ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ) : ಕಾನೂನು ಸಚಿವ ಮಾಧುಸ್ವಾಮಿ ಇಂದು ವಿಧಾನಸಭೆಯಲ್ಲಿ ಶಾಸಕರ ವೇತನ,ಭತ್ಯೆ ಮಸೂದೆಗೆ ಅನುಮೋದನೆ ದೊರೆತಿದ್ದು, ಜನಪ್ರತಿನಿಧಿಗಳ ವೇತನ ಮತ್ತು ಭತ್ಯೆಯಲ್ಲಿ ಭಾರೀ ಏರಿಕೆಯಾಗಿದೆ.
ಕಾನೂನು ಸಚಿವ ಮಾಧುಸ್ವಾಮಿ ಶಾಸಕರ ವೇತನ, ಭತ್ಯೆ ಎರಡನೇ ತಿದ್ದುಪಡಿ ಮಸೂದೆ ಮಂಡಿಸಿದರು. ಮಸೂದೆಗೆ ಅಂಗೀಕಾರ ದೊರೆತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮತ್ತು ಸಚಿವರ ವೇತನ 50% ಹೆಚ್ಚಳವಾಗಿದೆ. ಇದೇ ವೇಳೆ ಶಾಸಕರು, ಸಭಾಧ್ಯಕ್ಷರು, ಸಭಾಪತಿಗಳು, ವಿಪಕ್ಷ ನಾಯಕರು, ಸಚೇತಕರ ವೇತನವೂ ಹೆಚ್ಚಳವಾಗಿದೆ.
ವೇತನ ಪರಿಷ್ಕರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ವೇತನ 50,000 ರೂ. ನಿಂದ 75,000 ರೂ.ಗೆ ಏರಿಕೆಯಾಗಿದೆ ಹಾಗೂ ಆತಿಥ್ಯ ಭತ್ಯೆ 3 ಲಕ್ಷದಿಂದ 4.5 ಲಕ್ಷಕ್ಕೆ ಏರಿಕೆಯಾಗಿದೆ.
ಕ್ಯಾಬಿನೆಟ್ ದರ್ಜೆ ಸಚಿವರ ಸಂಬಳವೂ 50% ಏರಿಕೆ- ಮಂತ್ರಿಗಳ ಸಂಬಳ 40,000 ದಿಂದ 60,000ಕ್ಕೆ ಏರಿಕೆ- ಆತಿಥ್ಯ ಭತ್ಯೆ ವಾರ್ಷಿಕ 3 ಲಕ್ಷದಿಂದ 4.5 ಲಕ್ಷಕ್ಕೆ ಏರಿಕೆ – ಮನೆ ಬಾಡಿಗೆ -80,000 ದಿಂದ 1,20,000ಕ್ಕೆ ಏರಿಕೆ – ಮನೆ ನಿರ್ವಹಣಾ ವೆಚ್ಚ – 20,000ದಿಂದ 30,000ಕ್ಕೆ ಏರಿಕೆ- ವಾಹನಕ್ಕೆ ಪೆಟ್ರೋಲ್ -ಮಾಸಿಕ 1,000 ಲೀ.ನಿಂದ 2,000 ಲೀ-
ಪ್ರತಿಪಕ್ಷ ನಾಯಕ ಮಾಸಿಕ ವೇತನ 40,000ದಿಂದ 60,000ಕ್ಕೆ ಏರಿಕೆ- ವಾರ್ಷಿಕ ಆತಿಥ್ಯ ಭತ್ಯೆ 2 ಲಕ್ಷದಿಂದ 2.50 ಲಕ್ಷಕ್ಕೆ ಏರಿಕೆ ಇಂಧನ: ಮಾಸಿಕ 1000 ಲೀಟರ್ನಿಂದ 2000 ಲೀಟರ್ ಪ್ರಯಾಣ ಭತ್ಯೆ: ಪ್ರತಿ ಕಿಲೋಮೀಟರ್ 30 ರೂಪಾಯಿ ದಿನ ಭತ್ಯೆ(ಪ್ರಯಾಣ): ದಿನಕ್ಕೆ 2000 ರೂ.ನಿಂದ 3000 ರೂ. ಹೊರ ರಾಜ್ಯ ಪ್ರವಾಸ: 5000 ರೂ.ನಿಂದ 7000 ರೂ.
