(www.vknews.com) : ಈ ಬಾರಿ ಕೊರೋನಾ ವೈರಸ್ ಭೀತಿಯಿಂದಾಗಿ ಈದ್ ಹಬ್ಬದ ವೇಳೆ ಹೊಸ ಬಟ್ಟೆಗಳನ್ನು ಕೊಂಡುಕೊಳ್ಳಬಾರದೆಂದು ಮುಸ್ಲಿಂ ಧಾರ್ಮಿಕ ಮುಖಂಡರು ಹಾಗೂ ಸಮುದಾಯದ ನಾಯಕರು ಕರೆಯನ್ನು ನೀಡಿರುವುದು ಒಳ್ಳೆಯ ಬೆಳವಣಿಗೆ ಇದನ್ನು ಎಲ್ಲರೂ ಪಾಲಿಸಬೇಕು ಅದೇ ರೀತಿ ಆರ್ಥಿಕವಾಗಿ ಸದೃಢರಾದವರು ಆ ಉಳಿತಾಯದ ಹಣವನ್ನು ತಮ್ಮ ನಡುವೆ ಇರುವಂತಹ ಸಮುದಾಯದ ಬಡ ಮಕ್ಕಳ ಶಿಕ್ಷಣಕ್ಕಾಗಿ ಸದ್ವಿನಿಯೋಗಗೊಳಿಸಬೇಕಾದ ದೃಢ ಸಂಕಲ್ಪವನ್ನು ಮಾಡಬೇಕಾಗಿದೆ ಎಂದು ವಿದ್ಯಾರ್ಥಿ ನಾಯಕ ಶೌವಾದ್ ಗೂನಡ್ಕರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಬೇಕೆಂಬ ಅಪೇಕ್ಷೆಯಿದ್ದರು ಕೂಡ ಆರ್ಥಿಕ ಸಂಕಷ್ಟದಿಂದ ಕೂಲಿ ಕೆಲಸಕ್ಕೆ ಹೋಗುವಂತಹ ಮುಸ್ಲಿಂ ಸಮುದಾಯದ ಅನೇಕ ಮಕ್ಕಳು ಹಾಗೂ ಯುವಕರು ನಮ್ಮ ನಿಮ್ಮ ನಡುವೆ ಇರಬಹುದು ಅಂತಹವರನ್ನು ಗುರುತಿಸಿ ಅವರಿಗೆ ಶೈಕ್ಷಣಿಕ ಪ್ರೋತ್ಸಾಹವನ್ನು ನೀಡುವ ಅಗತ್ಯವಿದೆ..ನಮ್ಮ ಸಮುದಾಯವು ಭವಿಷ್ಯದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಬೇಕಾಗಿದ್ದು, ಈ ನಿಟ್ಟಿನಲ್ಲಿ ಇಂತಹ ಸಣ್ಣ ಹೆಜ್ಜೆಗಳು ಕೂಡ ಮುಂದಕ್ಕೆ ಇತಿಹಾಸವನ್ನು ಸೃಷ್ಠಿಸಲು ಸಹಕಾರಿಯಾಗಲಿದೆ ಎಂದು ಶೌವಾದ್ ಗೂನಡ್ಕರವರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.