ದೇಶದ ಪ್ರಸಕ್ತ ಪರಿಸ್ಥಿಯನ್ನು ಆಧರಿಸಿ ಪವಿತ್ರ ಹಬ್ಬದ ದಿನಗಳಲ್ಲಿ ವ್ಯತ್ಯಸ್ತ ಕಾನೂನಾತ್ಮಕ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಅತ್ಯಂತ ಎಚ್ಚರಿಕೆ ನಡೆ ಹೊಂದಬೇಕಾಗಿದೆ.
(www.vknews.in) : ಈದ್ ಉಲ್ ಅಝ್ಹಹಾ ಸಂದರ್ಭದ ಖಡ್ಡಾಯ ಪ್ರಾಣಿಬಲಿ ಪದ್ಧತಿಯನ್ನು, ಪ್ರಸಕ್ತ ಸರಕಾರ ಪ್ರಾಣಿ ಹಿಂಸಾ ನಿಷೇಧ ಕಾಯ್ದೆ ಮುಂದಿಟ್ಟು, ವಿವಿಧ ಇಲಾಖೆಗಳ ಸಹಕಾರದೊಂದಿಗೆ ತಡೆಯುವ ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ. ಸರಕಾರದ ಈ ಕ್ರಮ ಒಂದು ನಿರ್ಧಿಷ್ಟ ಸಮುದಾಯದ ಜನರನ್ನು ತಾತ್ಕಾಲಿಕವಾಗಿ ಸಂತುಷ್ಟ ಪಡಿಸುವ ಉದ್ದೇಶದಿಂದ ಮಾಡಿದ್ದು, ದೇಶದ ಒಂದು ನಿರ್ಧಿಷ್ಟ ಸಮುದಾಯದ ಜನರ ಧಾರ್ಮಿಕ ನಂಬಿಕೆಗೆ ವಿರುದ್ದವಾದ ನಡೆಯಾಗಿದೆ.
ಅನಾದಿ ಕಾಲದಿಂದ ದಾರ್ಮಿಕ ಅನುಮೋದನೆಗೊಂಡ ಈ ಬಲಿ ಕರ್ಮವನ್ನು ಸಾಂದರ್ಭಿಕ ಈ ಕಾಲಕ್ಕೆ ಮಾತ್ರ ತಡೆ ಹಿಡಿಯುವಂತಹ ಈ ಪ್ರಯತ್ನ ಅಧಿಕ ಅವಧಿಗೆ ಬಾಳಿಕೆ ಬರುವಂತದ್ದಲ್ಲ. ನಿಸರ್ಗ ನಿಯಮದ ವಿರುದ್ಧದ ಯಾವುದೇ ಕಾನೂನು ಅಧಿಕ ಕಾಲ ಬಾಳಿಕೆ ಬರುವಂತಹದ್ದಲ್ಲ. ಈ ಪರಿಸ್ಥಿತಿಯನ್ನು ಬಹುಸಂಖ್ಯಾತ ಜನತೆ ಮುಂದೊಂದು ದಿನ ತಿದ್ದುಪಡಿ ಗೊಳಿಸುವ ಆಂದೋಲನ ಬರಲಿದೆ. ಪ್ರಸಕ್ತ ಪರಿಸ್ಥಿತಿಯನ್ನು ತಾತ್ಕಾಲಿಕ ಎಂದು ಕೊಂಡು ಮುಸ್ಲಿಮರು ಪ್ರಸಕ್ತ ಸನ್ನಿವೇಶಕ್ಕೆ ಅನುಗುಣವಾಗಿ ತಮ್ಮನ್ನು ತಾವು ಹೊಂದಿಸಿಕೊಂಡು ಮುನ್ನಡೆಯುವುದು ಬುದ್ದಿವಂತಿಕೆ ಆಗಿದೆ.
ಆದುದರಿಂದ ಮುಸ್ಲಿಮರು ಪ್ರಸಕ್ತ ಸಾಲಿನ ಪಶು ಬಲಿ ಕರ್ಮದಿಂದ ತಾತ್ಕಾಲಿಕ ಮಟ್ಟದಲ್ಲಿ ವಿರಹಿತ ಹೊಂದಿ, ಪ್ರಸಕ್ತ ಪರಿಸ್ಥಿಯ ಕಾನೂನಾತ್ಮಕ ನಡೆಯೊಂದಿಗೆ ಸಹಕರಿಸಬೇಕಾಗಿ ಕೋರಿಕೆ. ಜಿಲ್ಲೆಯ ಪ್ರಮುಖ ಸಂಘಟನೆಗಳ ಮುಖ್ಯಸ್ಥರು, ಜನಪ್ರತಿನಿಧಿಗಳು ಈಗಾಗಲೇ ಉನ್ನತ ಮಟ್ಟದ ಅಧಿಕಾರಿಗಳಲ್ಲಿ ಹಲವು ಹಂತದ ಮಾತುಕತೆ ನಡೆಸಿದರೊ ಕೂಡಾ ವಿಶೇಷ ಸಂಧರ್ಭದಲ್ಲಿ ಕೂಡಾ ಬಕ್ರೀದ್ ಪಶುಬಲಿ ಬಗ್ಗೆ ಒಂದು ನಿರ್ಣಾಯಕ ನಿರ್ಧಾರಕ್ಕೆ ತಲುಪಲು ಜಿಲ್ಲಾಡಾಳಿತ ವಿಫಲವಾದ ಕಾರಣದಿಂದ ವ್ಯತ್ಯಸ್ತ ಸಂಧರ್ಬದಲ್ಲಿ ಅನಿವಾರ್ಯವಾಗಿ ಸೃಷ್ಟಿಯಾಗುವ ಕ್ರಿಮಿನಲ್ ಹೊಣೆಗಾರಿಕೆ ಗಳಿಂದ ಮುಕ್ತ ಹೊಂದುವ ನಿಟ್ಟಿನಲ್ಲಿ ಈದ್ ಪಶು ಬಲಿ ಕರ್ಮದಿಂದ ಮುಕ್ತ ಹೊಂದುವ ವಿವೇಚನಾ ನಡೆ ಹೊಂದುವುದು ಒಳಿತು ಎಂದು ಜಿಲ್ಲೆಯ ಸರ್ವಮುಸ್ಲಿಮರು ತೀರ್ಮಾನಿಸ ಬೇಕಾಗಿ ವಿನಂತಿ.
ಕೆ.ಅಶ್ರಫ್. ಅಧ್ಯಕ್ಷ ರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.