ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಅಕ್ಟೋಬರ್ 17 ಆದಿತ್ಯವಾರದಂದು ನಡೆಯಲಿರುವ ಎಸ್. ಎಸ್.ಎಫ್.ಜಾಲ್ಸೂರು ಸೆಕ್ಟರ್ ಪ್ರತಿಭೋತ್ಸವದ ಸ್ವಾಗತ ಸಮಿತಿ ರಚನೆ ಹಾಗೂ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಸುಣ್ಣಮೂಲೆ ಅಹ್ಮದುಲ್ ಬದವೀ ಜುಮಾ ಮಸೀದಿಯಲ್ಲಿ ಸೆಕ್ಟರ್ ಕೋಶಾಧಿಕಾರಿ ಸಫ್ವಾನ್ ಸುಣ್ಣಮೂಲೆರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕೆ.ಸಿ.ಎಫ್ ಸೌದಿ ಅರೇಬಿಯಾ ನಾಯಕರಾದ ರಫೀಕ್ ಮಿಸ್ಬಾಹಿ ದುವಾ ನೆರವೇರಿಸಿದರು.ಜಮಾಅತ್ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ಸಅದಿ ಕಾರ್ಯಕ್ರಮ ಉಧ್ಘಾಟಿಸಿದರು. ಪ್ರೋಗ್ರಾಂ ಕಮಿಟಿ ವೈಸ್ ಚೆಯರ್ಮೇನ್ ಹಾಫಿಳ್ ನೌಷಾದ್ ಅಡ್ಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸ್ವಾಗತ ಸಮಿತಿಯ ನಿರ್ದೇಶಕರಾಗಿ ಅಬ್ದುರ್ರಹ್ಮಾನ್ ಸಅದಿ ಸುಣ್ಣಮೂಲೆ,ಪಿ.ಎ.ಅಬ್ದುಲ್ಲ ಪೆಲ್ತಡ್ಕ ಚೆಯರ್ಮೇನಾಗಿ ಕೆ.ಯಂ.ಅಬ್ದುಲ್ ಹಮೀದ್ ಸುಣ್ಣಮೂಲೆ.ಕನ್ವೀನರಾಗಿ ಎ.ಕೆ.ರಫೀಕ್ ಮಿಸ್ಬಾಹಿ,ಕೋಶಾಧಿಕಾರಿಯಾಗಿ ಅಬ್ದುಲ್ಲ ಕದಿಕಡ್ಕ.,ವೈಸ್ ಚಯರ್ಮೇನ್ ಗಳಾಗಿ ರಝೀನ್ ಅಡ್ಕಾರ್ ಹಾಗೂ ಹಸೈನಾರ್ ಗುತ್ತಿಗಾರು.,ವೈಸ್ ಕನ್ವೀನರ್ ಗಳಾಗಿ ಕೆ.ಯಂ.ಅಬ್ಬಾಸ್ ಗೌಸಿಯಾ ಹಾಗೂ ಮಜೀದ್ ಎ.ಕೆ.,ಸದಸ್ಯರುಗಳಾಗಿ ಬಶೀರ್ ವೈ.ಎ.ಎಲಿಮಲೆ,ಶರೀಫ್ ಎ.ಕೆ.,ಬಾಪು ಪಿ.ಎ.,ಇಲ್ಯಾಸ್ ಸುಣ್ಣಮೂಲೆಯವರನ್ನು ಆಯ್ಕೆ ಮಾಡಲಾಯಿತು.ನಂತರ ಸ್ಥಳೀಯ ಖತೀಬರಾದ ಬಶೀರ್ ಸಅದಿ ಕೆಮ್ಮಾರ ಸೆಕ್ಟರ್ ಪ್ರತಿಭೋತ್ಸವದ ಪೋಸ್ಟರ್ ಬಿಡುಗಡೆ ಮಾಡಿದರು.ಪ್ರೋಗ್ರಾಂ ಕಮಿಟಿ ವೈಸ್ ಕನ್ವೀನರ್ ಸಾಬಿತ್ ಎಲಿಮಲೆ ಸ್ವಾಗತಿಸಿ,ಕನ್ವೀನರ್ ಸಿದ್ದೀಕ್ ಎಲಿಮಲೆ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.