರ್ ನೀಡಿ ಒಳ ಬಿಟ್ಟರು.
ಕೋವಿಡ್ ಪೀಡಿತ ಪರೀಕ್ಷಾರ್ಥಿಗಳು ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ , ಮೊದಲೇ ಮಾಹಿತಿ ನೀಡಿದಲ್ಲಿ ಪರೀಕ್ಷೆ ನಡೆಸಲು ಇಲಾಖೆ ಸಿದ್ದತೆ ನಡೆಸಿತ್ತು ಆದರೆ ಅಂತಹ ಪ್ರಕರಣಗಳು ಯಾವುದೂ ಗಮನಕ್ಕೆ ಬರಲಿಲ್ಲ ಎಂದು ತಿಳಿಸಿ , ಕೋವಿಡ್ ಸಮಸ್ಯೆ ಪ್ರಾಥಮಿಕ ಸಂಪರ್ಕ ಇರುವವರು ಪರೀಕ್ಷೆಗೆ ಬಂದರೆ ಅವರಿಗೆ ವಿಶೇಷ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು ಎಂದರು.
ಕೊವಿಡ್ ಹಿನ್ನಲೆ ಹೆಚ್ಚುವರಿ ಸಿಬ್ಬಂದಿ ಶಿಕ್ಷಕರ ಅರ್ಹತಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ , ಈ ಬಾರಿ ಹಿಂದಿನ ವರ್ಷಗಳಿಗಿಂತ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದು ಯಾವುದೇ ಗೊಂದಲಗಳಿಲ್ಲದೇ ಪರೀಕ್ಷೆ ಸುಗಮವಾಗಿ ನಡೆದಿದೆ ಎಂದು ತಿಳಿಸಿದರು. ಸಾಮಾಜಿಕ ಅಂತರ ಕಾಯುಕೊಳ್ಳಲು ಕಮವಹಿಸಲಾಗಿತ್ತು. ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಇತರೆಲ್ಲಾ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಮೊಬೈಲ್ ತರುವುದನ್ನು ನಿಷೇಧಿಸಲಾಗಿದ್ದು , ಕೊವಿಡ್ ಮಾರ್ಗಸೂಚಿ ಪಾಲನೆಗೆ ವಿಶೇಷ ನಿಗಾ ವಹಿಸಿದ್ದಾಗಿ ತಿಳಿಸಿದರು.
ಪರೀಕ್ಷಾ ಸಿಬ್ಬಂದಿಗೂ ಮಾಸ್ಕ್ , ಗೌಸ್ ಕಡ್ಡಾಯಗೊಳಿಸಿದ್ದು , ಅಭ್ಯರ್ಥಿಗಳು ಮನೆಯಿಂದಲೇ ಕುಡಿಯುವ ನೀರು ತರಲು ಸೂಚಿಸಲಾಗಿತ್ತು ಜತೆಗೆ ಬಳಸಿ ಬಿಸಾಡುವ ಲೋಟಗಳನ್ನು ಕುಡಿಯುವ ನೀರಿಗೆ ಪ್ರತಿ ಕೇಂದ್ರದಲ್ಲೂ ವ್ಯವಸ್ಥೆ ಮಾಡಲಾಗಿತ್ತು ಎಂದರು. ಯಾವುದೇ ಸಮಸ್ಯೆ ಎದುರಾಗದಂತೆ ಪರೀಕ್ಷಾ ಕೇಂದ್ರಗಳ ಸುತ್ತ ೨೦೦ ಮೀ.ವ್ಯಾಪ್ತಿಯಲ್ಲಿ ೧೪೪ ನೇ ಸೆಕ್ಷನ್ ಅನ್ವಯ ನಿಷೇದಾಜ್ಞೆಯನ್ನು ಜಿಲ್ಲಾಧಿಕಾರಿಗಳು ಜಾರಿ ಮಾಡಿದ್ದು , ಭದ್ರತೆಗೆ ಪ್ರತಿಯೊಂದು ಕೇಂದ್ರಕ್ಕೂ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿತ್ತು ಎಂದು ತಿಳಿಸಿದರು.
ಮುಖ್ಯ ಅಧೀಕ್ಷಕರಾಗಿ ಸವಿತಾ ಶರ್ಲಿನ್ ಮಹದೇವನಾಯಕ್. ರುದ್ರಪ. ಪ್ರದೀಪ್ ಕುಮಾರ್. ಚಂದಪ . ವೇಣುಗೋಪಾಲ್ .ನಿರ್ಮಲಾ ರಾಣಿ , ರಾಮಣ್ಣ , ಗಾಯತ್ರಿದೇವಿ , ಶಂಕರೇಗೌಡ ವೆಂಕಟರಮಣಪ್ಪ , ಸರೋಜಮ್ಮ , ಸುನಂದಮ್ಮ , ಸುಲೋಚನಾ.ನಾಗರಾಜ್ ಕಾಂರ್ಯ . ನಿರ್ವಹಿಸಿದರು . ಪ್ರಶ್ನೆಪತ್ರಿಕೆ ಸಾಗಿಸುವ ಮಾರ್ಗಾಧಿಕಾರಿಗಳಾಗಿ ಬಿಇಒಗಳಾದ ರಾಮಕೃಷ್ಣಪ್ಪ , ಉಮಾದೇವಿ , ಕೆಂಪಯ್ಯುಚಂದ್ರಶೇಖರ್ , ಡಿವೈಟಿಸಿ ಗಂಗರಾಮಯ್ಯ ಕಾರ್ಯನಿರ್ವಹಿಸಿದ್ದು , ಡಿವೈಪಿಸಿ ಮೋಹನ್ ಬಾಬು , ವಿಷಯ ಪರಿವೀಕ್ಷಕರಾದ ಶಶಿವಧನ , ಗಾಯಿತ್ರಿ.ಕೃಷ್ಣಪ್ಪ , ವೆಂಕಟೇಶಪ್ಪ ಸಿಬ್ಬಂದಿ ಕಾಂರ್ಯ ನಿರ್ವಹಿಸುವರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.