(www.vknews.com) : ಕರೋನಾ ನಂತರ ದೇಶದ ಸ್ಥಿತಿ – ಗತಿ ಬದಲಾಗಿದೆ ವಿಶ್ವ ಯುದ್ಧದ ನಂತರ ದೇಶ ಬದಲಾದಂತೆ ಇಂದು ಕೂಡ ದೇಶ ಬದಲಾಗಿದೆ ನಾವೆಲ್ಲಾರು ಆತ್ಮವಿಶ್ವಾಸದಿಂದ ಹೋರಾಟ ಮಾಡಲೇ ಬೇಕಾಗಿದೆ. ಕರೋನಾ ನಮಗೆಲ್ಲಾ ವಿಶಿಷ್ಟವಾದ ಪಾಠವನ್ನು ಕಲಿಸಿದೆ , ತಾನು ಬದುಕುವ ಜೊತೆಗೆ ಉಳಿದವರನ್ನು ಜೊತೆಗೆಳೆದುಕೊಳ್ಳಲೇ ಬೇಕಾಗಿದೆ.. “ಬದುಕೆಂದರೆ ನಮ್ಮನ್ನು ನಾವು ಕಂಡುಕೊಳ್ಳುವುದಲ್ಲ ನಮ್ಮನ್ನು ನಾವು ರೂಪುಸಿಕೊಳ್ಳುವುದಾಗಬೇಕಿದೆ “..!
ಜನರ ಜೀವ ಜೀವನ ಎರಡು ಮುಖ್ಯವಾಗಿರುವುದರಿಂದ ಲಾಕ್ದೌನ್ ಅಗತ್ಯವಿತ್ತು ಲಾಕ್ದೌನ್ ಈ ಜಗತ್ತಿನ ಇತಿಹಾಸವನ್ನೇ ಸಂಪೂರ್ಣವಾಗಿ ಬದಲಾಗಿಸಿ ಬಿಟ್ಟಿದೆ , ಕರೋನಾ ವೈರಸ್ ಲಾಕ್ದೌನ್ ಕಾರಣದಿಂದ ನೂರಾರು ಕೋಟಿ ಮಂದಿ ಮನೆಯಲ್ಲೇ ಇರುವಂತಾಗಿದೆ ಅನೇಕರಿಗೆ ಕೆಲಸವು ಇಲ್ಲವಾಗಿದೆ ರೈತರಿಗೆ , ಅನೇಕ ಸಣ್ಣ , ದೊಡ್ಡ ಉದ್ಯಮಿಗಳಿಗೆ ಸಾಕಷ್ಟು ನಷ್ಟವಾಗಿ ಸಂಪನ್ಮೂಲ ಕ್ರೋಡೀಕರಣ ಕಷ್ಟವಾಗಿ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಅನಗತ್ಯ ಖರ್ಚುಗಳಿಗೆ ತೆರೆಬಿದ್ದಿದೆ..
ಈ ನಿಟ್ಟಿನಲ್ಲಿ ಕರೋನಾ ಪಿಡುಗಿನಿಂದ ಉಂಟಾಗಿರುವ ಸಂಕಷ್ಟ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಸರಕಾರ ಪ್ಯಾಕೇಜ್ ಅಥವಾ ಬ್ಯಾಂಕಿಂಗ್ , ಸಂಬಂಧ ಪಟ್ಟ ಇಲಾಖೆಗೆ ವಹಿಸಿರುವುದು ಸ್ವಾಗತಾರ್ಹ.. ಲಾಕ್ದೌನ್ ನಿಂದ ಜನರ ಜೀವನ ಅಸ್ತವ್ಯಸ್ತವಾಗಿರುವುದು ಸತ್ಯ ಬಿಡುಗಡೆಯ ಹಣ ಜನಸಾಮಾನ್ಯರಿಗೆ ನ್ಯಾಯ ಬದ್ಧವಾಗಿ ಕೈ ಸೇರಬೇಕೆಂಬ ಕಳಕಳಿಯೂ ಇದೆ..
