ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಅಪ್ರಾಪ್ತ ಮುಸ್ಲಿಂ ಬಾಲಕ ರವೂಫ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಪಾಲಕರಾಗಿ ಇಲ್ಲಿನ ಪೋಲೀಸರು ವರ್ತಿಸಬೇಕೆಂದೂ, ಸಂತ್ರಸ್ತ ಬಾಲಕನಿಗೆ ನ್ಯಾಯ ಒದಗಿಸಿ ಕೊಡಬೇಕೆಂದೂ, ಹಲ್ಲೆ ನಡೆಸಿದ ರಿಲಾಯನ್ಸ್ ಸಿಬ್ಬಂದಿಗಳ ವರ್ತನೆಯನ್ನು ಬಲವಾಗಿ ಖಂಡಿಸುತ್ತೇವೆ” ಎಂದೂ ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಇದರ ಜಿಲ್ಲಾಧ್ಯಕ್ಷ ಇಸ್ಮಾಈಲ್ ಶಾಫಿ ಬಬ್ಬುಕಟ್ಟೆ ಕರೆ ನೀಡಿದ್ದಾರೆ.
ರಿಲಾಯನ್ಸ್ ಸಿಬ್ಬಂದಿಗಳ ಈ ದುಂಡಾವರ್ತನೆಯು, ಜಿಲ್ಲೆಯಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿದೆಯೇ ಎಂಬ ಸಂಶಯ ಕಾಡುತ್ತಿದೆ ಎಂದು ಹೇಳಿದ ಅವರು ಹಲ್ಲೆಕೋರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಂಘಟನೆಯ ಗೌರವಾಧ್ಯಕ್ಷ ಡಿ.ಐ. ಅಬೂಬಕರ್ ಕೈರಂಗಳ, ಉಪಾಧ್ಯಕ್ಷ ಮುನೀರ್ ಅಸೈಗೋಳಿ, ಸಂಘಟನಾ ಕಾರ್ಯದರ್ಶಿ ಕರೀಂ ಬೊಳ್ಳಾಯಿ, ಕಾನೂನು ಕಾರ್ಯದರ್ಶಿ ಆರ್ಕೆ ಮದನಿ, ಕೋಶಾಧಿಕಾರಿ ಸಿದ್ದೀಕ್ ಕೊಳಕೆ, ಸಂಚಾಲಕ ಮೆಗಾ ಸಲೀಂ, ಕಾರ್ಯಕಾರಿ ಸಮಿತಿ ಸದಸ್ಯ ಅಬ್ದುಲ್ ಅಝೀಝ್ ಝುಹ್ರೀ ಪುಣಚ, ಮಾಧ್ಯಮ ಕಾರ್ಯದರ್ಶಿ ಕುರ್ನಾಡು ಸಖಾಫಿ ಮುಂತಾದವರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.