ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ): ದೇಶದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವುದು ಕಾಂಗ್ರೇಸ್ ಜೋಡೊ ಕಾರ್ಯಕ್ರಮ ಅಲ್ಲ ಅದು ಕಾಂಗ್ರೆಸ್ ತೋಡೊ ಕಾರ್ಯಕ್ರಮ ಆಗಿದೆ ದೇಶದ ವಿಭಜನೆಗೆ ಯಾರು ಕಾರಣ ಎಂಬುದರ ಕುರಿತು ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕು , ಮಾಡಿದ ತಪ್ಪನ್ನು ಜೋಡೋ ಯಾತ್ರೆಯಿಂದ ಮರೆಮಾಚಲು ಸಾಧ್ಯವಿಲ್ಲ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಡಾ.ವೈ.ಎನ್ . ನಾರಾಯಣಸ್ವಾಮಿ ಸಲಹೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ರಾಹುಲ್ ಗಾಂಧಿ ಅವರ ಕಾಂಗ್ರೇಸ್ ಜೋಡೊ ಕಾರ್ಯಕ್ರಮಕ್ಕಿಂತ ಅವರಪ್ಪ , ಅಮ್ಮ , ತಾತ , ಮುತ್ತಾತರು ದೇಶದಲ್ಲಿ ದೇಶ ವಿಭಜಿಸಿ ಮಾಡಿರುವ ಕೆಲಸ ಇನ್ನು ರಿಪೇರಿ ಮಾಡಲು ಆಗುತ್ತಿಲ್ಲ ಎಂದರು.
ದೇಶ ವಿಭಜನೆಗೆ ಯಾರು ಕಾರಣ ಎಂಬುದರ ಕುರಿತು ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ ವೈಎಎನ್ , ಅವರ ತಾತ ಮುತ್ತಾತ ಗಟ್ಟಿಯಾಗಿದ್ದಿದ್ರೆ ಪಾಕಿಸ್ತಾನ , ಬಾಂಗ್ಲಾದೇಶ ವಿಭಜನೆಯಾಗುತ್ತಿರಲಿಲ್ಲ , ಪಿಒಕೆ ಕಾಶ್ಮೀರ ಆಗುತ್ತಿರಲಿಲ್ಲ , ಇವತ್ತು ಕಾಶ್ಮೀರದಲ್ಲಿ ಅಲ್ಪಸಂಖ್ಯಾತರ ದಬ್ಬಾಳಿಕೆಯೆ ಇರುತ್ತಿರಲಿಲ್ಲ. ಈ ಎಲ್ಲಾ ಘಟನೆಗಳಿಗೆ ಕಾಂಗ್ರೇಸ್ಸೇ ಮೂಲ ಕಾರಣ ಎಂಬ ಸತ್ಯ ಇವರ ಜೋಡೋ ಯಾತ್ರೆಯಿಂದ ಮರೆಮಾಚಲು ಸಾಧ್ಯವೂ ಇಲ್ಲ ಎಂದರು.
ದೇಶದಲ್ಲಿ ೫೭ ವರ್ಷ ಆಡಳಿತ ನಡೆಸಿದ ಕಾಂಗ್ರೇಸ್ ಸರ್ಕಾರ ದೇಶದ ಅಭಿವೃದ್ಧಿಗೆ ಏನು ಮಾಡಿದೆ . ದೇಶವನ್ನು ಕಾಪಾಡೋಕೆ ಕಾಂಗ್ರೇಸ್ ಇರಲಿಲ್ಲ . ದೇಶವನ್ನ ತುಕಡೆ ತುಕಡೆ ಅನ್ನೋರಿಗೆ ಸಪೋರ್ಟ್ ಮಾಡುತ್ತಿತ್ತು . ಪಾಕಿಸ್ತಾನಕ್ಕೆ ಜೈ ಅನ್ನೋರಿಗೆ ಉಗ್ರಗಾಮಿಗಳಿಗೆ ಸಪೋರ್ಟ್ ಮಾಡುತ್ತಾ ಬಂದಿದೆ , ಇದೆಲ್ಲ ನೋಡಿದರೆ ರಾಹುಲ್ ಗಾಂಧಿ , ಕಾಂಗ್ರೇಸ್ ಕಡೆಯಿಂದ ಕಾಂಗ್ರೇಸ್ ಜೋಡೊ ಕಾರ್ಯಕ್ರಮ ನಡೆಯುತ್ತಿಲ್ಲ . ಕಾಂಗ್ರೇಸ್ನ ತೋಡೊ ಕಾರ್ಯಕ್ರಮ ನಡೆಯುತ್ತಿದೆ ಎಂದು ಲೇವಡಿ ಮಾಡಿದರು .
