ಕೋಲಾರ (ವಿಶ್ವಕನ್ನಡಿಗ ನ್ಯೂಸ್): ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸುವುದು ಒಂದೇ ಸಂಭ್ರಮವಲ್ಲ ಜೊತೆಗೆ ಗಿಡಗಳನ್ನು ಬೆಳೆಸಿ ಎಂದು ಲೆಕ್ಕಾ ಕಿಶೋರ್ , ಬಾಬು ರವರು ಅಭಿಪ್ರಾಯ ಪಟ್ಟರು.
ನಗರದ ಕಾಲೇಜು ಜೂನಿಯರ್ ಕಾಲೇಜ್ ಆವರಣದಲ್ಲಿ ಪರಿಸರ ಪ್ರೇಮಿಗಳ ಬಳಗ ಹಾಗೂ ಸೌಟ್ಸ್ ಅಂಡ್ ಗೈಡ್ ಮತ್ತು ಸೂರ್ಯ ಪ್ರಿಯ ಕನ್ ಸಕ್ಷನ್ ಪ್ರೈ.ಲಿಮಿಟೆಡ್ ವತಿಯಿಂದ ಹಮ್ಮಿಕೊಂಡಿದ್ದ ಸಸಿಗಳ ವಿತರಣೆ ಸಮಾರಂಭದಲ್ಲಿ ಮಾತಾನಾಡಿದರು . ಮನೆಗೊಂದು ಗಿಡ ನೆಟ್ಟು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ , ಗಾಳಿ , ನೀರು , ಆಹಾರ , ಕಲುಷಿತವಾಗಿದೆ . ಪರಿಸರ ಸಂರಕ್ಷಣೆ ಮಾಡದೆ ಹೋದರೆ ಮುಂದಿನ ಪೀಳಿಗೆಗೆ ಭವಿಷ್ಯವಿಲ್ಲ .
ಬೆಳಕಿನ ಹಬ್ಬ ದೀಪಾವಳಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುವ ಬದಲು ದೀಪ ಬೆಳಕಿ ಶಾಂತಿಯುತವಾಗಿ ಆಚರಿಸಿ ಪರಿಸರ ಮಾಲಿನ್ಯ ತಡೆಯಿರಿ ‘ ಎಂಬ ಘೋಷಣೆಯೊಂದಿಗೆ ನಗರದ ಪರಿಸರ ಪ್ರೇಮಿಗಳು ಇಂದು ಜಾಗೃತಿ ಆರಂಭಿಸಿದ್ದಾರೆ ಎಂದರು .
ಸೈಟ್ಸ್ ಅಂಡ್ ಗೈಡ್ನ ಜಿಲ್ಲಾ ಆಯುಕ್ತರಾದ ಕೆ.ವಿ. ಶಂಕರಪ್ಪ ಮಾತಾನಾಡಿ ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ನೀಡಿದಾದೇಶ ಸೇರಿದಂತೆ ಪಟಾಕಿ ಸಿಡಿಸುವುದರಿಂದ ಆಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುತ್ತಿದೆ . ಮುಖ್ಯವಾಗಿ ಶಾಲಾ ಮಕ್ಕಳೊಂದಿಗೆ ಜನಸಾಮಾನ್ಯರ ಬಳಿ ಹೋಗಿ ಅರಿವು ಮೂಡಿಸಬೇಕು ಎಂದರು .
