ಪುತ್ತೂರು (www.vknews.com) : AICC ಯಿಂದ ನೇಮಿಸಲ್ಪಟ್ಟ KPCC ಅಲ್ಪಸಂಖ್ಯಾತ ವಿಭಾಗದ ಕರಾವಳಿ ಝೋನ್ ನ ಕೋವಿಡ್ 19 ಮೇಲ್ವಿಚಾರಣಾ ಸಮಿತಿಯು ವೀಡಿಯೋ ಕಾನ್ಪರೆನ್ಸ್ ಮೂಲಕ ಇತ್ತೀಚೆಗೆ ಮೀಟಿಂಗ್ ನಡೆಸಿ ಕರಾವಳಿ ಜಿಲ್ಲೆಗಳ ಸಮಸ್ಯೆಗಳನ್ನು ತಿಳಿದುಕೊಂಡು AICC ಗೆ ವರದಿ ಒಪ್ಪಿಸಿದೆ.
KPCC ಕೋವಿಡ್ 19 ಮೇಲ್ವಿಚಾರಣ ಸಮಿತಿ ಕರಾವಳಿ ವಿಭಾಗದ ಅಧ್ಯಕ್ಷರಾದ ನ್ಯಾಯವಾದಿ ನೂರುದ್ದೀನ್ ಸಾಲ್ಮರ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಮೀಟಿಂಗ್ ನಲ್ಲಿ ದ.ಕ, ಉ.ಕ, ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಗಳ DCC ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರುಗಳು KPCC ರಾಜ್ಯ ಸಂಯೋಜಕರು, ಸದಸ್ಯರು ಮತ್ತು KPCC ಅಲ್ಪಸಂಖ್ಯಾತ ವಿಭಾಗದ ರಾಜ್ಯಾಧ್ಯಕ್ಷರಾದ ವೈ. ಸಯೀದ್ ಅಹ್ಮದ್ ಭಾಗವಹಿಸಿ ಮಾಹಿತಿಯನ್ನು ಪಡೆದುಕೊಂಡರು.
DCC ಅಲ್ಪಸಂಖ್ಯಾತ ವಿಭಾಗದ ಬೆಂಗಳೂರು ದಕ್ಷಿಣ ವಿಭಾಗದ ಅಧ್ಯಕ್ಷರಾದ ಇರ್ಷಾದ್ ಅಹ್ಮದ್ ಶೇಕ್ ಈ ಮೀಟಿಂಗ್ ಆಯೋಜಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.