ಕೊಡಿಪ್ಪಾಡಿ (ವಿಶ್ವ ಕನ್ನಡಿಗ ನ್ಯೂಸ್) : ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಕೊಡಿಪ್ಪಾಡಿ ಸಮಿತಿ ಇದರ ವತಿಯಿಂದ ರಕ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ಅಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಹೊಸ ಸಮಿತಿ ಪದಗ್ರಹಣ ಮತ್ತು ನಿವೃತ್ತ ಯೋಧ ಜಯರಾಮ್ ಗೌಡ ಹಾಗೂ ಇತ್ತೀಚೆಗೆ ನಿವೃತ್ತಗೊಂಡ ಅಂಗನವಾಡಿ ಸಹಾಯಕಿ ಕಮಲ ಟೀಚರ್ ಇವರಿಗೂ ಕೋವಿಡ್ 19 ಸಮಯದಲ್ಲಿ ಗ್ರಾಮದಲ್ಲಿ ಉನ್ನತ ಸೇವೆಯನ್ನು ಮಾಡಿದ ಆರೋಗ್ಯ ಸಹಾಯಕಿ ತೇಜಾಕ್ಷಿ ಇವರಿಗೂ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಬ್ಲಡ್ ಡೋನರ್ಸ್ ರಾಜ್ಯ ಸಯೊಂಜಕರು ಅಹ್ರಾಜ್ ಮಂಗಳೂರು ಹಾಗೂ SDPI ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಸಿದ್ದೀಕ್ ಪುತ್ತೂರು ಹಾಗೂ ಬ್ಲಡ್ ಡೋನರ್ಸ್ ಪುತ್ತೂರು ಜಿಲ್ಲಾ ಸಂಯೋಜಕರು ಅಶ್ರಫ್ ಬಾವ, ಹಸೈನಾರ್ ಹಾಜಿ ಕೊಡಿಪ್ಪಾಡಿ, ಅಶ್ರಫ್ ಕಳೆಂಬಿ, ಕೊಡಿಪ್ಪಾಡಿ ಶಾಲೆಯ ಮುಖ್ಯೋಪಾಧ್ಯಯರು ಹಾಗೂ ಇನ್ನಿತರ ಗಣ್ಯ ಅತಿಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅದ್ದು ಕೊಡಿಪ್ಪಾಡಿಯವರು ಸ್ವಾಗತ ಮತ್ತು ಧನ್ಯವಾದವನ್ನು ನಿರವೇರಿಸಿ ಶಿಬಿರದ ಕೊನೆಯಲ್ಲಿ ಬಂದಂತಹ ವೆನ್ಲಾಕ್ ಆಸ್ಪತ್ರೆಯ ಸಿಬಂದ್ದಿ ವರ್ಗಕ್ಕೆ ಸ್ಮರಣಿಕೆ ಮತ್ತು ಹೂವನ್ನು ಕೊಟ್ಟು ಗೌರವಿಸಲಾಯಿತು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.