ಕಾಂಗ್ರೆಸ್ ಮುಖಂಡರಾದ ಜಯದೇವ ಮಾತಾನಾಡಿ ದೀಪಾವಳಿ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಬೇಕು . ದೀಪಾವಳಿ ಹಬ್ಬ ಬರೀ ಹಬ್ಬವಾಗಿ ಮಾರ್ಪಟ್ಟಿದೆ . ಪ್ರಸ್ತುತ ಸನ್ನಿವೇಶದಲ್ಲಿ ನಾವಿಂದು ಹೇಗೆ ಹಬ್ಬ ಆಚರಿಸಬೇಕಾಗಿದೆ ಮತ್ತಿತರ ವಿಷಯ ಕುರಿತು ನಗರದ್ಯಾಂತ ಧ್ವನಿವರ್ಧಕದ ಮೂಲಕ ಮುದ್ರಸಿದ ಧ್ವನಿಯ ಮೂಲಕ ಪರಿಸರದ ಗೀತೆಗಳು ಹಾಗೂ ಶ್ಲೋಕಗಳನ್ನು ಜನರಿಗೆ ತಿಳಿಯಪಡಿಸುತ್ತದೆ ಎಂದರು .
ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್ .ಗಣೇಶ್ ಮಾತಾನಾಡಿ ದೀಪಾವಳಿಯನ್ನು ಬೆಳಕು ಹೊಳಪಿನ ಹಬ್ಬವಾಗಿ ಆಚರಿಸುವುದರೊಂದಿಗೆ ಯಾವುದೇ ಕಾರಣಕ್ಕೂ ಜೀವನ ಪರ್ಯಂತ ನರಳುವಂಥ ಶಾಪ ನೀಡುವ ಹಬ್ಬವಾಗಲು ಬಿಡಬಾರದು ಎಂದರು .
ಕಾರ್ಯಕ್ರಮದ ಆಯೋಜಕರಾದ ಪರಿಸರ ಪ್ರೇಮಿ ರಾಜೇಶ್ ಮಾತಾನಾಡಿ ನವರಾತ್ರಿ , ದೀಪಾವಳಿ ಸಂಭ್ರಮದಲ್ಲಿ ಸಿಡಿಸುವ ಪಟಾಕಿಗಳ ಅತೀವ ಶಬ್ಬವಷ್ಟೇ ಅಲ್ಲ . ಇವತ್ತು ನಮ್ಮ ಪಟ್ಟಣದಲ್ಲಿ ದಿನನಿತ್ಯದ ಸದ್ದುಗದ್ದಲದ ಮಟ್ಟ ಕೂಡ ಬಹಳ ಹೆಚ್ಚಾಗಿದೆ . ಇಡೀ ವಾತಾವರಣದಲ್ಲಿ ಹಿಂದೆಗಿಂತ ಇಂದು ಈ ಪ್ರಮಾಣ ಗಾಬರಿ ಹುಟ್ಟಿಸುವಷ್ಟು ಅತಿಯಾಗಿದೆ . ಇದು ಹೆಚ್ಚುತ್ತಲೇ ಸಾಗುತ್ತಿದೆ . ಆದ್ದರಿಂದ ಶಾಂತಿಯುತವಾಗಿ ಗಿಡಮರಗಳನ್ನು ನೆಡುವುದರೊಂದಿಗೆ ಪರಿಸರವನ್ನು ಉಳಿಸೋಣ ಎಂದರು.
ಈ ಸಂದರ್ಭದಲ್ಲಿ ಗಲ್ಪೇಟೆ ಕೆ.ಸಿ.ಸಂತೋಷ್ , ಕನ್ನಡಮಿತ್ರ ವೆಂಕಟಪ್ಪ ಕವಿ ಡಾ.ಶರಣಪ್ಪ ಗಟ್ಟೂರು , ಸೌಟ್ ಬಾಬು , ಟೈಗರ್ ವೆಂಕಟೇಶ್ , ಸೌಟ್ಸ್ ಸುರೇಶ್ , ಡಿ.ಟಿ.ಪಿ. ನಾರಾಯಣ್ , ವಿಶ್ವನಾಥ , ಉಮಾದೇವಿ , ಶ್ರೀನಾಥ್ , ಮಧು , ಜಾನಪದ ಗಾಯಕ ಜನ್ಮಘಟ್ಟ ಕೃಷ್ಣಮೂರ್ತಿ , ಮಂಜುನಾಥ್ , ಸೈಟ್ಸ್ ಗೈಡ್ಸ್ನ ಸ್ವಯಂ ಸೇವಕರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.