ಕೋಲಾರ (ವಿಶ್ವಕನ್ನಡಿಗ ನ್ಯೂಸ್): ಕೋಲಾರದ ಸಾರಿಗೆ ನಗರದ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿ ಬಾರಿ ಪಮಾಣದ ಹಾನಿಯುಂಟಾಗಿದೆ .
ಶಾಸಕರಾದ ಕೆ . ಶ್ರೀನಿವಾಸಗೌಡ ರವರು ಸಾರಿಗೆ ನಗರಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ವೀಕಿಸಿದ ಅವರು , ಹಾನಿಗೊಳಗಾದವರಿಗೆ ಪರಿಹಾರ ಕೊಡಿಸುವುದರ ಜೊತೆಗೆ ಮುಂದಿನ ಈ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ವಹಿಸುವುದಾಗಿ ಹೇಳಿದರು . ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಜಿಲ್ಲಾದ್ಯಂತ ಕೆರೆಗಳು ಕೋಡಿ ಹರಿದವು .
ನಗರದ ಕೋಡಿಕಣ್ಣೂರು ಹಾಗೂ ದೊಡ್ಡ ಕೆರೆ ಕೋಲಾರಮ್ಮ ಕೆರೆಗಳು ಕೋಡಿ ಹರಿದ ನೀರು ಹೊರ ವಲಯದ ಸಾರಿಗೆ ನಗರ ಸೇರಿದಂತೆ ನಗರದ ವಿವಿಧ ಬಡಾವಣೆಗಳಿಗೆ ನೀರು ನುಗ್ಗಿದ ಪರಿಣಾಮ ಜನರ ಜೀವನ ಅಸವ್ಯಸ್ತವಾಗಿರುವುದು ತಿಳಿದು ಬಂದಿದೆ . ಈ ಸ೦ದರ್ಭದಲ್ಲಿ ಸಮಾಜ ಸೇವಕ ಡಾ ಸೈಯದ್ ಅಶಂ ಆಶಪ್ ಉಪಸ್ಥಿತರಿದ್ದರು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.