ಚಿಕ್ಕಮಗಳೂರು(ವಿಶ್ವಕನ್ನಡಿಗ ನ್ಯೂಸ್): ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ವತಿಯಿಂದ ಚಿಕ್ಕಮಗಳೂರು ನಗರಸಭೆಯ ಪೌರಕಾರ್ಮಿಕರಿಗೆ ಹಾಗೂ ನಗರಸಭೆಯ ಪೌರಾಯುಕ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪೌರಾಯುಕ್ತರು, ಇಂತಹ ಸಂದರ್ಭದಲ್ಲಿ ತೀರಾ ಹಿಂದುಳಿದ ಹಾಗೂ ಪ್ರತಿಯೊಬ್ಬರ ಮನೆಯ ಕಸವನ್ನು ವಿಲೇವಾರಿ ಮಾಡುವ ಪೌರಕಾರ್ಮಿಕರಿಗೆ ಸನ್ಮಾನ ಮಾಡುತ್ತಿರುವುದು ಹೆಮ್ಮೆಯ ವಿಷಯ.ಇದೇ ರೀತಿ ಹಸಿಕಸ ಹಾಗೂ ಒಣಕಸವನ್ನು ಬೇರ್ಪಡಿಸಲು ಸಾರ್ವಜನಿಕರಿಗೆ ನಿಮ್ಮ ಸಂಘಟನೆಯ ಮೂಲಕ ನಾನು ಮನವಿಯನ್ನು ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು.
ಎಐಎಂಡಿಎಫ್ ರಾಜ್ಯಾಧ್ಯಕ್ಷರಾದ ನಸೀರ್ ಅಹ್ಮದ್ ಮಾತನಾಡಿ,ಪೌರಕಾರ್ಮಿಕರು ನಮ್ಮ ಹೆತ್ತ ತಾಯಿ ಇದ್ದಂತೆ,ನಾವು ಮಾಡುವ ಗಲೀಜನ್ನು ನಮ್ಮ ಮನೆಯವರೇ ತೆಗೆಯಲು ಹಿಂಜರಿಯುತ್ತಾರೆ,ಆದರೆ ನೀವುಗಳು ಯಾವ ಹಿಂಜರಿಕೆಯೂ ಇಲ್ಲದೆ ಆ ಕೆಲಸವನ್ನು ಮಾಡುತ್ತೀರ ನಿಮಗೆ ಎಷ್ಟು ಕ್ರುತಜ್ಞತೆಯನ್ನು ಹೇಳಿದರೂ ಸಾಲದು,ಅಂದ ಹಾಗೆ ನಾವು ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದ್ದು,ಆದರೆ, ನಾನಿಂದು ಉಪವಾಸವಿರುವುದರಿಂದ ನಿಮ್ಮ ಜೊತೆಗೆ ಊಟ ಮಾಡಲು ಆಗುತ್ತಿಲ್ಲ,ಮುಂದೆ ಇನ್ನೊಮ್ಮೆ ಎಲ್ಲರೂ ಸೇರಿ ಒಟ್ಟಿಗೆ ಕುಳಿತು ಊಟಮಾಡೋಣ ಎಂದರು,ಡಾ:ಸುಂದರಗೌಡ ಮಾತನಾಡಿ,ನೀವೆಲ್ಲರೂ ತುಂಬಾ ಜಾಗರೂಕತೆಯಿಂದ ಕೆಲಸ ಮಾಡಬೇಕು ಏಕೆಂದರೆ, ಇಡೀ ಚಿಕ್ಕಮಗಳೂರಿಗೆ ನೀವೇ ಆಸ್ತಿ,ಈ ಕೋವಿಡ್19 ವೈರಸ್ ನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕೆಂದರು.
ಕರ್ನಾಟಕ ರಾಜ್ಯ ಏಕತಾ ವೇದಿಕೆ ಸಂಸ್ಥಾಪಕರಾದ ಅಫ್ಝಲ್ ಪಾಷ ಪ್ರಾಸ್ಥಾವಿಕವಾಗಿ ಮಾತನಾಡುತ್ತಾ ದೇಶದ ಗಡಿಯನ್ನು ಸೈನಿಕರು ಹೇಗೆ ಕಾಯುತ್ತಿರುವರೋ ಅದೇ ರೀತಿ ದೇಶ ಹಾಗೂ ದೇಶದ ಜನತೆ ಆರೋಗ್ಯವಾಗಿರಲು ಸ್ವಚ್ಛಂದವಾದ ನಗರವನ್ನು ನಿರ್ಮಿಸುತ್ತಿರುವುದು ಪೌರಕಾರ್ಮಿಕರು ,ಇಂತಹ ಪೌರ ಸೇವಕರನ್ನು ಗುರ್ತಿಸಿ ಸನ್ಮಾನಿಸುತ್ತಿರುವ ನಸೀರ್ ಅಹ್ಮದ್ ರವರಿಗೆ ಧನ್ಯವಾದಗಳನ್ನು ಹೇಳಿದರು.ಇದೇ ಸಂದರ್ಭದಲ್ಲಿ ಸುಮಾರು 20 ಪೌರಕಾರ್ಮಿಕರಿಗೆ ಸನ್ಮಾನಿಸಲಾಯಿತು ಹಾಗೂ ಎಲ್ಲಾ ಪೌರಕಾರ್ಮಿಕರಿಗೂ ಹಾಗೂ ನಗರಸಭೆಯ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ವೇದಿಕೆಯಲ್ಲಿ ಎಐಎಂಡಿಎಫ್ ರಾಜ್ಯ ಉಪಾಧ್ಯಕ್ಷರಾದ ಅಬೂಬಕ್ಕರ್ ಸಜೀಪ, ಅಂಬೇಡ್ಕರ್ ಪುತ್ಥಳಿ ನಿರ್ಮಾಣ ವೇದಿಕೆಯ ವೆಂಕಟೇಶ್,ಅಸ್ಗರ್ ಅಲಿ,ಅಬ್ದುಲ್ ರೆಹಮಾನ್,ಡ್ಯಾನಿಶ್,ಮೀರನ್ ಮೋಹಿಯುದ್ದೀನ್ ಖುರೇಶಿ,ದೀಪಕ್,ಎಹ್ತೆಶಾಮ್ ಮುಂತಾದವರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.