ಹಿರಿಯ ರಾಜಕಾರಣಿ ಮಾಜಿ ಕೇಂದ್ರ ಮಂತ್ರಿಗಳಾಗಿದ್ದ ಶ್ರೀ ಆಸ್ಕರ್ ಫೆರ್ನಾಂಡಿಸ್ ರವರ ಸಾವಿನ ಸುದ್ದಿ ಇಡೀ ರಾಜ್ಯಕ್ಕೆ ಶೋಕದ ವಾತಾವರಣ ತಂದಿದೆ. ನನ್ನಂತಹ ನೂರಾರು ಜನರಿಗೆ ಸ್ಪೂರ್ತಿ ಮತ್ತು ಮಾರ್ಗದರ್ಶಕರೂ ಆಗಿದ್ದ ರಾಜಕೀಯ ಮುತ್ಸದ್ದಿ ಇಂದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ ಇಡೀ ಕರ್ನಾಟಕ ರಾಜಕಾರಣಕ್ಕೆ ತುಂಬಲಾರದ ನಷ್ಟ. ನನ್ನ ತಂದೆಯವರಾದ ಶ್ರೀ ಬೇಗಾನೆ ರಾಮಯ್ಯ ನವರ ಆತ್ಮೀಯರು ಮತ್ತು ನಮ್ಮ ಕುಟುಂಬದೊಂದಿಗೆ ಅವರ ಸಂಬಂಧ ಸ್ನೇಹ ಮತ್ತು ರಾಜಕಾರಣವನ್ನು ಮೀರಿದ್ದು. ಅಸ್ಕರ್ ರವರು ಅನಿವಾಸಿ ಭಾರತೀಯರು/ಕನ್ನಡಿಗರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರು, ಕೆಲ ದಿನಗಳ ಕಾಲ ಭಾರತೀಯ ಸಾಗ್ರೋತ್ತರ ಸಚಿವಾಲಯದ ಉಸ್ತುವಾರಿಯಾಗಿದ್ದಾಗ ಅವರೊಂದಿಗೆ ಕೆಲಸ ಮಾಡಿದ್ದು ನನ್ನ ಪುಣ್ಯವೇ ಸರಿ. ಸಜ್ಜನ ವ್ಯಕ್ತಿತ್ವ, ಗಾಂಧಿವಾದಿ, ಸೃಜನಶೀಲ ರಾಜಕಾರಣಿಯನ್ನು ನಾವಿಂದು ಕಳೆದುಕೊಂಡಿದ್ದೇವೆ. ಸಮಸ್ತ ಅನಿವಾಸಿ ಬಳಗದ ಪರವಾಗಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಆ ಭಗವಂತ ಅವರ ಕುಟುಂಬ ಮತ್ತು ಆಪ್ತ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕೇಳಿಕೊಳ್ಳುತ್ತೇನೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.