(www.vknews.in) ಪುತ್ತೂರು:-ಪುತ್ತೂರು ಇಲ್ಲಿನ ಗೃಹರಕ್ಷಕದಳ ಘಟಕಕ್ಕೆ ರವಿವಾರಬೆಳಿಗ್ಗೆ 8.30 ಗೆ ಜಿಲ್ಲಾ ಸಮಾದೇಷ್ಟರಾದ ಡಾ||ಮುರಲೀ ಮೋಹನ್ ಚೂಂತಾರುರವರುಭೇಟಿ ನೀಡಿ ಪುತ್ತೂರು ಘಟಕದ ಗೃಹರಕ್ಷಕರಾದ ಜಗನ್ನಾಥ ಪಿ (440) ಇವರಿಗೆ ಸೆಕ್ಷನ್ ಲೀಡರ್ ಶ್ರೇಣಿಯಿಂದ ಸಾರ್ಜೆಂಟ್ ಶ್ರೇಣಿಗೆ ಪದೋನ್ನತಿಯನ್ನು ಗೃಹರಕ್ಷಕದಳದ ಜಿಲ್ಲಾ ಸಮಾದೇಷ್ಟರು ಆದೇಶ ಪತ್ರ ನೀಡುವ ಮೂಲಕ ಹಸ್ತಾಂತರ ಮಾಡಿದರು
ಹಾಗೂ ಕೊರೋನಾ ಸಂಧರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಗೃಹರಕ್ಷಕರಿಗೆ ಅಭಿನಂದನೆ ಸಲ್ಲಿಸಿದರು ಈ ವೇಳೆಗೆ ಪುತ್ತೂರು ಘಟಕಾಧಿಕಾರಿ ಅಭಿಮನ್ಯು ರೈ,ಪ್ರಭಾರ ಘಟಕಾಧಿಕಾರಿ ಸಂತೋಷ್ ಹಾಗೂ ಘಟಕದ ಸಿಬ್ಬಂದಿ ಉಪಸ್ಥಿತರಿದ್ದರು
ಇದೆ ಸಂದರ್ಭದಲ್ಲಿ ಜಿಲ್ಲಾ ಕಮಾಡೆಂಟ್ ಡಾ||ಮುರಲೀ ಮೋಹನ್ ಚೂಂತಾರು ಹಾಗೂ ಪುತ್ತೂರು ಘಟಕಾಧಿಕಾರಿ ಆಭಿಮಣ್ಯ ರೈ ಗೃಹರಕ್ಷಕದಳದ ಪುತ್ತೂರು ಘಟಕದ ಕಚೇರಿಗೆ ಸರಕಾರಿ ಸ್ಥಳ ಮಂಜೂರು ಮಾಡಲು ತಾಲೂಕು ಶಾಸಕರಾದಂತಹ ಮಾನ್ಯ ಸಂಜೀವ ಮಠಂದೂರು ಇವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.