ನಮ್ಮ ದೇಶದಲ್ಲಿ ಭ್ರಷ್ಟಾಚಾರ ಸಾರ್ವತ್ರಿಕ ಎಂಬ ಕ್ರೂರ ಸಮಜಾಯಿಷಿಯೂ ಇದೆ ಜೊತೆಯಲ್ಲಿ ಒಂದು ರೀತಿ ಭ್ರಷ್ಟಾಚಾರ ಜಾರಿ ಮಾಡಿದ್ದೆ ನಮ್ಮ ದೇಶದಲ್ಲಿ ರಾಜಕಾರಣ ಎಂದರೆ ತಪ್ಪಲ್ಲ
ಅತೃಪ್ತಿಯೇ ಭ್ರಷ್ಟಾಚಾರದ ಮೂಲ..
ಈ ಲಾಕ್ದೌನ್ ನಿಂದ ಸಾಕಷ್ಟು ಜನರು ಬದುಕು ಹಾಗೂ ಭವಿಷ್ಯವನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ ಸಹಾಯ ಮಾಡಲು ಸರಕಾರ ಮುಂದಾಗಿದೆ.. ಆದರೆ ಆಯಾ ಇಲಾಖೆಗೆ ಹಾಗೂ ಸಂಬಂಧಪಟ್ಟ ರಾಜಕೀಯ ಹಾಗೂ ಸರಕಾರಿ ಅಧಿಕಾರಿಗಳು ಫಲಾನುಭವಿಗಳನ್ನು ಗುರುತಿಸಿ ಸಹಾಯ ಮಾಡವುದು ಮನುಷ್ಯ ಕುಲಕ್ಕೆ ಶೋಭೆ ಕೂಡ.. ” ಬಾಯಲ್ಲಿ ಘೋಷಣೆ ಬಗಲಲ್ಲಿ ಪೋಷಣೆ ” ಮಂತ್ರವನ್ನು ಜಪಿಸದೆ ಜನರ ಕಣ್ಣಿಗೆ ಮಂಕು ಬೂದಿ ಎರಚದೆ ಅಥವಾ ಜನರನ್ನು ಭಾವನಾತ್ಮಕ ಮಾತುಗಳಿಂದ ವಂಚಿಸದೆ ಪ್ರಾಮಾಣಿಕವಾಗಿ ದೇಶದ ಆರ್ಥಿಕ ಸ್ಥಿತಿಯನ್ನು ಮೇಲೆತ್ತಲು ಪ್ರಯತ್ನಿಸಿ . ” ದೇಶ ಬಾರಿ ಕಷ್ಟದಲ್ಲಿದೇ ಮುಂದೆ ಬದಲಾವಣೆಯಾಗಿ ಒಳ್ಳೆಯ ದಿನಗಳು ಬರಲಿವೆ ” ಎಂದು ಫಲಾನುಭವಿಗಳ ಮೆದುಳನ್ನು ತೊಳೆಯದೇ ಜನರ ಸಂಕಷ್ಟಗಳಿಗೆ ಮುಂದಾಗಿ ಆಯಾ ಇಲಾಖೆಗೆ ಸಂಬಂಧಪಟ್ಟವರು ಹಾಗೂ ಅದಕ್ಕಿಂತ ಹೆಚ್ಚಾಗಿ ಅವರು ಕೇಳುವ ದಾಖಲೆ ಕೊಡುವುದು ಜನಸಾಮಾನ್ಯರಿಗೆ ಕಷ್ಟವಿದೆ.. ಇದರಲ್ಲಿ ಬಹುತೇಕ ಹಣ ಬ್ಯಾಂಕಿಂಗ್ ವ್ಯವಸ್ಥೆ ಮುಖಾಂತರ ಸಂದಾಯವಾಗಿತ್ತದೆ. ಕೆಲವು ಸಾರಿ ಬ್ಯಾಂಕ್ ಗಳು ಕೂಡ ಶ್ರೀಮಂತರ ಪರವಾಗಿ ಇರುತ್ತವೆ.. ಅಸಂಘಟಿತ ವಲಯ , ಸೇವಾ ವಲಯ , ರೈತರು , ಕಾರ್ಮಿಕರು ಮತ್ತು ಕೋಟ್ಯಂತರ ಸಾಮಾನ್ಯ ಕುಟುಂಬಗಳು ಸಮಸ್ಯೆಯಲ್ಲಿದ್ದಾರೆ ಸರಕಾರ ನಿಜಕ್ಕೂ ಪ್ರಾಮಾಣಿಕವಾಗಿದ್ದರೆ ಜನಸಾಮಾನ್ಯರಿಗೆ ಬವಣೆಯಾಗದ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು . ತೆರಿಗೆ ಇಲಾಖೆ , ಕಂದಾಯ ಇಲಾಖೆ ,ಜಾರಿ ನಿರ್ದೇಶನಾಲಯ , ಭ್ರಷ್ಟಾಚಾರ ನಿಗ್ರಹದಳ ಇಂಥ ಮುಂತಾದ ಇಲಾಖೆಗಳನ್ನು ಬಲಪಡಿಸಿ ಸ್ವಾತಂತ್ರ್ಯ ಕೊಟ್ಟರೆ ಹಾಗೂ ಕಾರ್ಯಾಚರಣೆಯಲ್ಲಿ ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪ ಇರದಂತೆ ನೋಡಿಕೊಂಡರೆ ಭ್ರಷ್ಟಾಚಾರ ಒಂದಷ್ಟು ತಡೆಗಟ್ಟಲು ಸಾಧ್ಯವಿದೆ.. ಕೇಂದ್ರದಲ್ಲಿ ಲೋಕಪಾಲ ರಾಜ್ಯಗಳಲ್ಲಿ ಲೋಕಾಯುಕ್ತರನ್ನು ನೇಮಿಸಿ ಅವರಿಗೆ ಭ್ರಷ್ಟ ಅಧಿಕಾರಿ , ರಾಜಕಾರಣಿಗಳ ವಿರುದ್ಧ ಪ್ರಕರಣ ದಾಖಲಿಸಲು ಸಕಲ ಅಧಿಕಾರ ಕೊಟ್ಟರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಾಗಬಹುದು .. ರಾಜಕೀಯ ಪಕ್ಷಗಳು ಸ್ವೀಕರಿಸುವ ದೇಣಿಗೆಗಳ ವಿಚಾರದಲ್ಲಿ ಪಾರದರ್ಶಕತೆಯನ್ನು ಕಡ್ಡಾಯಗೊಳಿಸಿ ಭ್ರಷ್ಟಾಚಾರ ವಿರೋಧಿ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಲು ಬಹುದು ..
ಕೆ.ಜಿ.ಸರೋಜಾ ನಾಗರಾಜ್
ಸರಕಾರಕ್ಕೆ ಪ್ರಾಮಾಣಿಕತೆ ಮತ್ತು ಇಚ್ಛಾಶಕ್ತಿ ಎರಡು ಮುಖ್ಯವಾಗಬೇಕು .. ಭ್ರಷ್ಟಾಚಾರ ಕಾನೂನು ದೃಷ್ಟಿಯಲ್ಲಿ ಅಪರಾಧ ಅಧಿಕಾರಿಗಳು ಮಾಡುವ ಭ್ರಷ್ಟಾಚಾರದಿಂದ ಅವರಿಗಷ್ಟೇ ಅಲ್ಲದೆ ಸರಕಾರಕ್ಕೂ ಕೆಟ್ಟ ಹೆಸರು ಬರುತ್ತದೆ .. ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರು ಹೆಚ್ಛೆಚ್ಚು ಜಾಗೃತರಾಗಬೇಕು ಲಂಚ ಕೇಳಿದಾಗಲೇ ದೂರು ನೀಡಬೇಕು ನನ್ನೊಬ್ಬನಿಂದ ಏನು ಮಾಡಲು ಸಾಧ್ಯ ಕೇವಲ ನನ್ನಿಂದ ಸಮಾಜ ಬದಲಾಗುವುದಿಲ್ಲವೆಂದು ಸುಮ್ನನೆ ಕೂರಬಾರದು.. ಉತ್ತಮ ಪ್ರೆಜೆಯಾಗಿ ದೇಶದ ಹಿತವನ್ನು ಬಯಸಿ. ಸರಕಾರದ ಸವಲತ್ತುಗಳನ್ನು ನ್ಯಾಯವಾದ ರೀತಿಯಲ್ಲಿ ಉಪಯೋಗಿಕೊಂಡು ದೇಶದ ಹಿತವನ್ನು ರೂಪಿಸಿಕೊಳ್ಳುವುದಾಗಬೇಕಿದೆ…
ಕೆ.ಜಿ.ಸರೋಜಾ ನಾಗರಾಜ್ ಪಾಂಡೋಮಟ್ಟಿ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.