ಡಿಕೆಶಿ ಡಾಮಾಕಿಂಗ್ ಕಣ್ಣೀರಿನ ನಾಟಕ
ಇತ್ತೀಚಿಗೆ ನಡೆದ ಸಭೆಯೊಂದರಲ್ಲಿ ರಾಹುಲ್ ಗಾಂಧಿ ಮಾತಿಗೆ ಡಿ.ಕೆ.ಶಿವಕುಮಾರ್ ಕಣ್ಣೀರು ಹಾಕಿದ್ದರ ಕುರಿತು ಟೀಕಿಸಿದ ಅವರು , ಇದೊಂದು ಬರಿ ನಾಟಕ ಡಿಕೆಶಿ ಡ್ರಾಮಾ ಕಿಂಗ್ ಆಗಲು ಹೊರಟಿದ್ದಾರೆ , ರಾಹುಲ್ ಗಾಂಧಿ ಮೆಚ್ಚಿಸೋಕೆ ಮಾಡಿದ ಪ್ಲಾನ್ ಎಂದು ಬಣ್ಣಿಸಿದರು.
ವೇದಿಕೆಯಲ್ಲಿ ಕಣ್ಣೀರು ಹಾಕಲು ಮೊದಲೇ ಟ್ರೈನಿಂಗ್ ಪಡೆದಂತಿತ್ತು ಆದರೆ ನಿಜವಾದ ಕಣ್ಣೀರು ಬರಲೇ ಇಲ್ಲ . ಟ್ರೈನಿಂಗ್ ಸಾಲದು , ನಿಜವಾದ ನೀರು ಹರಿಯಲು ಎಮೋಷನ್ ಅಗತ್ಯ ನಾನು ಕನಕಪುರದ ಬಂಡೆ ಎಲ್ಲಿ ಬೇಕಾದೂ ಡಿಜ್ಜಿ ಹೊಡೀತಿನಿ ಅನ್ನೋರು ರಾಹುಲ್ ಗಾಂಧಿ ಮೆಚ್ಚಿಸಲು ಆಡಿದ ನಾಟಕ ನೋಡಿದಾಗ ಒಳ್ಳೇ ಆಕ್ಟರ್ ಆಗಲು ಈ ಮನುಷ್ಯ ಲಾಯಕ್ಕು ಎನಿಸಿತು ಎಂದು ಟೀಕಿಸಿ ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಕೊನೆಗೆ ಕಣ್ಣೀರೊಂದೆ ಉಳಿಯೋದು ಎಂದು ಭವಿಷ್ಯ ನುಡಿದರು .
ಕಾಂಗ್ರೆಸ್ ಪಕ್ಷದ ಹಿರಿಯ ಮತ್ಸದಿ ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾಗಲು ಹೊರಟಿದ್ದಾರೆ . ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಎರಡು ಬಣಗಳಿದ್ದು , ಮೂರನೇ ಬಣ ಸಿದ್ದವಾಗುವ ಸಾಧ್ಯತೆ ಇದೆ ಎಂದು ಟಾಂಗ್ ನೀಡಿದರು .
ಪಿ.ಎಫ್.ಐ ಸಂಘಟನೆಯನ್ನು ನಿಷೇದ ಮಾಡಿದ ಕೂಡಲೇ ಕಾಂಗ್ರೇಸ್ ಪಕ್ಷದವರು ಆರ್ಎಸ್ಎಸ್ಅನ್ನು ನಿಷೇದ ಮಾಡಲು ಹೇಳುತ್ತಾರೆ . ಇವರಿಗೆ ಆರ್ಎಸ್ಎಸ್ ಬಗ್ಗೆ ಏನು ಗೊತ್ತು. ಸಿದ್ದರಾಮಯ್ಯ ನವರು ಸಂಘದ ಕಾರ್ಯಕ್ರಮಗಳು , ಕಾರ್ಯ ವೈಖರಿಗಳು ಎಲ್ಲವನ್ನು ಗಮನಿಸಿಲಿ.ರಾಷ್ಟ್ರ ದ್ರೋಹ ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿಸಿ ನಂತರ ಸಂಘ ಪರಿವಾರದ ಬಗ್ಗೆ ಮಾತನಾಡಿಲಿ ಎಂದು ಛೇಡಿಸಿದರು .
ಈ ಸಂದರ್ಭದಲ್ಲಿ ಕೂಡ ಅಧ್ಯಕ್ಷ ವಿಜಯಕುಮಾರ್ , ನಗರಸಭಾ ಸದಸ್ಯ ಎಸ್.ಆರ್.ಮುರಳಿಗೌಡ , ಬಿಜೆಪಿ ಮುಖಂಡರಾದ ತಿಮ್ಮರಾಯಪ್ಪ , ರಾಜೇಶ್ ಸಿಂಗ್ , ಕೆಂಬೋಡಿ ನಾರಾಯಣ ಸ್ವಾಮಿ , ಸೇರಿದಂತೆ ಅನೇಕ ಬಿ.ಜೆ.ಪಿ ಮುಖಂಡರು ಉಪಸ್ಥಿತರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.