ಸಭಾಧ್ಯಕ್ಷ-ಉಪಸಭಾಧ್ಯಕ್ಷ ಮಾಸಿಕ ಸಂಬಳ: 50,000 ರೂ.ನಿಂದ 75,000 ರೂ. ವಾರ್ಷಿಕ ಆತಿಥ್ಯ ಭತ್ಯೆ : 3 ಲಕ್ಷದಿಂದ 4 ಲಕ್ಷಕ್ಕೆ ಏರಿಕೆ ಮನೆ ಬಾಡಿಗೆ: 80,000 ರೂ.ನಿಂದ 1 ಲಕ್ಷ 60 ಸಾವಿರ ಇಂಧನ: ಮಾಸಿಕ 1000 ಲೀಟರ್ನಿಂದ 2000 ಲೀಟರ್ ಪ್ರಯಾಣ ಭತ್ಯೆ: ಪ್ರತಿ ಕಿ.ಮೀ. 30 ರಿಂದ 40ರೂ.ಗೆ ಏರಿಕೆ ದಿನದ ಭತ್ಯೆ(ಪ್ರಯಾಣ): ದಿನಕ್ಕೆ 2000 ದಿಂದ 3000 ರೂ. ಹೊರ ರಾಜ್ಯ ಪ್ರವಾಸ: ದಿನಕ್ಕೆ 5000 ದಿಂದ 7000ಕ್ಕೆ ಏರಿಕೆ
ಶಾಸಕರು (MLA & MLC) ಶಾಸಕರ ಮಾಸಿಕ ವೇತನ 20 ಸಾವಿರದಷ್ಟು ಹೆಚ್ಚಳ- ಮಾಸಿಕ ವೇತನ 20 ಸಾವಿರದಿಂದ 40 ಸಾವಿರಕ್ಕೆ ಏರಿಕೆ- ಕ್ಷೇತ್ರದ ಭತ್ಯೆ: 40 ಸಾವಿರದಿಂದ 60 ಸಾವಿರಕ್ಕೆ ಏರಿಕೆ- ವಾರ್ಷಿಕ ಆತಿಥ್ಯ ಭತ್ಯೆ : 2 ಲಕ್ಷದಿಂದ 2.50 ಲಕ್ಷಕ್ಕೆ ಏರಿಕೆ- ಇಂಧನ: 1000 ಲೀಟರ್ನಿಂದ 2000 ಲೀಟರ್ಗೆ ಹೆಚ್ಚಳ ಪ್ರಯಾಣ ಭತ್ಯೆ: ಪ್ರತಿ ಕಿ.ಮೀ.ಗೆ 25ರೂ.ನಿಂದ 30ರೂ.ಗೆ ಏರಿಕೆ ದಿನ ಭತ್ಯೆ(ಪ್ರಯಾಣ): ದಿನಕ್ಕೆ 2000ದಿಂದ 2500 ಸಾವಿರಕ್ಕೆ ಏರಿಕೆ ಹೊರ ರಾಜ್ಯ ಪ್ರವಾಸ: 5000 ರೂಪಾಯಿಂದ 7000ಕ್ಕೆ ಏರಿಕೆ ದೂರವಾಣಿ ವೆಚ್ಚ: ತಿಂಗಳಿಗೆ 20,000( ಯಥಾಸ್ಥಿತಿ) ಆಪ್ತಸಹಾಯಕ, ರೂಂಬಾಯ್ ಗೌರವಧನ ತಿಂಗಳಿಗೆ 10 ಸಾವಿರದಿಂದ 20 ಸಾವಿರಕ್ಕೆ ಏರಿಕೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.