ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ದಕ್ಷಿಣ ಕನ್ನಡ ಜಿಲ್ಲೆಯ ಹೃದಯ ಭಾಗದಲ್ಲಿರುವ ಬ್ರೈಟ್ ಕಾಲೇಜ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಇಲ್ಲಿ ಹಲವಾರು ವಿದ್ಯಾರ್ಥಿಗಳು ಡಿಪ್ಲೊಮಾ ಇನ್ ಲ್ಯಾಬೊರೆಟಾ ಟೆಕ್ನಾಲಜಿ, ಡಿಪ್ಲೊಮಾ ಇನ್ ಆಪರೇಷನ್ ಥಿಯೇಟರಿ ಟೆಕ್ನಾಲಜಿ ಕಲಿತು ಇಂದು ದೇಶ-ವಿದೇಶದಲ್ಲಿ ಉದ್ಯೋಗಗಿಟ್ಟಿಸಿಕೊಂಡು,ಹಲವಾರು ಸಂಸ್ಥೆಗಳಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದು “ಎಲ್ಲಿಂದಲೋ ಬಂದು ಇಲ್ಲಿ ಅಂಗಳದಲ್ಲಿ ತಾವರೆ ಹೂವೊಂದು ಅರಳಿತಲ್ಲ” ಎಂಬ ಅರ್ಥಗರ್ಭಿತ ಬೀಳ್ಕೊಡುಗೆ ಸಮಾರಂಭ ಈ ವಿದ್ಯಾರ್ಥಿಗಳಿಗಾಗಿ ನೇರವೇರಿತು.
ಬ್ರೈಟ್ ಕಾಲೇಜು ಸಂಸ್ಥೆಯ ನಿರ್ದೇಶಕರಾಗಿರುವಂತಹ ಮಹಮ್ಮದ್ ಸಲೀಂ ಅವರು ಮಾತನಾಡಿ,ವಿದಾಯವೆಂದರೆ ನೆನಪುಗಳ ಮೆರವಣಿಗೆ. ವಿದ್ಯಾರ್ಥಿ ಜೀವನದಲ್ಲಿ ಸ್ಪಷ್ಟ ಗುರಿಯೆಡೆಗೆ ಶಿಸ್ತಿನಿಂದ ಸಾಗಿದರೆ ಉತ್ತುಂಗಸ್ಥಾನಕ್ಕೆ ಏರಬಹುದು,ಜೊತೆಗೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಬಹುದು ಎಂದರು. ಹಾಗೂ ಮುಖ್ಯ ಉಪಸ್ಥಿತಿಯಾಗಿ ಕಾಲೇಜಿನ ಪ್ರಾಂಶುಪಾಲೆ, ಡಾ.ಜೆ.ಸಿ ಅಡಿಗ ಹೃದಯ ರೋಗ ತಜ್ಞರು,ಡಾ.ಶ್ರೀಕಾಂತರಾವ್ ಮಕ್ಕಳ ತಜ್ಞರು,ಶ್ರೀರಾಮ P.H.D ಫಾರ್ಮಾಸಿ,ಡಾ.ಅನೀಶ್ ಅರಿವಳಿಕೆ ತಜ್ಞರು ,ಡಾ.ಶ್ರಿಲತಾ ಭಟ್ ಸ್ತ್ರೀ ರೋಗ ತಜ್ಞರು, ಹಾಗೂ ಬ್ರೈಟ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ಇದರ ಪ್ರಧಾನ ಅಧ್ಯಕ್ಷರಾದ ಅಬೂಬಕ್ಕರ್ ಬಿ.ಅವರೂ ಉಪಸ್ಥಿತಿಯಲ್ಲಿದ್ದರು.
ಹಾಗೂ ಸಂಸ್ಥೆಯ ವತಿಯಿಂದ ಮನರಂಜನೆಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೆರೆವೇರಿತು. ಕಾಲೇಜಿನ ಆಡಳಿತ ಸಿಬ್ಬಂದಿ ವರ್ಗ ಹಾಗೂ ಬ್ರೈಟ್ ವಿಧ್ಯಾರ್ಥಿ ಒಕ್ಕೂಟ ಇವರ ಸಂಪೂರ್ಣ ಸಹಕಾರದೊಂದಿಗೆ ಬೀಳ್ಕೊಡುಗೆ ಸಮಾರಂಭ ಕೊನೆಗೊಂಡಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.