(www.vknews.com) : ನಮ್ಮ ನೆರೆ ರಾಷ್ಟ್ರಗಳು ಯಾವುದೇ ಆದರೂ ನಮ್ಮನ್ನು ಕೆದಕಲು ಬಂದರೆ ತಕ್ಕ ಶಾಸ್ತಿ ನೀಡಿ ಪಾಠ ಕಲಿಸಲು ಸರಕಾರ ಮುಂದೆ ಬರಬೇಕೆಂದೂ ನಮ್ಮ ಮೇಲೆ ಅತಿಕ್ರಮಣ ಮಾಡುತ್ತಿರುವುದು ಪಾಕಿಸ್ತಾನ ಆದರೆ ಮಾತ್ರ ಅದನ್ನು ವೈಭವೀಕರಿಸಿ ರಾಜಕೀಯ ಲಾಭ ಪಡೆಯುವುದನ್ನು ಬಿಟ್ಟು ಚೀನಾ ಅಥವಾ ನೇಪಾಲ ನಮ್ಮ ದೇಶದ ತಂಟೆಗೆ ಬಂದರೂ ಪಾಕಿಸ್ತಾನದೊಂದಿಗೆ ವರ್ತಿಸುವ ಅದೇ ಶೌರ್ಯದೊಂದಿಗೆ ಮುಂದೆಜ್ಜೆ ಇಡಲು ಕೇಂದ್ರ ತಯಾರಾಗಬೇಕೆಂದು ರಾಜ್ಯ ದಾರಿಮಿ ಉಲಮಾ ಒಕ್ಕೂಟ ಒತ್ತಾಯಿಸಿದೆ.
ಈಗಾಗಲೇ ನಮ್ಮ ಹಲವು ಯೋಧರು ಚೀನಾದ ಪುಂಡಾಟಿಕೆಯ ಕಾರಣ ಹುತಾತ್ಮರಾಗಿದ್ದು ಈ ಬಗ್ಗೆ ಕೂಡಲೇ ಸರಕಾರ ಎಚ್ಚೆತ್ತು ಪ್ರತಿಕಾರ ತೀರಿಸಲು ಮುಂದೆ ಬರಬೇಕಾಗಿದೆ ಎಂದು ಒಕ್ಕೂಟ ಅಭಿಪ್ರಾಯ ಪಟ್ಟಿದೆ.
ಚೀನಾದ ದುಷ್ಟತನಕ್ಕೆ ಭಾರತೀಯ ಸೇನೆಯು ದಿಟ್ಟ ಉತ್ತರವನ್ನು ನೀಡುತ್ತಿರುವ ಬಗ್ಗೆ ವರದಿಗಳು ಬರುತ್ತಿದ್ದು 1962 ರಲ್ಲಿ ಚೀನಾ ವಶಪಡಿಸಿಸಿಕೊಂಡ ಭಾರತ ಭೂಭಾಗವನ್ನು ಪುನಃ ವಶಪಡಿಸುವುದರೊಂದಿಗೆ ಚೀನಾದ ಕುತಂತ್ರಕ್ಕೆ ಅಂತ್ಯ ಹಾಡಬೇಕಾಗಿದೆ. ದೇಶಕ್ಕಾಗಿ ಜೀವದ ಹಂಗು ತೊರೆದು ಹೋರಾಡುತ್ತಿರುವ ಸೇನೆಗೆ ನೈತಿಕ ಬೆಂಬಲ ಸೂಚಿಸುವ ಸಲುವಾಗಿ ಪ್ರತೀ ಮಸೀದಿಗಳಲ್ಲಿ ಯೋದರ ಕ್ಷೇಮಾಭಿವೃದ್ದಿಗಾಗಿ ಪ್ರಾರ್ಥಿಸಲು ಒಕ್ಕೂಟ ಕರೆ ನೀಡಿದೆಯಲ್ಲದೇ ಚೀನಾದ ಉತ್ಪನ್ನಗಳನ್ನು ದೇಶಬಾಂದವರು ಬಹಿಷ್ಕರಿಸುವ ಮೂಲಕ ದೇಶಪ್ರೇಮ ಮೆರೆಯಬೇಕೆಂದು ಉಲಮಾ ಒಕ್ಕೂಟ ಅಭಿಪ್ರಾಯ ಪಟ್ಡಿದೆ.
ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗ ಬೇಕೆಂದು ದಾರಿಮಿ ಉಲಮಾ ಒಕ್ಕೂಟ ವು ಸರಕಾರವನ್ನು ಒತ್ತಾಯಿಸಿದೆ.
ಅದ್ಯಕ್ಷರು ಮತ್ತು ಸರ್ವ ಸದಸ್ಯರು ರಾಜ್ಯ ದಾರಿಮಿ ಉಲಮಾ ಒಕ್ಕೂಟ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.