ಸರಳಿಕಟ್ಟೆ(ವಿಶ್ವಕನ್ನಡಿಗ ನ್ಯೂಸ್): ಎಸ್ಸೆಸ್ಸೆಫ್ ಸರಳಿಕಟ್ಟೆ ಸೆಕ್ಟರ್ ವತಿಯಿಂದ ಉಸ್ಮಾನ್ ಸರಳಿಕಟ್ಟೆ ರವರ ಮೇಲೆ ತಹ್ಲೀಲ್ ಸಮರ್ಪಣೆ ಇಂದು ಅವರ ನಿವಾಸದಲ್ಲಿ ನಡೆಯಿತು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಮುಹಮ್ಮದ್ ಸಕಾಫಿ ಕನ್ಯಾಡಿ ಸುನ್ನೀ ಸಂಘಟನಾ ಬಂದಗಳು ನಮ್ಮ ಇಹಪರ ವಿಜಯಕ್ಕೊಂದು ಹಾದಿಯಾಗಿದೆ. ಉಸ್ಮಾನಕ ತಮ್ಮ ಮಕ್ಕಳನ್ನು ಸುನ್ನೀ ಸಂಘಟನೆಗಳಲ್ಲಿ ಸಕ್ರಿಯರಾಗಿಸುವುದರೊಂದಿಗೆ ಇಹಪರ ವಿಜಯಕ್ಕೊಂದು ಹಾದಿಯನ್ನು ಸುಲಭವಾಗಿಸಿದರು ಎಂದು ದುಆಕ್ಕೆ ನೇತೃತ್ವ ನೀಡಿ ಆಶೀರ್ವಾಚನಗೈದರು.
SSF ಉಪ್ಪಿನಂಗಡಿ ಡಿವಿಷನ್ ಮಾಜಿ ನಾಯಕ ಲತೀಫ್ ಮಾಸ್ಟರ್, SSF ದ.ಕ ಜಿಲ್ಲಾ ಈಸ್ಟ್ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ಸಾಂತ್ವನ ಮಾತುಗಳನ್ನಾಡಿದರು.
SSF ಸರಳಿಕಟ್ಟೆ ಸೆಕ್ಟರ್ ನಾಯಕರಾದ ಅಲ್ತಾಫ್ ಹುಮೈದಿ, ಕೆ.ಪಿ ಬಾತಿಶ್ ತೆಕ್ಕಾರು, ನೌಫಲ್ ಸರಳಿಕಟ್ಟೆ, ಮುಬಸ್ಶಿರ್ ಸರಳಿಕಟ್ಟೆ, ನೌಷಾದ್ ಬೈಲಮೇಲು, ಆಶಿಕ್ ತೆಕ್ಕಾರು, ಶಾಕಿರ್ ಬಾಜಾರ್ , ಮತ್ತು ಸಾಮಾಜಿಕ ಮುಂದಾಳು N.H ಅಬ್ದುಲ್ ರಹ್ಮಾನ್ ಬಾಜಾರು, ದಾವೂದ್ ಉರ್ಲಡ್ಕ ಮತ್ತಿತ್ತರು ಉಪಸ್ಥಿತರಿದ್ದರು. ಸೆಕ್ಟರ್ ಕಾರ್ಯದರ್ಶಿ ಸಫ್ವಾನ್ ಕನರಾಜೆ ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಸರಳಿಕಟ್ಟೆ ಸೆಕ್ಟರ್ ವ್ಯಾಪ್ತಿಯ ನೂರಾರು ಕಾರ್ಯಕರ್ತರು ಬಾಗವಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.